ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿರುವ ಎಮ್ಮೆಯನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯವರು.
ಜಕಾರಟ್ಟಿ ಸ.14

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಕಾರಟ್ಟಿ ಗ್ರಾಮದಲ್ಲಿ ಪಾಂಡುರಂಗ.ಮಲ್ಲಪ್ಪ.ಗೋಗರೆ ಎಂಬುವವರ ಬಾವಿಯಲ್ಲಿ ಅದೇ ಗ್ರಾಮದ ಸಂಜಯ್ ತುಕಾರಾಂ ಪವಾರ ಎಂಬುವವರ ಎಮ್ಮೆಯೂ ಬಾವಿಯ ಪಕ್ಕದಲ್ಲಿ ಮೇಯ್ಯುತ್ತಾ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ 13/09/2024 ರಂದು ಸಮಯ ಮದ್ಯಾಹ್ನ 01:00 ಕ್ಕೆ ಶುಕ್ರವಾರ ನಡೆದಿದೆ.

ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಜಲವಾಹನ ಮತ್ತು ಸಿಬ್ಬಂದಿಯವರು, ರಕ್ಷಣಾ ಸಾಮಗ್ರಿ ಗಳೊಂದಿಗೆ ಶ್ರೀ.ಅಕ್ಬರ್. ಮುಲ್ಲಾ. ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರು ಒಳಗೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ನೀರಿರುವ ಬಾವಿಯಲ್ಲಿ ಅಂದಾಜು 30×30 ಅಳತೆಯ 55 ರಿಂದ 60 ಅಡಿ ಆಳದಲ್ಲಿ ಎಮ್ಮೆಯೂ ಮೇಯ್ಯುತ್ತಾ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಕಪ್ಟ ಪಟ್ಟು ಸುಮಾರು 02 ಗಂಟೆ 10 ನಿಮಿಷಗಳ ಕಾರ್ಯಚರಣೆ ಮಾಡಿ ಎಮ್ಮೆಯನ್ನು ಜೀವಂತವಾಗಿ ನೀರಿರುವ ಬಾವಿಯಿಂದ ಹೊರ ತೆಗೆದು ಜೀವಂತ ರಕ್ಷಣೆ ಮಾಡಲಾಯಿತು.

ಈ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಯವರ ವಿವರಗಳು 01).ಅಕ್ಬರ್. ಮುಲ್ಲಾ ಠಾಣಾಧಿಕಾರಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ 02) ಶ್ರೀ.ಎಮ್.ಎಮ್. ಬಂದಾಳ ಪ್ರಮುಖ ಅಗ್ನಿಶಾಮಕರು. 03)ಪ್ರಶಾಂತ ಚವಾಣ ಅಗ್ನಿಶಾಮಕ ಚಾಲಕರು 04)ರವೀಂದ್ರ ಸಂಗಮ ಅಗ್ನಿಶಾಮಕರು 05) ಮೊಹಶಿನ್ ಪಠಾಣ. ಅಗ್ನಿಶಾಮಕರು 06).ಸಂತೋಷ ಧರಮಟ್ಟಿ 07)ಅಕ್ಷಯ ಕೋಲಾಪುರೆ ಸಿಬ್ಬಂದಿಯವರು ಇತರರು ಮತ್ತು ಊರಿನ ಗ್ರಾಮಸ್ಥರು ಕಾರ್ಯಾಚರಣೆ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಜಕಾರಟ್ಟಿ ಗ್ರಾಮದಲ್ಲಿ ಅಗ್ನಿಶಾಮಕ ಇಲಾಖೆಗೆ ಅಗ್ನಿಶಾಮಕದ ಸಿಬ್ಬಂದಿ ಯವರುಗಳಿಗೆ ತುಂಬಾ ತುಂಬಾ ಧನ್ಯವಾದಗಳು ತಿಳಿಸಿದರು. ನೀವು ಮಾಡುವ ಕೆಲಸ ಜೀವ ರಕ್ಷಿಸುವ ಕೆಲಸವಾಗಿದೆ ಭಗವಂತ ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಸದಾಕಾಲ ಉನ್ನತ ಮಟ್ಟಕ್ಕೆ ಮತ್ತು ದೊಡ್ಡ ಹುದ್ದೆಗಳನ್ನು ಸ್ವೀಕರಿಸಲಿ ಎಂದು ಹೇಳಿ ಶುಭ ಹಾರೈಸಿದರು.