“ಸುಮನದವ ವಿಶ್ವ ಮಾನವ ರತ್ನ”…..

ಮನಸ್ಸೇ ನಿಜ ಮಿತ್ರ
ಮೋಸ ಅರಿಯದ ಮನ
ಸತ್ಯ ಮರೆ ಮಾಚದ
ನೇರ ನಿಷ್ಟುರದ
ಸಿಂಹ ಗರ್ಜನೆಯ ಗತ್ತು
ಗಜಕೇಸರಿ ನಿಯತ್ತು
ಆತ್ಮ ಹೃದಯ ಅರಳುವ
ಹೂವುಗಳ ಶುದ್ಧತೆ ಭಾವ
ಮನ ಬೇದ ಅರಿಯದು
ಸಿರಿತನ ಬಡತನ ಮನ
ಸಮಾನ ಗುಣ ತೋರುವ
ಅಹಂ ಶತ್ರು ಸೋಲಿಸುವ
ಶುದ್ಧ ಮನದವ ಜಗದ
“ಸುಮನದವ ವಿಶ್ವಮಾನವ ರತ್ನ”
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.