ಇತರೆ ಇಲಾಖೆಯ ಅಧಿಕಾರಿಗಳ ಗೈರು – ಗ್ರಾಮ ಸಭೆ ರದ್ದು.

ಅಂಬಳಿ ಡಿಸೆಂಬರ್.5

ಒಂದು ಗ್ರಾಮ ಸಭೆ ಎಂದರೆ ಅಲ್ಲಿನ ನಾಗರಿಕರ ಒಂದು ಸಭೆ ಯಾಗಿರುತ್ತದೆ. ಈ ಸಭೆಯಲ್ಲಿ ಮುಂದಿನ ಯೋಜನೆಗಳನ್ನು , ಅನುದಾನವನ್ನು ಚರ್ಚೆ ಮಾಡುವ ಮೂಲಕ ಮುಂಜೂರು ಮಾಡಲಾಗುತ್ತದೆ. ಈ ಸಭೆಗೆ ಸಂಬಂಧಪಟ್ಟ ಇಲಾಖೆವಾರು ಅಧಿಕಾರಿಗಳು ಹಾಜುರಾಗಿರಬೇಕು. ಆ ಇಲಾಖೆಗೆ ಸಂಬಂಧಪಟ್ಟ ಸಾರ್ವಜನಿಕರ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ನೀಡುವ ಮೂಲಕ ಸಾರ್ವಜನಿಕರಿಗೆ ತಿಳಿ ಹೇಳಬೇಕು.

ಒಂದು ವೇಳೆ ಇಲಾಖಾವರು ಅಧಿಕಾರಿಗಳು ಈ ಸಭೆಗೆ ಗೈರಾದರೆ, ಅಲ್ಲಿನ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡುವ ಅಧಿಕಾರಿಗಳು ಯಾರು ಶಿವ.ಶಿವ.ಶಿವನೇ? ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮ ಪಂಚಾಯತಿಯಲ್ಲಿ ಇಂದು 5/12/2023 ರಂದು ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಗ್ರಾಮ ಸಭೆಗೆ ಇಲಾಖಾವಾರು ಅಧಿಕಾರಿಗಳು ಸಭೆಗೆ ಹಾಜರಾಗದೆ ನೋಟಿಸ್ ನೀಡಿದ ಎಲ್ಲಾ ಅಧಿಕಾರಿಗಳು ಗೈರು ಆಗಿರುವುದರಿಂದ, ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷರ ಪತಿಯಾದ, ವಿ ಬಸವರಾಜ , ಗ್ರಾ.ಪ.ಸದಸ್ಯರಾದ ಎನ್ ವಿರುಪಾಕ್ಷ ಟಿ ಪ್ರಕಾಶ ಮತ್ತು ತಾಲುಕು ಡಿಎಸ್ಎಸ್ ಸಂಘಟನಾ ಸಂಚಾಲಕರಾದ ಹೆಚ್ ಮಾರೇಶರವರು ಪ್ರತಿ ಗ್ರಾಮ ಸಭೆಗೆ ಸಂಪೂರ್ಣ ಅಧಿಕಾರಗಳು ಅದೇರಾಗ ಆಗಿದೆ ಪ್ರತಿಸಲನು ಏನೇನೋ ಕಾರಣಗಳನ್ನು ಹೇಳಿ ಗ್ರಾಮ ಸಭೆಯನ್ನು ನಡೆಸುತೀರಾ, ಆದರೆ ಒಂದು ಬಾರಿಯೂ ಇಲಾಖಾವಾರು ಅಧಿಕಾರಿಗಳು ಉಪಸ್ಥಿತರಿರದೆ ಗೈರಾಗುತ್ತಾರೆ.

ಅವರ ಮೇಲೆ ಏನು ಕ್ರಮವನ್ನು ಜರುಗಿಸಿರಿ? ಅವರಿಗೆ ನೋಟಿಸ ನೀಡಿರುವಿರಾ? ಅಥವಾ ಇಲ್ಲವೋ? ಪ್ರತಿಸಲಾ ಹೀಗೆ ಆದರೆ ಇದಕ್ಕೆ ಗ್ರಾಮಸಭೆ ಎನ್ನುತ್ತಾರಾ?ಈ ಬಾರಿ ಇಲಾಖಾವಾರು ಯಾವ ಅಧಿಕಾರಿಯು ಬಂದಿರುವುದಿಲ್ಲ, ಇದಕ್ಕೆ ಕಾರಣ ಏನು? ಇಲಾಖಾವಾರು ಅಧಿಕಾರಿಗಳು ಇಲ್ಲದಿದ್ದರೆ ಸಾರ್ವಜನಿಕರ ಪ್ರಶ್ನೆಗೆ ಉತ್ತರ ನೀಡುವವರು ಯಾರು? ಎಂದು ಪ್ರಶ್ನೆಗಳ ಸುರಿ ಮಳೆಯನ್ನು ಸುರಿಸಿದ್ದಾಗ, ಅನೇಕ ನೋವು ಉಂಡ ಪಿ ಡಿ ಓ ಗ್ರಾಮ ಸಭೆಯನ್ನು ಸಭೆಯ ಒಪ್ಪಿಗೆಯ ಮೇರೆಗೆ ಮುಂದೂಡಲಾಯಿತು. ಆದರೂ ಪಟ್ಟು ಬಿಡದೆ ಗೈರಾದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಒತ್ತಾಯ ಮಾಡಿದರು.ಇದಕ್ಕೆ ಮಾಡಿದ ಪಿಡಿಓ ರವರು ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ವಿಚಾರಿಸಿ, ಅವರ ಗಮನಕ್ಕೆ ತರುತ್ತೇನೆ ಎಂದರು. ಇದಕ್ಕೆ ಪ್ರತಿಯಾಗಿ ನೋಡಲ್ ಅಧಿಕಾರಿಯಿಲ್ಲದೆ ಗ್ರಾಮ ಸಭೆ ನಡೆಸುವುದು ಎಷ್ಟು ಸರಿ ಎಂದು ಮತ್ತೆ ಪ್ರಶ್ನಿಸಿದರು. ಒಟ್ಟಿನಲ್ಲಿ ಎಲ್ಲಾ ಸಮಸ್ಯೆಗಳಿಂದ ಗ್ರಾಮ ಸಭೆಯನ್ನು ಮುಂದೂಡಲಾಯಿತು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button