ಮೊಳಕಾಲ್ಮೂರು ಪಟ್ಟಣದಲ್ಲಿ ಯಾವುದೇ ಯೋಜನೆ ಮಾಡಿದರೆ ಎಲ್ಲಾ ನಾಗರಿಕರಿಗೆ ಅನುಕೂಲವಾಗಬೇಕು ಎಂದು ಎನ್.ವೈ.ಗೋಪಾಲಕೃಷ್ಣ ಶಾಸಕರ ನಿರ್ಧಾರ.

ಮೊಳಕಾಲ್ಮೂರು ಜೂನ್.26

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್. ವೈ. ಗೋಪಾಲಕೃಷ್ಣ ಶಾಸಕರು ಇಂದು ತಾಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ್ ರೂಪ ಮೇಡಂ ತಾಲೂಕು ಪಂಚಾಯತಿ ಅಧಿಕಾರಿಯಾದ ಜಾನಕಿರಾಮ್ ರೈತ ಸಂಘದ ಅಧ್ಯಕ್ಷರಾದ ರವಿಕುಮಾರ್ ವಿಜಯಕುಮಾರ್ ಕಾಂಗ್ರೆಸ್ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಮತ್ತು ಬಡವ ಬಯ್ಯ ಖಾದರ್ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಸೇರಿ ಮೊಳಕಾಲ್ಮೂರು ಕ್ಷೇತ್ರದ ಬಗ್ಗೆ ಎನ್. ವೈ. ಗೋಪಾಲಕೃಷ್ಣ ಶಾಸಕರು ಜನಪರ ಯೋಜನೆಗಳನ್ನು ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು ತಾಲೂಕು ಪಂಚಾಯಿತಿ ಆಫೀಸನ್ನು ಒಂದು ಕೋಟಿ ಎಂಟು ಲಕ್ಷದ ವೆಚ್ಚದಲ್ಲಿ ತಾಲೂಕು ಆಡಳಿತ ಸೌಧದ ಪಕ್ಕದಲ್ಲಿ ನಿರ್ಮಿಸಿದರೆ ಎಲ್ಲಾ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಮಾನ್ಯ ಶಾಸಕರು ಹೇಳಿದರು ಮತ್ತು ಜಿಲ್ಲಾ ಪಂಚಾಯತಿ ಆಫೀಸ್ ಅನ್ನು ಸಹ ಮುಂದೆ ಸ್ವಲ್ಪ ದಿನಗಳಾದ ನಂತರ ತಾಲೂಕು ಪಂಚಾಯಿತಿ ಆಫೀಸಿನ ಪಕ್ಕಕ್ಕೆ ಮಾಡಬೇಕೆಂದು ಎಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇರೆಗೆ ಈ ಮೂರು ಆಫೀಸುಗಳು ಒಂದೇ ಹತ್ರ ಇದ್ದರೆ ಎಲ್ಲ ನಾಗರಿಕರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಮಾನ್ಯ ಶಾಸಕರು ಹೇಳಿದರು .

ಮತ್ತು ಸಂತೆ ಮಾರ್ಕೆಟ್ ಊರ ಬಾಗಿಲ ಹತ್ತಿರ ಒಂದು ಹೋಂಡಾ ಇದ್ದು ಆ ಹೊಂಡದ ನೀರು ಬರೇ ಕೊಳಚೆ ನೀರು ಆಗಿದ್ದು ಅಲ್ಲಿನ ಗೊಬ್ಬು ವಾಸನೆ ಅಲ್ಲಿನ ಪರಿಸ್ಥಿತಿ ನೋಡಿ ಜಾಗಕ್ಕೆ ಸಂತೆ ಮಾರ್ಕೆಟ್ ಮಾಡಿದರೆ ಸ್ವಚ್ಛತೆ ಕಾಪಾಡಿದಂಗೆ ಆಗುತ್ತೆ ಮತ್ತೆ ಸಂತೆ ಮಾರ್ಕೆಟ್ ಸಹ ಆಗುತ್ತೆ ಇದು ಶಾಸಕರ ಬಯಕೆ ಆಗಿರುತ್ತದೆ ಇದು ಯಾಕಪ್ಪ ಅಂದರೆ ಆ ಜಾಗದಲ್ಲಿ ಇವತ್ತಿನವರೆಗೂ ಆ ಜಾಗವನ್ನು ಸ್ವಚ್ಛತೆ ಕಾಪಾಡಿಲ್ಲ ಅಲ್ಲಿನ ಜನಗಳು ಮತ್ತೆ ಶಾಲೆ ಓದುವ ಹುಡುಗರು ಅಲ್ಲಿರ ಸುತ್ತಮುತ್ತಲಿನ ಸಾರ್ವಜನಿಕರು ದುರುವಾಸನೆಯಿಂದ ಗಬ್ಬು ವಾಸನೆ ಕುಡಿಯುವಂತಾಗಿದೆ ದಿನಾಲು ಬಹಳ ಗಂಭೀರವಾಗಿ ಕಾಣುತ್ತಿತ್ತು ಆದಕಾರಣ ಇಲ್ಲಿ ಸಂತೆ ಮಾರ್ಕೆಟ್ ಮಾಡಿದರೆ ಎಲ್ಲಾ ನಾಗರಿಕರಿಗೆ ಸ್ವಚ್ಛತೆಯನ್ನು ಕಾಪಾಡಿದಂಗೆ ಆಗುತ್ತೆ ಮತ್ತೆ ಸಂತೆ ಮಾರ್ಕೆಟ್ ಸಹ ಒಂದು ವಿಶೇಷವಾದ ಜಾಗಕ್ಕೆ ತಂದಂತಾಗುತ್ತದೆ ಎಂದು ನಾಗರಿಕರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಜನಪರ ಯೋಜನೆಗಳನ್ನು ಮಾಡಲು ಮುಂದಾಗಿದ್ದಾರೆ ಮತ್ತು ಫ್ರೈವೇಟ್ ಬಸ್ ಸ್ಟ್ಯಾಂಡ್ ಅದೇ ಜಾಗದಲ್ಲಿ ಸ್ವಲ್ಪ ಅಂಗಡಿಗಳನ್ನು ತೆರವುಗೊಳಿಸಿ ಆ ಜಾಗಕ್ಕೆ ಬಸ್ಟ್ಯಾಂಡ್ ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಬೇಕು ಎಂದು ಮಾನ್ಯ ಶಾಸಕರು ಹೇಳಿದರು ಮತ್ತು ಹಳೆ ತಾಲೂಕ ಆಫೀಸ್ ಇದನ್ನು ತೆರವುಗೊಳಿಸಿ ಕೆ ಎಸ್ ಆರ್ ಟಿ ಸಿ ಬಸ್ಟ್ಯಾಂಡ್ ಅನ್ನು ಮಾಡಿಸಬೇಕೆಂದು ಎಲ್ಲಾ ನಾಗರಿಕರ ಪರವಾಗಿ ಮಾನ್ಯ ಶಾಸಕರು ಯೋಜನೆಗಳನ್ನು ರೂಪಿಸುತ್ತಾರೆ ಎನ್. ವೈ. ಗೋಪಾಲಕೃಷ್ಣ ಶಾಸಕರು ಇವರು ಯಾವುದೇ ಯೋಜನೆ ಮಾಡಿದರೆ ಅದು ಶಾಶ್ವತವಾಗಿ ನಾಗರಿಕರಿಗೆ ಕಾಣಬೇಕು ಇಂತಹ ಯೋಜನೆಗಳು ಮಾತ್ರ ರೂಪಿಸುತ್ತಾರೆ ಮತ್ತು ಎಚ್ ಆರ್ ರಸ್ತೆ ಅಂಬೇಡ್ಕರ್ ವೃತ್ತ ಮದಕರಿ ವೃತ್ತ ಸರ್ಕಲ್ ನಲ್ಲಿ ರಸ್ತೆ ಅಗಲವಾಗಿ ಮಾಡಿಸಬೇಕೆಂದು ನಾಗರಿಕರಿಗೆ ತೊಂದರೆ ಆಗದಂತೆ ಮತ್ತು ವಾಹನಗಳಿಗೆ ಲೆಫ್ಟ್ ರೈಟ್ ಓಡಾಡುವ ವಾಹನಗಳಿಗೆ ಸಹ ಅನುಕೂಲವಾಗಬೇಕು ಎಂದು ಮಾನ್ಯ ಶಾಸಕರು ಹೇಳಿದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ. ಹೊಂಬಾಳೆ. ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button