ಕೇಂದ್ರದ ವಿರುದ್ಧ ಕಾಂಗ್ರೇಸ್ ಮೌನ ಪ್ರತಿಭಟನೆ.
ಹೊಸಪೇಟೆ ಜುಲೈ.13
ದಿನಾಂಕ 12.07.2023 ರಂದು ಡಾ.ಬಿ.ಅರ್ ಅಂಬೇಡ್ಕರ್ ಸರ್ಕಲ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮೌನ ಪ್ರತಿಭಟನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಒಳತಿಗಾಗಿ ನ್ಯಾಯ ಮತ್ತು ಸತ್ಯದ ಮಾರ್ಗದಲ್ಲಿ ಹೋರಾಟ ನಡೆಸಿದ್ದಾರೆ. ಆದರೆ, ಕೇಂದ್ರ ಸರ್ಕಾರದ ದ್ವೇಷ ರಾಜಕಾರಣದಿಂದ ರಾಹುಲ್ ಗಾಂಧಿ ಅವರನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ಶೇಖ್ ಆಕ್ರೋಶ ವ್ಯಕ್ತಪಡಿಸಿದರು.ಸಂಸತ್ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ಕೇಂದ್ರ ಸರ್ಕಾರದ ನಡೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬುಧವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮೌನ ಧರಣಿ ಉದ್ದೇಶಿಸಿ ಮಾತನಾಡಿದರು. ಉದ್ಯಮಿ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಂದೇ ವಿಮಾನದಲ್ಲಿ ವಿದೇಶಿಕ್ಕೆ ತೆರಳುವುದು. ಇಲ್ಲವೇ ಒಂದು ದಿನ ಆಚೀಚೆ ಪ್ರಯಾಣ ಮಾಡಿರುವ ಬಗ್ಗೆ ದಾಖಲೆ ಸಮೇತ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಏಕಕಾಲಕ್ಕೆ ಒಂದೇ ರಾಷ್ಟ್ರದ ಭೇಟಿಯ ಉದ್ದೇಶವೇನು ಎಂದು ಹಲವು ಬಾರಿ ಖಾರವಾಗಿ ಪ್ರಶ್ನಿಸಿದ್ದರು. ರಾಹುಲ್ ಗಾಂಧಿ ಅವರಆರೋಪಗಳಿಗೆ ಉತ್ತರಿಸಲಾಗದೆ ಬಿಜೆಪಿ ನಾಯಕರನ್ನು ಇಲ್ಲಸಲ್ಲದ ಆರೋಪ ಹೊರಿಸಿ, ಸದಸ್ಯತ್ವವನ್ನು ರದ್ದುಗೊಳಿಸಿರುವುದು ಹೇಡಿತನ ಎಂದು ಟೀಕಿಸಿದರು

.ವೈನಾಡಿನ 5ಲಕ್ಷ ಮತದಾರರ ಬೆಂಬಲದೊಂದಿಗೆ ರಹುಲ್ ಗಾಂಧಿ ಆಯ್ಕೆಯಾಗಿದ್ದಾರೆ. ಅದನ್ನೂ ಲೆಕ್ಕಿಸದೆ, ಬಿಜೆಪಿಯವರು ಅಹರ್ನಗೊಳಿಸಿದ್ದಾರೆ. ಇಂತಹ ಗೊಡ್ಡು ಬೆದರಿಕೆಗೆ ರಾಹುಲ್ ಹೆದರುವ ಅಗತ್ಯವಿಲ್ಲ. ಅವರ ಸೇವೆ ಈ ದೇಶಕ್ಕೆ ಅಗತ್ಯವಿದ್ದು, ಇಡೀ ಕಾಂಗ್ರೆಸ್ ಅವರ ಬೆಂಬಲಕ್ಕಿದೆ ಎಂದು ಹೇಳಿದರು.ಬಳಿಕ ಸಂಜೆ 5 ಗಂಟೆ ವರೆಗೆ ಕಾಂಗ್ರೆಸ್ನಿಂದ ಮೌನ | ಪ್ರತಿಭಟನಾ ಧರಣಿ ಮುಂದುವರಿಯಿತು. ಧರಣಿಯಲ್ಲಿಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್, ಉಪಾಧ್ಯಕ್ಷ ಕೆ.ಎಂ.ಹಾಲಪ್ಪ, ಪಿ.ಎಚ್.ದೊಡ್ಡರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಲೂರು ಅಂಜಿನಪ್ಪ, ವಿನಾಯಕ ಶೆಟ್ಟರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಸೇವಾದಳ ಜಿಲ್ಲಾ ಸಂಘಟಕ ಬಿ.ಮಾರೆಣ್ಣ, ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷ ಡಿ.ವೆಂಕಟರಮಣ, ಪ್ರಚಾರ ಸಮಿತಿ ರಾಜ್ಯ ಸಂಚಾಲಕ ಬಣ್ಣದ ಮನೆ ಸೋಮಶೇಖರ್,ಜಿಲ್ಲಾ ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷ ಎಚ್. ಮಹೇಶ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಸ್ಲಾಂ ಮಾಳಗಿ, ಹೊಸಪೇಟೆ ಮಹಿಳಾ ಘಟಕ ಯೋಗಲಕ್ಷ್ಮೀ, ಬಾನುಬೀ, ಶಿಲ್ಪಾ, ರುಕ್ಸಾನಾ, ಅನಿತಾ ರಾಣಿ, ಅಯೇಶಾ, ನಾಗಮ್ಮ, ಅಮೀನಾ, ಸಲ್ಮಾ ಬೇಗ ಮತ್ತಿತರರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ