ಕೆ.ಡಿ.ಪಿ ಸಭೆಯಲ್ಲಿ ಕೆಲಸ ಮಾಡದ ಅಧಿಕಾರಿಗಳಿಗೆ ಜಾಗ ಖಾಲಿ ಮಾಡ ಬೇಕೆಂದು ಖಡಕ್ಕಾಗಿ ಎಚ್ಚರಿಕೆ ನೀಡಿದ – ಸಚಿವ ಆರ್.ಬಿ ತಿಮ್ಮಾಪುರ್.
ಮುಧೋಳ ಜ.11

ಮುಧೋಳ ನಗರ ಮತ್ತು ತಾಲೂಕಿನ ಒತ್ತುವರಿ ಯಾಗಿರುವ ಕೆರೆಗಳನ್ನು ತೆರವು ಗೊಳಿಸಬೇಕು ಸರ್ಕಾರಿ ಜಾಗ ಅತಿಕ್ರಮಣ ಮಾಡಿ ಕೊಂಡಿರುವವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾದರು ಯಾವುದೇ ಮುಲಾಜಿಲ್ಲದೆ ತೆರವು ಗೊಳಿಸಬೇಕು ಎಂದು ತಾಲೂಕ ಆಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪುರ್ ಖಡಕ್ ಎಚ್ಚರಿಕೆ ನೀಡಿದರು. ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕ ಮಟ್ಟದ ದ್ವಿತೀಯ ತ್ರೈಮಾಸಿಕ ಪ್ರಗತಿ ಪರಿಶೀಲಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಹೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಿ ವಿನಾಃ ಕಾರಣ ಅವರನ್ನು ಸತಾಯಿಸ ಬಾರದು ಈ ಬಗ್ಗೆ ನನಗೆ ದೂರು ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಯನ್ನು ವಿವರವಾಗಿ ಪರಿಶೀಲಿಸಿ ಕೆಲವು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡರು ಕುಡಿಯುವ ನೀರು ಆರೋಗ್ಯ ವಿದ್ಯುತ್ ನಗರ ಹದಗೆಟ್ಟ ರಸ್ತೆಗಳು ಸ್ವಚ್ಛತೆ ತರಕಾರಿ ಮಾರುಕಟ್ಟೆ ಸ್ಮಶಾನ ಭೂಮಿ ನಿರ್ಮಾಣ ಸಮುದಾಯ ಭವನಗಳ ಕುರಿತು ತಿಮ್ಮಾಪುರ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಂಡರು ಸರ್ಕಾರದ ಅನುದಾನದ ಸದ್ಬಳಕೆ ಮಾಡಿಕೊಂಡು ನಿಗದಿ ಪಡಿಸಿದ ಕಾಲ ಮಿತಿಯಲ್ಲಿಯೇ ಕಾಮಗಾರಿಯನ್ನು ಪೂರ್ಣ ಗೊಳಿಸಬೇಕು ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದಂತೆ ನೋಡಿ ಕೊಳ್ಳಬೇಕು ಹಾಗೂ ಅವರು ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಬೇಕು ಸಭೆಗೆ ಬರುವಾಗ ಪೂರ್ಣ ಮಾಹಿತಿಯೊಂದಿಗೆ ಬರ ಬೇಕೆಂದು ಕಟ್ಟು ನಿಟ್ಟಿನ ಆದೇಶ ನೀಡಿದರು. ಕೆಲಸ ಮಾಡದ ಸೋಮಾರಿ ಅಧಿಕಾರಿಗಳ ಕೂಡಲೇ ಜಾಗ ಕಾಲಿ ಮಾಡಬೇಕೆಂದು ತಿಮ್ಮಾಪುರ ಎಚ್ಚರಿಸಿದ್ರು. ಜಿಲ್ಲಾಧಿಕಾರಿ ಕೆ.ಎಂ ಜಾನಕಿ ಜಿಲ್ಲಾ ಪಂಚಾಯಿತಿ ಸಿ.ಇ.ಓ ಶಶಿಧರ್ ಕುರೇರ ಆಡಳಿತ ಅಧಿಕಾರಿ ಸಿದ್ದರಾಮಯ್ಯ ಉಕಲಿ ಎ.ಎಸ್.ಪಿ ಪ್ರಸನ್ನ ದೇಸಾಯಿ ಎ.ಸಿ ಶ್ವೇತಾ ಬಿಡಕರ್ ತಹಸಿಲ್ದಾರ್ ಮಹದೇವ್ ಸನ್ಮೂರಿ ತಾಲೂಕ ಪಂಚಾಯತಿ ನೀವು ಉಮೇಶ್ ಸಿದ್ದನಾಳ ಪ್ರಕಾಶ್ ರಜಪೂತ್ ವೇದಿಕೆಯಲ್ಲಿದ್ದರು ಸಿಪಿಐ ಮಹದೇವ್ ಶಿರಹಟ್ಟಿ ಪೌರಾಯುಕ್ತ ಗೋಪಾಲ್ ಕಾಶಿ ಅಧಿಕಾರಿಗಳಾದ ಡಾಕ್ಟರ್, ಅಶೋಕ್ ಊರ್ವಶಿ ವೀರಣ್ಣ ಮರ್ಕಟ್ಟಿ ಪಂಚಾಯತಿ ಅಭಿವೃದ್ಧಿ ರಾಜ್ಯ ಅಧ್ಯಕ್ಷರಾದ ರಾಜು ವಾರದ್ ಸಮಾಜ ಕಲ್ಯಾಣ ಮೋಹನ್ ಕೊರಡ್ಡಿ ರಮೇಶ್ ಆಸಂಗಿ ಎಚ್ ಡಿ ಧೋನಿ ರಮೇಶ್ ವಂಗಿ ತಾಲೂಕ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ್ ರವರಿಗೆ ಮಾಹಿತಿ ನೀಡಿದರು.
ವರದಿ : ಲಕ್ಷ್ಮಣ.ಹಾದಿಮನಿ.ಮುಧೋಳ