ನಗರಸಭೆ ಸದಸ್ಯರಾದ ಖಾರದ ಪುಡಿ ಮಹೇಶ್ ವಿರುದ್ಧ ಈಡಿ ಅಪಪ್ರಚಾರ.
ಹೊಸಪೇಟೆ ಜುಲೈ.15
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ನಗರಸಭೆ ಸದಸ್ಯರಾದ ಖಾರದಪುಡಿ ಮಹೇಶ್ ರವರ ಹೇಳಿಕೆ, ನನ್ನ ವಿರುದ್ಧ ಸುಳ್ಳು ಪ್ರಚಾರ ಮಾಡುವ ಹಿತ ಶತ್ರು ಕುಮ್ಮಕ್ಕು ನೀಡಿ ನನ್ನ ವಿರುದ್ಧ ಮಾಧ್ಯಮ ಮಿತ್ರರಿಗೆ ಸುಳ್ಳು ಸಂದೇಶ ರವಾನೆ ಮಾಡಿದ್ದಾರೆ ಅವರಿಗೆ ಒಳ್ಳೆಯದಾಗಲಿ ದೇವರು ಅವರಿಗೆ ಚೆನ್ನಾಗಿಡಲಿ, ಸರ್ವಜನಾ ಸುಖಿನೋ ಭವಂತೂ ಹೇಳಿಕೆ ಕೊಟ್ಟರು.

ನಾನು 2009-10 ನೇ ವರ್ಷದ ಸಾಲಿನಲ್ಲಿ ನಾನು ಟ್ರಾನ್ಸ್ಪೋರ್ಟ್ ವ್ಯವಹಾರವನ್ನು ಮಾಡುತಿದ್ದೆ ಆಗ ನನ್ನ ಮೇಲೆ ಆದ ಈಡಿ ದಾಳಿ ಆಗಿತ್ತು ಅದು ಹಳೆ ಸುದ್ದಿ ಅದನ್ನ ಈಗ ನನ್ನ ಮಾಧ್ಯಮ ಮಿತ್ರರು ಪ್ರಚಾರ ಮಾಡುತ್ತಿದ್ದಾರೆ. ಇದು ಸುಳ್ಳು ಪ್ರಚಾರ ನಾನು ಕಾನೂನಿಗೆ ತಲೆ ಬಾಗಿಸುತ್ತೇನೆ ಎಂದು ಹೇಳಿದರು. ನಾನು ಅವರ ವಿರುದ್ಧ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಸಮಯ ಬಂದಾಗ ನಾನು ಉತ್ತರ ನೀಡುತ್ತೇನೆ.ನನ್ನ ಸಮಾಜ ಕಾರ್ಯಗಳನ್ನು ನೋಡಿ ಅವರಿಗೆ ಸಹಿಸಿಕೊಳ್ಳುವುದು ಆಗುತ್ತಿಲ್ಲ, ನಾನು ದೃಢವಾಗಿ ನ್ಯಾಯ ಬದ್ಧವಾಗಿ ಇದ್ದೇನೆ ಈ ನನ್ನ ಸಮಾಜಸೇವೆಯು ಯಾವುದೇ ರೀತಿಯಲ್ಲಿ ನಿಲ್ಲುವುದಿಲ್ಲ ನನ್ನ ಸೇವೆಯನ್ನು ಸಮಾಜ ಸೇವೆಗೆಂದೇ ಮೀಸಲಿಟ್ಟಿದ್ದೇನೆ.
ತಾಲೂಕ ವರದಿಗಾರರು:ಮಾಲತೇಶ. ಶೆಟ್ಟರ್. ಹೊಸಪೇಟೆ