ಶ್ರೀಶಾರದಾಶ್ರಮದಲ್ಲಿ ಯುಗಾವತಾರ ಶ್ರೀರಾಮಕೃಷ್ಣ ಗ್ರಂಥ – ಪಾರಾಯಣ ಕಾರ್ಯಕ್ರಮ.

ಚಳ್ಳಕೆರೆ ಮಾ.29

ಚಳ್ಳಕೆರೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಸ್ವಾಮಿ ಪುರುಷೋತ್ತಮಾನಂದಜೀ ಬರೆದಿರುವ “ಯುಗಾವತಾರ ಶ್ರೀರಾಮಕೃಷ್ಣ ಭಾಗ-೨” ರ ಗ್ರಂಥ ಪಾರಾಯಣವನ್ನು ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ಕುಮಾರಿ ಪ್ರತೀಕ್ಷಾ ಮತ್ತು ಯಶಸ್ವಿ ಅವರು ಶ್ರೀಮದ್ ಭಗವದ್ಗೀತೆಯ 18 ನೇ. ಅಧ್ಯಾಯದ ಶ್ಲೋಕಗಳನ್ನು ಪಠಿಸಿದರೆ.

ಆಶ್ರಮದ ಸದ್ಭಕ್ತರಾದ ಶ್ರೀಮತಿ ಬಿ.ಸುಮನ ಕೋಟೇಶ್ವರ ಅವರು ತಾವು ಕೈಗೊಂಡ ‘ಮಹಾ ಕುಂಭಮೇಳ ಯಾತ್ರೆ’ ಯ ಅನುಭವಗಳನ್ನು ಹಂಚಿ ಕೊಂಡರು. ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.

ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮಾಣಿಕ್ಯ ಸತ್ಯನಾರಾಯಣ, ವನಜಾಕ್ಷಿ ಮೋಹನ್, ಶ್ರೀಮತಿ ಯಶೋಧಾ ಪ್ರಕಾಶ್, ಯತೀಶ್ ಎಂ.ಸಿದ್ದಾಪುರ, ಸಿ.ಎಸ್ ಭಾರತಿ, ಮಂಜುಳ ಉಮೇಶ್, ಪಂಕಜ ಚೆನ್ನಪ್ಪ, ವೆಂಕಟೇಶ್, ರಶ್ಮಿ ವಸಂತ, ಸಂಗೀತ, ಸಂತೋಷಕುಮಾರ್ ಚೇತನ್, ಸುದೀಪ್‌ ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಇದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button