ಗಿಡ ಮರಗಳು ಮನುಷ್ಯನಿಗೆ ಧಾರುಣ ಕರುಣೆ ತೋರುತ್ತವೆ ಎನ್ನುವುದಕ್ಕೆ ಅಮರ ಶ್ರೀ ಆಲದ ಮರವೇ ಸಾಕ್ಷಿ – ಭಾಷವಲಿ ತಾವರಗೇರ.

ಸಿಂಧನೂರು ಏ.27

ಪರಸರ ಪ್ರೇಮಿ ಶ್ರೀ ಭಾಷಾವಲಿ ತಾವರಗೇರ ಅವರು ಇಂದು ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿ ಮರ ಚಿಗುರುವಿಕೆಯಲ್ಲಿ ವನಸಿರಿ ಪೌಂಡೇಷನ್ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಕೃತಿ ಮನುಷ್ಯನಿಗೆ ಎಷ್ಟು ಅವಶ್ಯಕತೆಯೋ ಮನುಷ್ಯನಿಗೆ ಪ್ರಕೃತಿ ಅಷ್ಟೇ ಅವಶ್ಯಕವಾಗಿದೆ. ಗಿಡ ಮರಗಳು ಮನುಷ್ಯನಿಗೆ ಧಾರುಣ ಕರುಣೆ ತೋರುತ್ತವೆ ಎನ್ನುವುದಕ್ಕೆ ವನಸಿರಿ ಪೌಂಡೇಷನ್ ಪೌಂಡೇಷನ್ ವತಿಯಿಂದ ಮರು ಜೀವ ಪಡೆದ ಈ ಅಮರ ಶ್ರೀ ಆಲದ ಮರವೇ ಸಾಕ್ಷಿ ಯಾಗಿದೆ. ಒಂದು ಮೂವತ್ತು ವರ್ಷದ ಹಿಂದಿನ ಒಣಗಿದ ಮರ ಮತ್ತೆ ಚಿಗುರೋಡೆಯುವ ಮೂಲಕ ಪುನಶ್ಚೇತನ ಗೊಂಡು, ಹಸಿರು ಕ್ರಾಂತಿಯಾಗಿ ಬೆಳೆದು, ಎಲ್ಲಾ ಜೀವ ರಾಶಿಗಳಿಗೆ ಮೂಲ ಪರಿಸರವೇ ಎನ್ನುವುದಕ್ಕೆ ಈ ಮರ ನಮಗೆ ಉದಾಹರಣೆ ಯಾಗಿದೆ. ಈ ಮರವನ್ನು ಬೆಳಸಿ ಪೋಷಣೆ ಮಾಡಿದ ಅಮರೇಗೌಡ ಮಲ್ಲಾಪುರ ಅವರಿಗೆ ಕೃತಜ್ಞತೆಗಳು ಎಂದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button