ಸರ್ವ ಜನಾಂಗಕ್ಕೆ ಸೇವೆ ಸಲ್ಲಿಸುವಂತೆ – ಸೈಯದ್ ಹುಸೇನ್ ಸಲಹೆ.
ಮಾನ್ವಿ ಡಿ.07

ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷರಾಗಿ ಮಹೆಬೂಬ್ ಖುರೇಷಿ ಹಾಗು ಗೌರವಾಧ್ಯಕ್ಷರಾಗಿ ಎಂ.ಡಿ ಫಯಾಜ್ ಅವರನ್ನು ಆಯ್ಕೆ ಮಾಡಲಾಗಿದ್ದು, ಸಂಘದ ಬದ್ಧತೆಯಂತೆ ನಡೆಯಬೇಕು ಎಂದು ಟಿಪ್ಪು ಸುಲ್ತಾನ್ ಸಂಘದ ರಾಜ್ಯ ಸಂಚಾಲಕ ಸೈಯದ್ ಹುಸೇನ್ ಸಾಹೇಬ್ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಟಿಪ್ಪು ಸುಲ್ತಾನ್ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿ, ಸಂಘದ ಅಧ್ಯಕ್ಷರಾಗಿ ಮುಂದುವರಿಯುವುದರ ಜೊತೆಗೆ ಶೋಷಿತ ಜನಾಂಗದವರಿಗೆ ಅನ್ಯಾಯವಾದರೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದರು.
ನೂತನ ತಾಲೂಕಾಧ್ಯಕ್ಷ ಮಹೆಬೂಬ್ ಖುರೇಷಿ ಮಾತನಾಡಿ, ನನಗೆ ತಾಲೂಕಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಈ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡುವುದರ ಜೊತೆಗೆ ಎಲ್ಲಾ ಜಾತಿಯ ಜನಾಂಗದವರಿಗೆ ಅನ್ಯಾಯವಾದರೆ ಅವರ ಜೊತೆ ನಿಂತು ಹೋರಾಟ ಮಾಡುವ ಕೆಲಸ ಮಾಡುತ್ತೇನೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ