ವಿಜ್ರಂಭಣೆಯಿಂದ ನಡೆದ ವೀರಭದ್ರೇಶ್ವರ ಜಾತ್ರೆ ಜರುಗಿತು.

ಕಂದಗಲ್ಲ ಜನೇವರಿ.10

ಅದ್ದೂರಿಯಾಗಿ ಶ್ರೀ ವೀರಭದ್ರೇಶ್ವರ ರಥೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತಾದಿಗಳು ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಅಧಿದೇವ ಶ್ರೀ ವೀರಭದ್ರೇಶ್ವರ ರಥೋತ್ಸವ ಅದ್ದೂರಿಯಾಗಿ ಜರುಗಿತು. ಸಾವಿರಾರು ಭಕ್ತರ ಜಯ ಘೋಷಣೆಗಳ ಮಧ್ಯೆ ರಥೋತ್ಸವ ಅದ್ದೂರಿಯಾಗಿ ನಡೆಯಿತು.ನಂದವಾಡಗಿ ಮಹಾಂತೇಶ್ವರ ಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯರು ಕುದುರಿಮೋತಿ ಮೈಸೂರ್ ಸಂಸ್ಥಾನ ಮಠದ ವಿಜಯ ಮಹಾಂತ ಶಿವಯೋಗಿಗಳು ಕಂದಗಲ್ ರುದ್ರಸ್ವಾಮಿ ಸುವರ್ಣ ಗಿರಿ ಮಠದ ಡಾ. ಚನ್ನಮಲ್ಲ ಮಹಾಸ್ವಾಮಿಗಳು ಹಾಲಕೇರಿ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಗುಡದೂರು ನೀಲಕಂಠಾರ್ಯ ತಾತನವರು ಕಂಬಳಿಹಾಳ ಸಜ್ಜಲಗುಡ್ಡ ಮಠದ ದೊಡ್ಡ ಬಸವಾರ್ಯ ತಾತನವರ ಸಾನಿಧ್ಯ ಭಕ್ತರ ಆವಭಾವಗಳನ್ನು ಅಧ್ಯಾತ್ಮದೆಡೆಗೆ ಕರೆದೋಯ್ದಿತ್ತು.ರಥದ ಮೆರಗು ಬೃಹತ್ ರುದ್ರಾಕ್ಷಿ ಮಾಲೆ ಹೂವಿನ ಹಾರಗಳಿಂದ ರಥದೊಳಗೆ ಕಟ್ಟಿದ ರುದ್ರಾಕ್ಷಿ ಗುಚ್ಚಗಳು ರಥದ ಅಂದ ಹೆಚ್ಚಿಸಿತ್ತು ಮತ್ತು ರಥಕ್ಕೆ ಕಟ್ಟಿದ ಸುಮಾರು 3500 ಸಣ್ಣ ಗಂಟೆಗಳ ನಾದ ಅತ್ಯಾತ್ಮಿಕ ಪಥದತ್ತಿತ್ತು ಆದರೆ ರಥದ ಭಾರವನ್ನು ಹೆಚ್ಚಿಸಿತ್ತು ಆದರೆ ರಥದ ಭಾರ ಭನಕ್ಕೆ ಹರಡಿತ್ತೇ ಹೊರತು ಭಕ್ತಾಧಿಗಳಿಗಲ್ಲ ಎನ್ನುವ ಹುಮ್ಮಸ್ಸಿನಲ್ಲಿದ್ದ ಭಕ್ತಾದಿಗಳು ಹರ್ಷೋದ್ಗಾರದ ಜಯ ಘೋಷಗಳನ್ನು ಕೂಗುತ್ತ ರಥೋತ್ಸವವನ್ನು ಮುನ್ನೆಡೆಸಿದರು. ಉಚ್ಚಯ್ಯ,ನಂದಿಕೋಲು, ಕರಡಿ ಮಜಲು, ಶಹನಾಯಿ, ಮತ್ತು ವೀರಗಾಸೆ ವಿರೋಚಿತ ನೃತ್ಯ ಕಲೆಯ ಪ್ರದರ್ಶನದ ಜೊತೆಗೆ ಹಲವು ಮಂಗಳವಾದ್ಯಗಳು ರಥೋತ್ಸವದ ಮೆರಗನ್ನು ಮತ್ತಷ್ಟು ಹೆಚ್ಚಿಸಿದ್ದವು. ವರ್ಷಕ್ಕೊಮ್ಮೆ ಜರಗುವ ರಥೋತ್ಸವವನ್ನು ವೀಕ್ಷಿಸಲು ದೂರದ ವಿಜಯಪುರ, ದಾವಣಗೆರೆ, ಬೆಂಗಳೂರು, ಬಾಗಲಕೋಟೆ, ಲಿಂಗಸುಗೂರು, ಸಿಂಧನೂರು, ಗಂಗಾವತಿ, ಕೊಪ್ಪಳ, ಮಸ್ಕಿ, ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯಗಳಿಂದಲೂ ಸುತ್ತ ಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಆಗಮಿಸಿ ವೀರಭದ್ರ ರಥೋತ್ಸವಕ್ಕೆ ಉತ್ತತ್ತಿ, ಚುರುಮುರಿ, ಬೆಂಡು ಬೆತ್ತಾಸು ಎಸೆದು ಹರಕೆ ಹೊತ್ತ ಭಕ್ತರು ಹರಕೆ ತೀರಿಸಿ ಭಕ್ತಿ ಸಮರ್ಪಿಸಿದರು.ಎರಡು ದಿನ ಜಾತ್ರೆಯಲ್ಲಿ ಯಾತ್ರಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅನ್ನ ಸಂತರ್ಪಣೆ ನಿರಂತರವಾಗಿ ನಡೆಯಿತು ಜಾತ್ರೆ ನಿಮಿತ್ತ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೀಡ ನಮಸ್ಕಾರ ಗಣಾರಾಧನೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ನಡೆಸಿ ಹರಕೆ ತೀರಿಸಿದರು. ಒಟ್ಟಾರೆಯಾಗಿ ವರ್ಷಕ್ಕೊಮ್ಮೆ ನಡೆಯುವ ಈ ರಥೋತ್ಸವ ಅದ್ದೂರಿಯಾಗಿ ನಡೆದು ಭಕ್ತರ ಕಣ್ಮಣ ಸೆಳೆಯಿತು ಹಾಗೂ ಗ್ರಾಮದಲ್ಲಿ ಆಧ್ಯಾತ್ಮಿಕ ನೆಲೆಗೆ ಸಾಕ್ಷಿಯಾಯಿತು ಎಂದು ಭಕ್ತಾದಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಜಾತ್ರೆಯನ್ನು ಅದ್ದೂರಿಯಾಗಿ, ಸುರಕ್ಷಿತವಾಗಿ ಮತ್ತು ಅವಿಸ್ಮರಣೀಯವಾಗಿ ನಡೆಸಿದ ಶ್ರೀ ವೀರಭದ್ರೇಶ್ವರ ಜಾತ್ರಾ ಸಮಿತಿಗೆ ಮತ್ತು ಭದ್ರತೆಯನ್ನು ಕಾಪಾಡಿದ ಎಲ್ಲಾ ಸಿಬ್ಬಂದಿಗಳಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿ.ಇಲಕಲ್

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button