ಪಿ.ಕೆ.ಪಿ.ಎಸ್ ದಲ್ಲಿ ಸರ್ಕಾರ ತೋಗರಿ ತುಂಬುವ – ಕೇಂದ್ರ ಆರಂಭ.
ಕಲಕೇರಿ ಮಾ.24

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಪಿ.ಕೆ.ಪಿ.ಎಸ್ ದಲ್ಲಿ ಸರ್ಕಾರ ತೋಗರಿ ತುಂಬುವ ಕೇಂದ್ರ ಆರಂಭ ಗೊಂಡಿದೆ. ಶ್ರೀ ಪರಮ ಪೂಜ್ಯ ಷ.ಬ್ರ ಶ್ರೀ ಗುರು ಮಡಿವಾಳೇಶ್ವರ ಶಿವಾಚಾರ್ಯರು ಗದ್ದುಗಿ ಮಠ ಇವರ ಅಮೃತ ಹಸ್ತದಿಂದ ಚಾಲನೆ ನೀಡಿದರು. ರೈತರು ಇದನ್ನು ಸದುಪಯೋಗ ಪಡೆದು ಕೊಳ್ಳಬೇಕೆಂದು ಶ್ರೀಗಳು ತಿಳಿಸಿದರು. ಸರ್ಕಾರದ ಬೆಂಬಲ ಬೆಲೆ 8050 ರೂ. ಅದರಲ್ಲಿ 7550 ರೂ. ಕೇಂದ್ರ ಸರಕಾರ ದಿಂದ ನೇರವಾಗಿ ರೈತರ ಖಾತೆಗೆ ಜಮಾ ಕೊಡುತ್ತಾರೆ. ಉಳಿದ ರಾಜ್ಯ ಸರ್ಕಾರದ ಹಣ 450 ರೂ. ತದ ನಂತರ ಬರುತ್ತದೆ ಎಂದು. ಪಿ.ಕೆ.ಪಿ.ಎಸ್ ಆಡಳಿತಾಧಿಕಾರಿ ತಿಳಿಸಿದರು.

ಊರಿನ ಹಿರಿಯರಾದಂತ ಎಸ್.ಬಿ ಪಾಟೀಲ್. ಮಲ್ಲು ದೇಸಾಯಿ. ಹಣಮಂತ ವಡ್ಡರ್. ಚಂದ್ರಕಾಂತ್ ಬಡಿಗೇರ್. ರಫೀಕ್ ಮಂದೆವಾಲ್ . ದಾವಲ್ ನಾಯ್ಕೋಡಿ. ಅಮೀನ್ ಸಾಬ್ ನಾಯ್ಕೋಡಿ. ಮಡಿವಾಳಪ್ಪ ಸಜ್ಜನ್. ಚಿಟ್ಟು ವಲ್ಲಿಭಾವಿ. ದೇವೇಂದ್ರ ಬಡಿಗೇರ್. ಹುಸೇನ್ ನಾಯ್ಕೋಡಿ. ಮಡಿವಾಳಪ್ಪ ಚಳ್ಳಗಿ. ಸುಭಾಷ್ ಸಿಂದಗಿ. ಮುತ್ತಪ್ಪ ಹೆಗ್ಗಣದೊಡ್ಡಿ. ವೀರೇಶ್ ರೋಡಗಿ. ಸಂತೋಷ್ ರಕ್ಕಸಗಿ. ಸ್ಥಳ ಬಿಜಾಪುರ್ ರೋಡ್ ಪ್ರಕಾಶ್ ಸಿಂದಗಿ ಇವರ ವಕಾರದಲ್ಲಿ ತೊಗರಿ ತುಂಬುವ ಕೇಂದ್ರ ಪ್ರಾರಂಭ ಅನೇಕ ಊರಿನ ರೈತರು ಹಿರಿಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ.ತಾಳಿಕೋಟೆ