ನಿರಂತರ ಅಭ್ಯಾಸ ಮತ್ತು ಛಲದಿಂದ ಗುರಿ ಮುಟ್ಟಲು ಸಾಧ್ಯ.
ಹೀರೆಕುಂಬಳಗುಂಟೆ ನವೆಂಬರ್.29

ಮಕ್ಕಳು ಪ್ರತಿದಿನ ನಿರಂತರ ಅಭ್ಯಾಸ ಮಾಡಿ ಹಾಗೂ ದಿನವೂ ಹೊಸತನದಿಂದ ಕಲಿಯಬೇಕು ಹಾಗೂ ಗುರುಗಳು ಹೇಳಿದ ಪಾಠಗಳನ್ನು ಮನನ ಮಾಡಿಕೊಂಡು, ಆ ದಿನದ ಕೆಲಸಗಳನ್ನು ನಾಳೆ ಮಾಡುತ್ತೇನೆ ಎಂದು ಮುಂದಕ್ಕೆ ಹಾಕದೆ ಆದೇ ದಿನವೇ ಮಾಡಿದಾಗ ಜೀವನದಲ್ಲಿ ಯಶಸ್ವಿ ಮನುಷ್ಯನಾಗಲು ಸಾಧ್ಯ.

ಎಂದು ಸರ್ಕಾರಿ ಪ್ರೌಢಶಾಲೆ ಹೀರೆಕುಂಬಳಗುಂಟೆಯ ಭೂದಾನಿಗಳಾದ ಶ್ರೀ ಹಿ. ಮ ನಾಗಯ್ಯ ರವರ ಮಗನಾದ ಬೆಂಗಳೂರಿನ ಉದ್ಯಮಿ ಶ್ರೀ ಹರ್ಷರವರು ಶ್ರೀ ಹಿ. ಮ ನಾಗಯ್ಯ ಸರ್ಕಾರಿ ಪ್ರೌಢಶಾಲೆ ಹೀರೆಕುಂಬಳಗುಂಟೆ ಶಾಲೆಗೆ ಭೇಟಿ ನೀಡಿ, ತಾವೇ ಕಟ್ಟಿಸಿದ ಸುಮಾರು 10 ಲಕ್ಷ ರೂಪಾಯಿ ವೆಚ್ಚದ ಶೌಚಾಲಯ, ಕುಡಿಯುವ ನೀರಿನ ಘಟಕ ಪರಿಶೀಲಿಸಿ ಮಕ್ಕಳಿಗೆ ಸಂವಾದ ನಡೆಸಿದರು. ಹಾಗೂ ಅವರ ಧರ್ಮಪತ್ನಿರಾದ ಶ್ರೀಮತಿ ಮಮತಾ ಇವರು ಮಾತನಾಡಿ ಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ಉತ್ತಮ ಸ್ನೇಹಿತರನ್ನು ಮಾಡಿ ಕೊಳ್ಳಬೇಕೆಂದು, ಹಾಗೂ ಜೀವನದಲ್ಲಿ ಉತ್ತಮ ಅಭ್ಯಾಸಗಳನ್ನು ರೂಢಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಸುಜಾತಾ, ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾಗರತ್ನಮ್ಮ ಶಿಕ್ಷಕರಗಳಾದ ಜ್ಯೋತಿ, ರೇಷ್ಮಾ , ಅರುಣ್ ಕುಮಾರ್ ಸೇರಿದಂತೆ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇತರರು ಉಪಸ್ಥಿತರಿದ್ದರು. ಸಿದ್ದರಾಮೇಶ್ವರ ನಿರೂಪಿಸಿದರು ಸಿದ್ದಲಿಂಗಪ್ಪ ಸ್ವಾಗತಿಸಿದರು. ಮಂಜುನಾಥ ಪ್ರಸ್ತಾಪಿಸಿದರು. ಬಾಬು ನಾಯ್ಕ ವಂದಿಸಿದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ