“ಕರುನಾಡಿನ ನಾಡಹಬ್ಬ”…..

ದಸರಾ ಕರ್ನಾಟಕದ ನಾಡಿನ ಹಬ್ಬವು

ಎಲ್ಲೆಡೆ ವಿಜಯ ದಶಮಿಯ ಸಂಭ್ರಮವು

ಬಂದಿದೆ ನವರಾತ್ರಿಗಳ ವಿಶೇಷ ಕ್ಷಣವು

ಕೈಬೀಸಿ ಕರೆಯುತ್ತಿದೆ ಮೈಸೂರು ನಗರವು

ಚಾಮುಂಡಿ ದೇವಿಯ ಮೂರ್ತಿ

ಮೆರವಣಿಗೆಯು

ಇಡೀ ವಿಶ್ವಕ್ಕೆ ಆಗಿದೆ ಪ್ರಸಿದ್ಧಿಯು

ಮತ್ತೆ ನೆನಪಿಸುತ್ತಿದೆ ರಾಜ ಪರಂಪರೆಯು

ನೋಡ ಬನ್ನಿರಿ ಸಾಂಸ್ಕೃತಿಕ ನಗರಿಯು

ಒಳ್ಳೆಯ ವಿಜಯವನ್ನು ಗುರುತಿಸುವ ದಿನವು

ನಡೆಯಲಿದೆ ಜಂಬೂ ಸವಾರಿಯ ಯಾತ್ರೆಯು

ಮಲ್ಲಗಂಬ ಕುಸ್ತಿಯ ರೋಮಾಂಚನದ

ದಸರೆಯು

ಕಾಪಾಡಲಿ ಎಲ್ಲರನು ಶಕ್ತಿ ದೇವತೆಯು

ಮೈಸೂರು ದಸರಾ ಸಂಭ್ರಮ ಸುಂದರ

ಒಂಬತ್ತು ದಿನವೂ ವಿಶೇಷ ಸಡಗರ

ಮೈಸೂರ ಪಾಕ ತಿನ್ನಿರಿ ರುಚಿಕರ

ಕೂಗಿ ಹೇಳಿ ಚಾಮುಂಡಿಗೆ ಜೈಕಾರ

ವಿಜಯನಗರ ಅರಸರ ಕಾಲದಲ್ಲಿ ಆರಂಭವು

ರಾಜ ದರ್ಬಾರು ಒಳಗೊಂಡಿರುವ ಉತ್ಸವವು

ಐತಿಹಾಸಿಕ ದಿನಗಳ ನೆನಪಿನ ಹಬ್ಬವು

ಚಿನ್ನದ ಅಂಬಾರಿಯಿಂದ ಜಗತ್ಪ್ರಸಿದ್ಧಿಯು

ಮಹಿಷಾಸುರ ರಾಕ್ಷಸನ ಸಂಹಾರವ ಅರಿಯಿರಿ

ಅರಮನೆಯ ಸಂಪೂರ್ಣ ಮಾಹಿತಿ ತಿಳಿಯಿರಿ

ಆಯುಧ ಪೂಜೆಯ ಖುಷಿಯಲ್ಲಿ ಮಾಡಿರಿ

ಬನ್ನಿಕೊಟ್ಟು ಬಂಗಾರದ ಹಾಗೆ ಬಾಳಿರಿ

ಶ್ರೀ ಮುತ್ತು ಯ ವಡ್ಡರ ಶಿಕ್ಷಕರು

ಬಾಗಲಕೋಟ 9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button