ಭೂ ದಾಖಲೆಗಳು ಡಿಜಿಟಲ್ ಮಾಧ್ಯಮದಲ್ಲಿ – ರೈತರಿಗೆ ಲಭ್ಯ.

ರೋಣ ಜ .09

ರಾಜ್ಯ ಸರಕಾರ ಅತ್ಯಂತ ಮಹತ್ವದ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತರುವ ಮೂಲಕ ನಿಮ್ಮ ಭೂ ದಾಖಲೆಗಳನ್ನು ನಿಮ್ಮ ಅಂಗೈಯಲ್ಲಿ ನೀಡುವ ಅನೇಕ ರೀತಿಯ ಗೊಂದಲ ನಿವಾರಿಸಿದ್ದು, ಜನರು ಇನ್ನು ನಿಮ್ಮ ಅಗತ್ಯ ದಾಖಲೆಗಳನ್ನು ನೀವು ಇದ್ದ ಜಾಗದಲ್ಲಿಯೇ ನೊಡಬಹುದು ಎಂದು ರಾಜ್ಯ ಕ.ನಿ.ಜ ನಿಗಮದ ಅಧ್ಯಕ್ಷ ಶಾಸಕ ಜಿ.ಎಸ್ ಪಾಟೀಲ ಹೇಳಿದರು.ಬುಧವಾರ ತಹಶೀಲ್ದಾ‌ರ್ ಕಚೇರಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣದ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕು ಕಚೇರಿ, ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳನ್ನು ಹಾಗೂ ಹಳೆಯ ದುಸ್ಥಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿಟಲ್ ದಾಖಲೆಗಳಾಗಿ ಪರಿವರ್ತನೆ ಗೊಳಿಸಿ, ಮುಖ್ಯವಾಗಿ ರೆಕಾರ್ಡ್ ರೂಮ್ಗಳಿಂದ ಪಡೆದು ಕೊಳ್ಳಲು ಇರುವ ತೊಂದರೆಗಳನ್ನು ನಿವಾರಿಸಲು ಭೂ ಸುರಕ್ಷಾ ಯೋಜನೆ ಮಹತ್ವ ಪಡೆದು ಕೊಂಡಿದೆ. ರೈತರು ಯೋಜನೆಯ ಬಗ್ಗೆ ತಿಳಿದು ಕೊಳ್ಳಬೇಕು ಎಂದು ಸಲಹೆ ನೀಡಿದರು. ಇದಲ್ಲದೆ ರಾಜ್ಯ ಸರಕಾರ ನಾಡಿನ ರೈತರ ಹಿತಕ್ಕಾಗಿ ಮತ್ತು ಸಾರ್ವಜನಿಕರ ಮತ್ತು ಮಳೆಯರ ಕಲ್ಯಾಣಕ್ಕಾಗಿ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತಂದು ಅವುಗಳನ್ನು ನೇರವಾಗಿ ಫಲಾನುಭಗಳಿಗೆ ಮುಟ್ಟಿಸುವಲ್ಲಿ ತನ್ನ ಪ್ರಾಮಾಣಿಕತೆಯನ್ನು ಮೆರೆದಿದೆ. ಅಲ್ಲದೆ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದು ನಾಡಿನ ಜನರಿಗೆ ಮತ್ತಷ್ಟು ನೆಮ್ಮದಿಯನ್ನು ರಾಜ್ಯ ಸರಕಾರ ನೀಡಿದ್ದು, ಸರಕಾರದ ಮೆಲೆ ನಾಡಿನ ಜನರ ಆಶೀರ್ವಾದ ಇರಬೇಕು ಎಂದರು. ತಹಶೀಲ್ದಾ‌ರ್ ನಾಗರಾಜ ಕಿರಣಕುಮಾರ ಕುಲಕರ್ಣಿ, ಉಪ ತಹಶೀಲ್ದಾ‌ರ್ ಜೆ.ಟಿ.ಕೊಪ್ಪದ, ಬಿ.ಸೋಮನಕಟ್ಟಿಮಠ, ನಾಗರಾಜ, ಸಿಬ್ಬಂದಿಯಾದ ಸೋಮು.ಎಲ್ ಎಸ್.ದಾಸಪ್ಪನವರ, ಸಂಗೀತಾ ತಳವಾರ, ಸುವರ್ಣಾ ಜುಮ್ಮನಕಟ್ಟಿ ಸೇರಿದಂತೆ ಇದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button