“ಜಿ.ಎಸ್ ಗೋನಾಳರ ಜೀವನ ಸಾರ, ಲೇಖಕ – ಬಾಳುತನೆಯ. ಇಟಗಿ”…..

ಎಲ್ಲವನ್ನು ಬಲ್ಲವರಿಲ್ಲ ಬಲ್ಲವರು ಬಹಳ್ಳಿಲ್ಲ ಎನ್ನುವ ಸರ್ವಜ್ಞನ ನುಡಿಯು ಜಗದಲ್ಲಿ ಬದುಕಿ ಬಾಳಲ್ಲಿರುವ ಮನುಜರಿಗೆ ಸಂಬಂಧಿತ ವಾಗಿರುತ್ತದೆ. ” ಹುಟ್ಟು ಮತ್ತು ಸಾವು” ಇವುಗಳ ಮಧ್ಯದಲ್ಲಿರುವುದೇ ಜೀವನ. “ಜೀವನ ಮತ್ತು ಬದುಕು” ಒಂದನ್ನೊಂದು ಅಪ್ಪಿ ಕೊಂಡಿರುತ್ತವೆ. ಬದುಕಿದಾಗ ಜೀವನ ಧರ್ಮದ ದಾರಿಯಲ್ಲಿರ ಬೇಕು ತಾತ್ವಿಕ ನೆಲಗಟ್ಟಿನಿಂದ ಸಾಗಬೇಕು. ವ್ಯಕ್ತಿ ಬದುಕಿದಾಗ ಜೇನಾಗಿ, ಸಿಹಿ ಸಕ್ಕರೆಯಾಗಿ, ಪ್ರೀತಿ, ವಿಶ್ವಾಸದೊಂದಿಗೆ ಸಾಗಿ ಮೋಕ್ಷಕ್ಕೆ ದಾರಿ ಯಾಗಬೇಕು.
ಮನುಷ್ಯನ ತನ್ನ ಜೀವಿತಾವಧಿಯಲ್ಲಿ ಚಿಂತನ ಶೀಲನಾಗಿರಬೇಕು. ಆರು ದುರ್ಗಣಗಳನ್ನು ಮೆಟ್ಟಿ ನಿಂತು. ಸತ್ಯ, ಧರ್ಮ, ನೀತಿ, ಪ್ರೀತಿ, ವಿಶ್ವಾಸ, ಸಂಸಾರದ ನೆರಳಿನಲ್ಲಿ ಬದುಕಬೇಕು. ಡಿ.ವಿ ಗುಂಡಪ್ಪನವರ ವಿಚಾರ ಧಾರೆಯಂತೆ “ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ” ಈ ದೊಡ್ಡವರ ಮಾತನ್ನು ತಿಳಿದು ಕೊಳ್ಳಬೇಕು. ಬದುಕಿನ ಜಟಕಾ ಬಂಡಿ ಹೊಂಟಾಗ, ಸಾಗಿದಾಗ, ಬದುಕಿನ ಸಮಾನತೆಯನ್ನು ಕಾಯ್ದು ಕೊಳ್ಳುವುದು ಮನುಷ್ಯನಿಗಿರುವ ತಿಳುವಳಿಕೆ. ವಿಧಿಯು ಜೀವನದ ಜಟಕಾ ಬಂಡಿಯ ಮಾಲಕ ನಾಗಿರುವಾಗ, ನಮ್ಮ ಬದುಕು ಹರಿಯುವ ನದಿಯಂತೆ, ನಿರ್ಮಲ ವಾಗಿರಬೇಕು. ಆ ನಿರ್ಮಲ ನೀರು ಸರ್ವರಿಗೂ ಬೇಕಾಗಿರುತ್ತದೆ. ಆ ನೀರು ತೃಷೆಯನ್ನು ಇಂಗಿಸಿ, ಚೈತನ್ಯವನ್ನು ನೀಡುತ್ತದೆ. ಬದುಕು ಕಣ್ಣಾಗಿ ಸಾಗಿದರೆ ಮೋಕ್ಷಕ್ಕೆ ದಾರಿ ಇರುತ್ತದೆ,
ಇಂತಹ ಆದರ್ಶ ಜೀವನವು ಶ್ರೀಯುತ ಜಿ.ಎಸ್. ಗೋನಾಳ ರವರದ್ದಾಗಿರುತ್ತದೆ. ಇವರು ಕೊಪ್ಪಳ ತಾಲೂಕಿನ ಮಾದಿನೂರು ಗ್ರಾಮದಲ್ಲಿ ಸನ್ಮಾನ್ಯರಾಗಿ, ಕೃಷಿ ಕ್ಷೇತ್ರದಲ್ಲಿ ಹೆಸರಾದ ಶ್ರೀ ಶಿವಶರಣೆ, ಮಹಾಸಾದ್ವಿ, ಹೇಮರೆಡ್ಡಿ ಮಲ್ಲಮ್ಮನ ಆಶೀರ್ವಾದ ಪಡೆದ ಪಾರ್ವತಿ ಪರಮೇಶ್ವರರಂತೆ ಬಾಳಿ, ಬದುಕಿದ ಶೇಖರಪ್ಪನವರು ಮತ್ತು ಶ್ರೀಮತಿ ಗೌರಮ್ಮನವರ ಉದರದಿಂದ ಜನಿಸಿದ ಜಿ. ಎಸ್. ಗೋನಾಳರು. ಬಹುಮುಖವಾಗಿ ಪ್ರತಿಭಾವಂತ ರಾಗಿರುತ್ತಾರೆ. “ಹುಲ್ಲಾಗು ಬೆಟ್ಟದಡಿ ಮನೆಗೆ ಮೆಲ್ಲಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯ ಕಲ್ಲು ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು” ಎನ್ನುವ ಮಾತಿನಂತೆ ಶ್ರೀ ಗವಿಸಿದ್ದಪ್ಪ ಗೋನಾಳರು, ಬೆಟ್ಟದಡಿಯ ಹುಲ್ಲಿನಂತೆ, ಕಷ್ಟಗಳ ಸರಮಾಲೆಯಲ್ಲಿ ಬೆಂದು, ಸರ್ವ ಜನರಿಗೆ ಬೆಲ್ಲ ಮತ್ತು ಸಕ್ಕರೆ ಯಾಗಿದ್ದಾರೆ, ಇಂದು ಇವರ ಜೀವನವು ಆದರ್ಶ ಮಯವಾಗಿರುತ್ತದ. ಇಂದು ಸಾಮಾಜಿಕವಾಗಿ ಇವರು, ಪ್ರೀತಿ, ವಿಶ್ವಾಸದೊಂದಿಗೆ ಎಲ್ಲರೊಳಗೊಂದಾಗಿ ಬದುಕುತ್ತಿದ್ದಾರೆ. ಒಬ್ಬ ಸಾಹಿತಿಯಾಗಿ, ವರದಿಗಾರರಾಗಿ, ಹಲವಾರು ಸಂಘ ಸಂಸ್ಥೆಯಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೇವೆ ಮಾಡುವುದರಲ್ಲಿ ಮುಂಚೂಣಿಯಲ್ಲಿರುವ ಸೇವಾ ಭಾವಕರು. ಕಾಯಕ ಮಾಡುವಲ್ಲಿ ಹಿಂದೇಟು ಹಾಕದ ಚೈತನ್ಯ ಶೀಲರೂ, ಕವಿ ಬಾಳುತನಯ ಬರೆದ ನುಡಿಯಂತೆ…..
“ಬುದ್ಧ ಬಸವರ ಬದುಕು ಕನ್ನಡಿಯು ನಮಗೆ ಮಾದರಿಯ ಬದುಕಿನಲಿ ಈಜಾಡಬೇಕು ಹಮ್ಮು ಬಿಮ್ಮುನು ಮರೆತು ಬಾಳಿದರೆ ಬದುಕು ಹಾಲು ಜೇನಿನಂತೆ ಸಿಹಿ ಸಕ್ಕರೆಯ ಪಾಕು”..!ಈ ನುಡಿಯಂತೆ, ಶ್ರೀಯುತ ಜಿ.ಎಸ್ ಗೋನಾಳ್ರವರ ಬದುಕು “ಸರ್ವ ಜನಾಂಗದ ಶಾಂತಿಯ ತೋಟವಾಗಿದೆ” ಸದರಿಯವರು ಸಾಹಿತ್ಯ ಕ್ಷೇತ್ರದಲ್ಲಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು ೧೭. ಕೃತಿಗಳನ್ನು ರಚಿಸಿ, ಸಾಹಿತಿಗಳ ಕೈಗಳಿಗೆ ನೀಡಿರುವುದು ಗೋನಾಳರ ಮತ್ತು ಆತ್ಮೀಯ ಬಂಧು ಬಳಗಕ್ಕೆ, ಆತ್ಮೀಯ ಮಿತ್ರ ಬಳಗಕ್ಕೆ ಹೆಮ್ಮೆಯ ವಿಷಯವಾಗಿದೆ.
ಇದೇ ರೀತಿಯಾಗಿ 2020 ರಲ್ಲಿ ಕರ್ನಾಟಕ ಸರಕಾರದ, ಮಾಧ್ಯಮ ಅಕಾಡೆಮಿ ಬೆಂಗಳೂರು, ಇವರಿಂದ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಪಡೆದವರಾಗಿದ್ದಾರೆ. ಶ್ರೀ ತೋಂಟದ ಸಿದ್ದಲಿಂಗ ಸನ್ನಿಧಿ ಯವರಿಂದ ಶಿರಹಟ್ಟಿಯ ಫಕೀರೇಶ್ವರ ಸನ್ನಿಧಿ ಅವರಿಂದ ಆಶೀರ್ವಾದ ಪಡೆದ ಹೆಮ್ಮೆಯ ಪುತ್ರ ರಾಗಿರುತ್ತಾರೆ. ಶಾಸಕರಿಂದ ಮತ್ತು ಸಂಸದರಿಂದ ಗೌರವದ ಕಾಣಿಕೆಯನ್ನು ಪಡೆದು ಬದುಕುವುದು ಜನ ಮೆಚ್ಚುಗೆಗೆ ಕಾರಣವಾಗಿದೆ.
ಶ್ರೀ ಜಿಎಸ್ ಗೋನಾಳರು ಆಡುವ ಮಾತಿನಲ್ಲಿ ಅರ್ಥವಿರುತ್ತದೆ. ನಡೆ-ನುಡಿಗಳಿಂದ ಅರ್ಥಗರ್ಭಿತವಾದ ಮಾತುಗಳಾಗಿರುತ್ತವೆ. ಶಬ್ದಗಳು ತೂಕ ಬದ್ಧವಾಗಿ, ಕನ್ನಡ ಭಾಷೆಯ ಸಿರಿಯಲ್ಲಿ ತೇಲಾಡುತ್ತಿರುತ್ತದೆ. ಈ ಕಾರಣ ಇವರೊಂದಿಗೆ ಮಾತನಾಡಲು ಹೆಮ್ಮೆ ಅನಿಸುತ್ತದೆ. ಒಬ್ಬ ಗೆಳೆಯನನ್ನು ಇನ್ನೊಬ್ಬರಿಗೆ ಪರಿಚಯಿಸಿ ಗುಣಗಾನ ಮಾಡುವುದು ಇವರ ಗುಣಶಿರಿಯಾಗಿದೆ. ಸನ್ಮಾನ್ಯರ ಇನ್ನೊಂದು ವಿಶೇಷ ವಿಚಾರವನ್ನು ತಿಳಿಸಲು ಬಹಳ ಎಮ್ಮೆ ಎನಿಸುತ್ತದೆ. ಇಂದಿನ ಕುಕುನೂರು ತಾಲೂಕಿನ ‘ಇಟಗಿ’ ಗ್ರಾಮದಲ್ಲಿ “ಇಟಗಿ ಉತ್ಸವವನ್ನು” 20 ವರ್ಷಗಳಿಂದ ನಾಗರಿಕರ ವೇದಿಕೆಯಿಂದ ಮತ್ತು ಪತ್ರಿಕಾ ವರದಿಗಾರರ ವೇದಿಕೆ ಮೂಲಕ ಶ್ರೀಯುತ ಮಹೇಶ್ ಬಾಬು ಸುರ್ವೆ, ಮತ್ತು ವರದಿಗಾರರ, ಮಿತ್ರರಿಂದ ನಡೆಸುತ್ತಾ ಬಂದಿರುವುದು, ಇಟಗಿಯ ಸಮಸ್ತ ಜನ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಹೆಮ್ಮೆಯ ವಿಷಯವಾಗಿದೆ. ಈ ವಿಷಯದಲ್ಲಿ ಶ್ರೀ ಜಿ.ಎಸ್ ಗೋನಾಳ ರವರದು ಬಹು ಮುಖ್ಯ ಪಾತ್ರವಾಗಿರುತ್ತದೆ, ಮಹೇಶ್ ಬಾಬು ಸುರ್ವೆ, ನಮ್ಮ ಇಟಗಿ ಗ್ರಾಮದಲ್ಲಿ ಜನಿಸಿ ಹೆಸರುವಾಸಿಯಾದ ಸುಪುತ್ರ, ಸಾಂಸ್ಕೃತಿಕ ರಂಗದಲ್ಲಿ ಶ್ರೀ ಮಹೇಶ್ ಬಾಬು ಸರ್ವೆ ಇವರ ಹೆಸರು ಪ್ರೀತಿಗೆ ಪಾತ್ರವಾಗಿದೆ. ಶ್ರೀ ಜಿ.ಎಸ್ ಗೋನಾಳ್ ಸನ್ಮಾನ್ಯರು, ಒಂದು ಪ್ರಕಾಶನವನ್ನು ಹುಟ್ಟು ಹಾಕಿದ್ದು, ಇದು ವಿಶಾಲ ಪ್ರಕಾಶನ ಎಂದೆ ನಾಮಕರಣ ಗೊಂಡಿದೆ ಇದರ ಮೂಲಕ ಮಾನ್ಯರು 40 ಪುಸ್ತಕಗಳನ್ನು ಪ್ರಕಟ ಪಡಿಸಿದ್ದಾರೆ. ಇವುಗಳಲ್ಲಿ 17 ಪುಸ್ತಕಗಳು ಶ್ರೀ ಜಿ. ಎಸ್ ಗೋನಾಳರ ಸ್ವರ ರಚನೆ ಪುಸ್ತಕಗಳಾಗಿರುತ್ತವೆ. ಎನ್ನುವ ವಿಷಯ ನಮ್ಮ ಸಾಹಿತಿಗಳಿಗೆ ಪ್ರೇರಣ ದಾಯಕವಾದ ವಿಷಯವಾಗಿದೆ. ಸನ್ಮಾನ್ಯರು ತಮ್ಮ ಸುಪುತ್ರರಿಗೂ ಸಾಹಿತ್ಯ ರಂಗಕ್ಕೆ ತೊಡಗಿಸಿರುವುದು ಉತ್ಸಾಹದ ಸಂಗತಿ, ಇವರ ಚಿರಂಜೀವಿ ಕುಮಾರ್ ಮೇಘರಾಜ್ ರೆಡ್ಡಿ ಇವರು ತಮ್ಮ ತಂದೆಯವರ ಭಾಷಣದ ತುಣುಕುಗಳನ್ನು ಸೆರೆ ಹಿಡಿದು “ಮಾತು ಮಾಣಿಕ್ಯ” ಪುಸ್ತಕವನ್ನು ತಂದೆಯವರ ಮಾರ್ಗದರ್ಶನದಲ್ಲಿ ಸಂಗ್ರಹಿಸಿ, ಪ್ರಕಟಿಸಿ, ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದು ಹೆಮ್ಮೆಯ ವಿಷಯವಾಗಿದೆ.
ಮಾಡಿದ್ದು ಕೆಡುವುದಿಲ್ಲ ,ನೀಡಿದ್ದು ಕೆಡುವುದಿಲ್ಲ ,ಮನದಿಂದ ಮಾಡಿದ ಸೇವೆ ಶಿವನಿಗೆ ಅರ್ಪಣೆ ಯಾಗುವಲ್ಲಿಸಂದೇಹವಿಲ್ಲ. ಎಂಬುದಕ್ಕೆ ಕುಮಾರ್ ಮೇಘರಾಜ್ ರೆಡ್ಡಿ ಮಾಡಿರುವ ಕೆಲಸವು ಶ್ಲಾಘನೀಯವಾಗಿದೆ. ಸನ್ಮಾನ್ಯ ಜಿ.ಎಸ್ ಗೋನಾಳರು, ವಚನ ಸಾಹಿತ್ಯದಲ್ಲಿಯೂ ಹೆಸರು ಮಾಡಿರುವರು, ಆಡು ಮುಟ್ಟದ ಮರವಿಲ್ಲ ಸಾಹಿತಿ ಬರೆಯದ ವಿಷಯವೇ ಇಲ್ಲ ಎಂಬುವ ಮಾತಿಗೆ ಗೋನಾಳರು ಉದಾಹರಣೆ ಯಾಗಿದ್ದಾರೆ. ಸರ್ವರೊಳ ಒಂದಾಗಿ ಜೀವನ ಕಳೆಯುವುದೇ ಇವರ ಜೀವನದ ಹೆಗ್ಗುರಿ ಯಾಗಿದೆ.
“ಬಾರದು ಬಪ್ಪದು ತಪ್ಪದು” ಎಂಬ ಮಾತಿಗೆ ತಲೆಬಾಗಿ “ಬಂದದ್ದೆಲ್ಲ ಬರಲಿ ಶ್ರೀ ಗೌಸಿದ್ಧನ ದಯವಿರಲಿ” ಎಂದು ಸರ್ವರೋಳ ಒಂದಾಗಿ ನಗು ನಗುತ್ತಾ ಜೀವನ ಕಳೆಯುವುದು, ಮತ್ತೊಬ್ಬರಿಗೆ ಪ್ರೇರಣೆಯನ್ನು ಮಾಡುತ್ತದೆ.
ಇವರು ಚಿತ್ರೋತ್ಸವದಲ್ಲಿ ಭಾಗಿಯಾಗಿ, ಸಾಹಿತ್ಯ, ಕವಿತೆಗಳ ರಚನೆಯನ್ನು ಮಾಡಿರುವುದು, ಇವರೊಬ್ಬ ಕಲಾಕಾರರು, ಎಂದು ತಿಳಿಸಲು ಹೆಮ್ಮೆಯ ವಿಷಯವಾಗಿದೆ.
ಶ್ರೀಯುತ ರಾದ ಜಿ.ಎಸ್ ಗೋನಾಳರು ಒಳ್ಳೆಯ ವಾಘ್ಮಿಗಳು ಮತ್ತು ಒಳ್ಳೆ ಭಾಷಣಕಾರರು. ತಮ್ಮ ಭಾಷಣದ ತುಣುಕುಗಳಲ್ಲಿ ನಾಡು ನುಡಿ ವಚನಗಳ ಸಾರಾಂಶ, ಸದ್ಭಾವನೆ, ಪತ್ರಿಕಾ ದಿನಾಚರಣೆ, ಮೊದಲು ಮಾನವರಾಗಿರಿ ಎನ್ನುವ ಸಂದೇಶ ನುಡಿಯ ಮೆಚ್ಚಿಕೆಯ ವಿಷಯವಾಗಿವೆ. ಹಿರಿಯ ಸಾಹಿತಿಗಳ ಹಿತ ಚಿಂತನೆಯ ಮಾತುಗಳು ಅಮೃತಕ್ಕೆ ಸಮಾನವಾಗಿವೆ. ಕಾಳುಗಳು ಮೊಳೆಯುವಂತೆ ನಮ್ಮ ಬಾಯಿಂದ ಬರುವ ಮಾತುಗಳು ಸಹ ಮೊಳೆದು ಸಸಿಯಾಗಿ ಗಿಡವಾಗಿ ಫಲ ಪ್ರದವಾದಾಗ, ಇನ್ನೂಳಿದ ಸಾಹಿತಿಗಳಿಗೆ, ಜೇನುವಾಗುವಲ್ಲಿ ಸಂದೇಹವಿಲ್ಲದಾಗಿದೆ.
ಸನ್ಮಾನ್ಯರ ಜೀವನ ಆದರ್ಶ ಮಯವಾಗಲಿ, ಎಂದು ತಿಳಿಸುತ್ತೇನೆ. ಮೊಂಬತ್ತಿ ಯಂತೆ ನಿಮ್ಮ ಜೀವನ ವಾಗಲಿ, ದೀಪದೊಳಗಿನ ಬತ್ತಿಯಂತೆ, ಉರಿದು ಬೆಳಕು ನೀಡಲಿ, ಈ ಕಾರಣ ಮನುಕುಲದಲಿ ನಿಮ್ಮ ಜೀವನ ಆದರ್ಶವಾಗಲಿ. ಎಂದು ಹೇಳುತ್ತಾ ನಿಮ್ಮ ಜೀವನ ಮಲ್ಲಿಗೆಯಂತೆ ಸೌಗಂಧ ಸೂಶಿ, ಜೇನಿನಂತೆ, ಸಿಹಿಯಾಗಿ, ಮರದ ನೆರಳಾಗಿ ಸಾಗಲಿ ಎಂದು “ನಿಮ್ಮ ಬಾಳುತ್ತನೆಯ” ಹಾರೈಸುವನು. ಪ್ರೀತಿ ಮತ್ತು ವಿಶ್ವಾಸವಿರಲಿ, ಬಾಳು ಬಂಗಾರವಾಗಲು ಸಹನೆ ಮತ್ತು ಕರುಣೆ ಇವುಗಳು ನಿಮ್ಮಲ್ಲಿ ಮನೆ ಮಾಡಿವೆ, ಎಂದು ಹೇಳಿ ಕುಟುಂಬಕ್ಕೆ ಶುಭಾಶಯ ಕೋರಿ, ನನ್ನ ನುಡಿ ನಮನಗಳನ್ನು ಹೇಳುವೆ…..

ಬಸವರಾಜ್ ಎಂ ಹಳ್ಳಿ ನಿವೃತ್ತ ಶಿಕ್ಷಕರು, ಸಾಹಿತಿಗಳು. ಬಾಳುತಾನೆಯ. ಸಾಕಿನ್. ಇಟಗಿ. ತಾಲೂಕು ಕುಕುನೂರು. ಜಿಲ್ಲಾ ಕೊಪ್ಪಳ.
*************************”********************
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ವೀರಯ್ಯ.ಹೀರೇಮಠ.ಕೊಪ್ಪಳ