ಎಚ್.ಎಮ್ ನಾಗಣಸೂರ ಅವರಿಗೆ – ಗ್ರಾಮಸ್ಥರು ಹಾಗೂ ನೌಕರರ ವತಿಯಿಂದ ಸನ್ಮಾನ.

ಅರ್ಜುಣಗಿ ಬಿ.ಕೆ ಏ.17

ಇಂಡಿ ತಾಲೂಕಿನ ಅರ್ಜುಣಗಿ ಬಿಕೆ ಗ್ರಾಮದಲ್ಲಿ ನಿನ್ನೆ ನಡೆದ ಶ್ರೀ ಗೈಭೀಪೀರ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಯಲು ಮುಖ್ಯ ರೂವಾರಿಗಳಾದ ಎಚ್.ಎಮ್ ನಾಗಣಸೂರ ಅವರಿಗೆ ಗ್ರಾಮಸ್ಥರ ನೌಕರರ ವತಿಯಿಂದ ಸನ್ಮಾನಿಸಲಾಯಿತು. 82 ಜನ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿದರು. ರಕ್ತದಾನ ಶಿಬಿರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕ ಬೇವನೂರ ವೈದ್ಯಾಧಿಕಾರಿಗಳಾದ ಡಾ, ಪ್ರಶಾಂತ ದೂಮಗೊಂಡ, ಡಾ, ವೈ.ಎಂ ಪೂಜಾರಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾಗಳು, ಡಾ, ಎಸ್.ಎಚ್ ಅತನೂರ, ಡಾ, ಸದ್ದಾಮ್ ಹುಸೇನ್, ಸಮುದಾಯ ಆರೋಗ್ಯ ಅಧಿಕಾರಿಗಳು, ಡಾ, ಶ್ರೀಮತಿ ತಮಿನಾ ಶೇಖ ಆರೋಗ್ಯ ಸುರಕ್ಷಾ ಅಧಿಕಾರಿಗಳು, ಡಾ, ಮಾರುತಿ ಆರೋಗ್ಯ ನೀರಿಕ್ಷಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ರಕ್ತದಾನ ಶಿಬಿರವನ್ನು ಯಶಸ್ವಿ ಗೊಳಿಸಿದಕ್ಕೆ ತಮ್ಮೆಲ್ಲರಿಗೂ ಊರಿನ ಗ್ರಾಮಸ್ಥರು ನೌಕರರು ಪರವಾಗಿ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು. ಎಚ್.ಎಮ್ ನಾಗಣಸೂರ ಅವರಿಗೆ ಗ್ರಾಮಸ್ಥರು ನೌಕರರು ಸನ್ಮಾನಿಸಿದರು ಈ ಸಂದರ್ಭದಲ್ಲಿ ರಾಚಯ್ಯ ಹಿರೇಮಠ, ಗಂಗಾಧರ ತಾವರಖೇಡ, ಶಿಕ್ಷಕರು, ನಾಗೇಶ ಅಂಗಡಿ, ಶಿಕ್ಷಕರು, ದಾವಲಸಾಬ ಮುಲ್ಲಾ, ಗ್ರಾಮ ಆಡಳಿತಾ ಅಧಿಕಾರಿ, ಶಿವಶರಣ ರಾಂಪುರ, ಶಿವಾನಂದ ಮಾಶ್ಯಾಳ, ಬಾಪುಗೌಡ ಪಾಟೀಲ, ಅಶೋಕ ಬಾಗೇವಾಡಿ, ಶಿಕ್ಷಕರು, ಬಸವರಾಜ ಪೂಜಾರಿ ಪೊಲೀಸ್ ಇಲಾಖೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button