ಹ್ಯಾಂಡ್ ಲಾಕ್ ಮುರಿದು ಬೈಕ್ ಸರಣಿ ಕಳ್ಳತನ ಮಾಡುತ್ತಿದ್ದ ಆರೋಪಿ – ಕೊಟ್ಟೂರು ಪೊಲೀಸರ ವಶಕ್ಕೆ.
ಕೊಟ್ಟೂರು ಮೇ.10

ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಟ್ಟೂರು ಪೊಲೀಸರ ವಶಕ್ಕೆ ಆರೋಪಿ ಕೆ.ಹನುಮಂತ ಅಲಿಯಾಸ್ ಟಿಂಗು. ಈತನ ವಯಸ್ಸು 23 ಉಜ್ಜಿನಿ, ಗಾರೆ ಕೆಲಸ ಮಾಡುತ್ತಿದ್ದು. ಬೈಕ್ ಗಳ ಹ್ಯಾಂಡ್ ಲಾಕ್ ಮುರಿದು ಸರಣಿ ಬೈಕ್ ಕಳ್ಳತನ ಮಾಡುತ್ತಿದ್ದವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು. ಆರೋಪಿತನನ್ನು ಮತ್ತು ಮಾಲು ಪತ್ತೆಗಾಗಿ ಶ್ರೀ ಮಲ್ಲೇಶ್ ದೊಡ್ಡಮನಿ ಡಿ.ವೈ.ಎಸ್.ಪಿ ಕೂಡ್ಲಿಗಿ ರವರ ಮಾರ್ಗದರ್ಶನದಲ್ಲಿ ಶ್ರೀ ವೆಂಕಟಸ್ವಾಮಿ.ಟಿ ಸಿ.ಪಿ.ಐ ಕೊಟ್ಟೂರು ವೃತ್ತ ರವರ ನೇತೃತ್ವದಲ್ಲಿ ಶ್ರೀಮತಿ ಗೀತಾಂಜಲಿ ಸಿಂಧೆ ಪಿ.ಎಸ್.ಐ ಕೊಟ್ಟೂರು ಪೊಲೀಸ್ ಠಾಣೆ ಸಿಬ್ಬಂದಿಯವರಾದ ಬಸವರಾಜ ಹೆಚ್, ವೀರೇಶ್, ಶಶಿಧರ, ನಾಗಪ್ಪ, ಯರಿಸ್ವಾಮಿ ಇವರ ನೇತೃತ್ವದಲ್ಲಿ ತಂಡ ರಚಿಸಿದ್ದು.

ಸದರಿ ತಂಡದವರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಿ ಪ್ರಕರಣದ ಆರೋಪಿ ಜೊತೆಗೆ 1 ಲಕ್ಷ ಬೆಲೆ ಬಾಳುವ ಮೂರು ಬೈಕ್ ನ್ನು ಜಪ್ತಿ ಮಾಡಿಕೊಂಡು 9. ಮೇ 2025 ರಂದು ಬೆಳಿಗ್ಗೆ 11.45 ಕ್ಕೆ ಗಂಟೆಗೆ ಕೊಟ್ಟೂರು ಪಟ್ಟಣದ ಶ್ರೀ ಮರಳ ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ ವಶಕ್ಕೆ ಪಡೆದು ಕೊಂಡು ವಿಚಾರಣೆಗೊಳ ಪಡಿಸಲಾಯಿತು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟರು