ಹಾಲಕೆರೆಯ ಅನ್ನದಾನೇಶ್ವರ ಜನೇವರಿ – 3. ಕ್ಕೆ ರಥೋತ್ಸವ.
ಹಾಲಕೇರಿ ಜ .01

ಗಜೇಂದ್ರಗಡ ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ ಲಿಂಗೈಕ್ಯ ಹಿರಿಯ ಅನ್ನದಾನ ಸ್ವಾಮಿಗಳ 112 ನೇ. ಪುಣ್ಯ ಸ್ಮರಣೋತ್ಸವ. ಲಿಂಗೈಕ್ಯ ಅಭಿನವ ಅನ್ನದಾನ ಸ್ವಾಮಿಗಳ ತೃತೀಯ ಪುಣ್ಯ ಸ್ಮರಣೋತ್ಸವ ಹಾಗೂ 174 ನೇ. ಅನ್ನದಾನೇಶ್ವರ ಮಹಾ ರಥೋತ್ಸವದ ಕಾರ್ಯಕ್ರಮಗಳು ನಡೆಯಲಿವೆ.ಜ. 2 ಹಾಗೂ 3 ರಂದು ಮಧ್ಯಾಹ್ನ 12ಕ್ಕೆ ಮಹಾ ಗಣಾರಾಧನೆ ನಡೆಯಲಿದೆ. ಸಂಜೆ 6.30 ಕ್ಕೆ ನಡೆಯುವ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವನ್ನು ವಳಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ವಹಿಸುವರು.ನಂದವಾಡಗಿ ಮಹಾಂತೇಶ್ವರ ಮಹಾಂತಲಿಂಗ ಚಳಗೇರಿಯ ಆಳಂದದ ಹಿರೇಮಠದ ಶಿವಾಚಾರ್ಯರು, ವೀರಸಂಗಮೇಶ್ವರ ಶಿವಾಚಾರ್ಯರು, ದರೂರು ಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮೀಜಿ, ಶ್ರೀಧರಗಡ್ಡೆ ಮರಿಕೊಟ್ಟೂರು ದೇಶಿಕರು. ಸೋಮ ಸಮುದ್ರದ ಸಿದ್ದಲಿಂಗ ದೇಶಿಕರು. ಬೂದಗುಂಪದ ಸಿದ್ದೇಶ್ವರ ದೇಶಿಕರು, ಸಂಗನಹಾಲದ ವಿಶ್ವೇಶ್ವರ ದೇವರು ಪಾಲ್ಗೊಳ್ಳಲಿದ್ದಾರೆ. ಬಾಲಕೋಟೆಯ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಜಿ.ಜಿ ಹಿರೇಮಠ ಉಪನ್ಯಾಸ ನೀಡಲಿದ್ದಾರೆ. ಜ. 3 ರಂದು ಬೆಳಿಗ್ಗೆ 5 ರಿಂದ 7 ರವರೆಗೆ ಗದ್ದುಗೆ ಗಳಿಗೆ ಸ್ವಾಮೀಜಿಯವರ ರುದ್ರಾಭಿಷೇಕ, ಮಂಗಳಾರತಿ ಜರುಗಲಿದೆ. ಬಿಲ್ವಾರ್ಚನೆ ಬೆಳಿಗ್ಗೆ 10 ಕ್ಕೆ ನಾಗಲಾಪುರ- ಕುರುಗೋಡಿನ ಒಪ್ಪತ್ತೇಶ್ವರಸ್ವಾಮಿ ಮಠದ ನಿರಂಜನಪ್ರಭು ಸ್ವಾಮಿಗಳ ಸಮ್ಮುಖದಲ್ಲಿ ಜಂಗಮೋತ್ಸವ ನಡೆಯಲಿದೆ.

ಸಂಜೆ 5 ಕ್ಕೆ ಜರುಗುವ 174 ನೇ. ಅನ್ನದಾನೇಶ್ವರ ಮಹಾ ರಥೋತ್ಸವದಲ್ಲಿ ಇಟಗಿ ಗ್ರಾಮಸ್ಥರು ಕಲಾತ್ಮಕವಾದ ಡಮಣಿ ಗಾಡಿಯಲ್ಲಿ ತೇರಿನ ಹಗ್ಗವನ್ನು ತರುವರು. ಹೊಸಳ್ಳಿಯ ನಂದಿಕೋಲು ಗ್ರಾಮಸ್ಥರು ಸೇವೆ ಸಲ್ಲಿಸಲಿದ್ದಾರೆ. ಸಂಜೆ 6 ಕ್ಕೆ ಅನ್ನದಾನೇಶ್ವರ ನಡೆಯಲಿದೆ.ಕಾರ್ತಿಕೋತ್ಸವ ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಶಿವಾನುಭವ ಗೋಷ್ಠಿ ಹಾಗೂ ಹಾಲಕೆರೆ ಐಸಿರಿ ಗ್ರಂಥ ಬಿಡುಗಡೆ ನಡೆಯಲಿದೆ. ಉತ್ತಂಗಿ ಕೊಟ್ಟೂರು ಕೊಟ್ಟೂರೇಶ್ವರ ಮಠದ ಸೋಮಶೇಖರ ಸ್ವಾಮೀಜಿ, ಕೊಟ್ಟೂರಿನ ಜಾನ ಡೋನೂರು ಕೋಟಿಮಠದ ಶಿವಾಚಾರ್ಯರು, ಸಿದ್ದಲಿಂಗ ತೆಲಂಗಾಣ ನೇರಡಗಂಬದ ಪಶ್ಚಿಮಾದ್ರಿ ಮಠದ ಸಿದ್ದಲಿಂಗ ಶಿವಲಿಂಗೇಶ್ವರ ಸಂಸ್ಥಾನ ಮಠದ ಶಿವಲಿಂಗ ಸ್ವಾಮೀಜಿ, ಜಿಗೆರಿಯ ಗುರುಸಿದ್ದ ಶಿವಾಚಾರ್ಯರು. ಗುಳೇದ ಗುಡ್ಡದ ಮರಡಿಮಠದ ಕಾಡಸಿದ್ದೇಶ್ವರ ಶಿವಾಚಾರ್ಯರು, ಹೊಸಪೇಟೆಯ ಕೆಂಪಿನ ಸ್ವಾಮಿ ಮಠದ ಸಿದ್ದಲಿಂಗ ಸ್ವಾಮೀಜಿಯ ಖೇಳಿಗಿ ಶರಣಬಸವ ದೇವರು ಹಳoಗಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ರೋಣ ಶಾಸಕ ಜಿ ಎಸ್ ಪಾಟೀಲಳ ಮಾಜಿ ಶಾಸಕ ಕಳಕಪ್ಪ ಜಿ. ಬಂಡಿ ಭಾಗವಹಿಸಲಿದ್ದಾರೆ. ಎಂದು ಶ್ರೀಮಠದಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ. ಗದಗ