ಕೂಡ್ಲಿಗಿ ಕೃಷಿಕ ಸಮಾಜ ಚುನಾವಣೆಗೆ – ಅವಿರೋಧ ಆಯ್ಕೆ.
ಕೂಡ್ಲಿಗಿ ಜ.01

ದಿನಾಂಕ 31.12.2024 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆದಿದ್ದು ಎಲ್ಲಾ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರತಿ ನಿಧಿಯಾಗಿ ಎಂ, ಬಸವರಾಜ್ ಕಕ್ಕುಪ್ಪಿ, ಅಧ್ಯಕ್ಷರಾಗಿ ಎಂ.ಜಿ ಸಿದ್ದನಗೌಡ ಶಾಂತನಳ್ಳಿ ಉಪಾಧ್ಯಕ್ಷರಾಗಿ ಜಯಣ್ಣ ಜಂಗಮ ಸೋವೆನಹಳ್ಳಿ ಪ್ರಧಾನ ಕಾರ್ಯದರ್ಶಿಯಾಗಿ ಬ್ಯಾಳಿ ವಿಜಯಕುಮಾರ್ ಗೌಡ, ಖಜಾಂಚಿ ಶಬ್ಬೀರ್ ಸಾಹೇಬ್ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಮ್.ಜಿ ಸಿದ್ದನಗೌಡ ಇವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಮರು ಆಯ್ಕೆ ಗೊಂಡಿದ್ದಾರೆ ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಯಾಗಿ ವಾಮದೇವ ಕೊಳ್ಳಿ ಇವರು ನಿರ್ವಹಿಸಿದರು ಇಲಾಖೆ ಅಧಿಕಾರಿಗಳು ಶ್ರವಣ ಕುಮಾರ್, ಸಾಂಭೋಜಿ ರಾವ್ ನೀಲ ನಾಯಕ್ ಮತ್ತು ಅಖಿಲ ಭಾರತೀಯ ರೈತ ಪಾರ್ಟಿಯ ಉಪಾಧ್ಯಕ್ಷರಾಗಿರ ತಕ್ಕಂತಹ ಶಿವಾನಂದ ಸ್ವಾಮಿ ಮತ್ತು ನಿರ್ದೇಶಕರು ನ್ಯಾಯ ವಾದಿಗಳಾದ ಸಿದ್ದಪ್ಪ ವಕೀಲರು ನಿರ್ದೇಶಕರಾದಂತಹ ಗಂಗಣ್ಣ ಯಂಬಳಿ, ನಟರಾಜ್ ಓ.ಟಿ ಎಂ ಬಿ ಅಯ್ಯನಹಳ್ಳಿ ವೀರಣ್ಣ. ಕಾನಾಮಡುಗು ಹಿರಿಯರಾದಂತಹ ಚಂದ್ರಯ್ಯ ಸ್ವಾಮಿ, ಬಣವಿ ಕಲ್ ಎರಿಸ್ವಾಮಿ , ವೀರೇಶ್ ಗೌಡ ಓಬಳಾಪುರ ವಿಜಯಕುಮಾರ್ ಕಲ್ಲಳ್ಳಿ, ಕೆ.ನಾರಾಯಣ ರೆಡ್ಡಿ ಮತ್ತು ಹಿರಿಯರಾದಂತಹ ನಂದಿ ಜಂಬಣ್ಣ ಇವರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ