ಡಾಟಾ ಎಂಟ್ರಿ ಆಪರೇಟರ್ ಆಗಿ ಸೇವೆಗೆ ಸೇರ್ಪಡೆ ಗೊಂಡ ಸಾಗರ ಕಾಂಬಳೆ ಯವರನ್ನು – ಕಾಂಗ್ರೆಸ್ ಪಕ್ಷದಿಂದ ಸನ್ಮಾನ.
ಮದಭಾವಿ ಜ.03

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸಾಗರ ಕಾಂಬಳೆ ಅವರು ಅಥಣಿ ತಹಸೀಲ್ದಾರ ಕಾರ್ಯಾಲಯದಲ್ಲಿ ನೂತನವಾಗಿ ಭೂ ಸುರಕ್ಷಾ ಯೋಜನೆ ಅಡಿಯಲ್ಲಿ ಗಣಕೀಕರಣ ಡಾಟಾ ಎಂಟ್ರಿ ಆಪರೇಟರರಾಗಿ ಸೇವೆಗೆ ಸೇರ್ಪಡೆ ಗೊಂಡಿದರಿಂದ ಮದಭಾವಿ ಗ್ರಾಮದ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಸನ್ಮಾನಿಸಲಾಯಿತು. ತಮ್ಮ ಪ್ರಾಮಾಣಿಕ ಸೇವೆಯಲ್ಲಿ ಹೆಚ್ಚಿನ ಹುದ್ದೆ ಸಿಗಲಿ ಎಂದು ಕಾಂಗ್ರೇಸ್ ಪಕ್ಷದ ಮುಖಂಡರಾದ ಪ್ರವೀಣ ನಾಯಿಕ ಶುಭ ಹಾರೈಸಿದರು. ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ ಕಲ್ಲೋತಿ ಅವರ ಹುಟ್ಟು ಹಬ್ಬ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮಠಪತಿ, ಗ್ರಾಮ ಪಂಚಾಯತ ಸದಸ್ಯರಾದ ಸಂಜಯ ಅದಾಟೆ ಮುಖಂಡರಾದ ಅರ್ಜುನ ಕಾಂಬಳೆ, ಸಂಜಯ ಬಡಿಗೇರ, ಮುಕುಂದ ಮೋರೆ, ವಿನಾಯಕ ಕಲ್ಲೋತಿ ರಾಹುಲ ಕಾಂಬಳೆ, ಅನೀಲ ಗಾಡಿವಡ್ಡರ, ಭರಮು ಶೇಡಬಾಳೆ, ನಿಂಗಪ್ಪಾ ಗಾಡಿವಡ್ಡರ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ