ಪಿ.ಯು.ಸಿ ವಸತಿ ನಿಲಯದ ವಿದ್ಯಾರ್ಥಿಗಳ – ಉತ್ತಮ ಸಾಧನೆ.

ಮಾನ್ವಿ ಏ.09

ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯದ ವಾರ್ಡನ್ ಆದ ಹುಸೇನ್ ಬಡಿಗೇರ್ ಅವರು ಈ ಮೊದಲು ಶಿಕ್ಷಕ ವೃತ್ತಿಯಿಂದ ಬಂದವರಾಗಿದ್ದು ಅವರು ಅತ್ಯಂತ ಕ್ರೀಯಾಶೀಲ & ಸಂಘಟನಾತ್ಮಕ ಹಾಗೂ ರಚನಾತ್ಮಕವಾಗಿ ಕಾರ್ಯ ಚಟುವಟಿಕೆಗಳಲ್ಲಿ ಸದಾ ತೊಡಗಿ ಕೊಳ್ಳುತ್ತಿದ್ದರು. ಏತನ್ಮಧ್ಯೆ ಅವರು ಒಲವು ವಾರ್ಡ್ ನ್ ಹುದ್ದೆ ಕಡೆ ವಾಲಿತು ಹಾಗಾಗಿ ಹುಸೇನ್ ಬಡಿಗೇರ್ ರವರ ಗರಡಿಯಲ್ಲಿ ಪಳಗಿದ ಬಡ ವಿದ್ಯಾರ್ಥಿಗಳಿಗೆ ವರದಾನ ಆಯಿತೆಂದರೆ ಅತಿಶಯೋಕ್ತಿ ಆಗಲಾರದು.

ಅವರ ಮಾರ್ಗದರ್ಶನದಲ್ಲಿ ಮಾನ್ವಿ ಪಟ್ಟಣ ದಲ್ಲಿರುವ ಡಾ, ಬಿ.ಆರ್ ಅಂಬೇಡ್ಕರ್ ಪಿ.ಯು.ಸಿ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳ‌ ಪಿ.ಯು.ಸಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡ ಮಾನ್ವಿ ತಾಲೂಕಿನ ತಾಲೂಕ ಸಮಾಜ ಕಲ್ಯಾಣ ಅಧಿಕಾರಿಗಳಾದ ಸಹಾಯಕ ನಿರ್ದೇಶಕರಾದ ನಟರಾಜ್ ಸಾಹೇಬ್ರು.

ವಸತಿ ನಿಲಯದ ವಿದ್ಯಾರ್ಥಿಗಳು 1) ಕುಮಾರ್ ಸುದೀಪ್ ಪ್ರಥಮ 85% 2) ಗಣೇಶ ದ್ವಿತೀಯ 74% 3) ಹನಮಂತ ತೃತೀಯ 73% ಅಭಿನಂದನೆಗಳು. ಸಹಾಯಕ ನಿರ್ದೇಶಕರಾದ ನಟರಾಜ. ನಿಲಯ ಪಾಲಕರು ಹುಸೇನ್ ಬಡಿಗೇರ್. ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button