ಮನಸ್ಸೇ ಬಂಧನ ಮತ್ತು ಮೋಕ್ಷಕ್ಕೆ ಕಾರಣ – ಮಾತಾಜೀ ಜ್ಯೋತ್ಸ್ನಾಮಯೀ ಹೇಳಿಕೆ.
ಚಳ್ಳಕೆರೆ ಮೇ.31

ಮನಸ್ಸೇ ಬಂಧನಕ್ಕೂ ಮತ್ತು ಮೋಕ್ಷಕ್ಕೂ ಕಾರಣ ಎಂದು ಕನಕಪುರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ಜ್ಯೋತ್ಸ್ನಾಮಯೀ ತಿಳಿಸಿದರು. ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಹಾತ್ಮರ ಜೀವನ ಮತ್ತು ಸಂದೇಶಗಳ ಅಧ್ಯಯನ ಹಾಗೂ ಅನುಸರಣೆಯಿಂದ ನಮ್ಮ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ.

ನಿಯಂತ್ರಣಕ್ಕೆ ಬಂದ ಮನಸ್ಸಿನಿಂದ ಸುಖ ದುಖಗಳನ್ನು ಸಮಾನವಾಗಿ ಎದುರಿಸುವ ಧೈರ್ಯ ಬರುತ್ತದೆ. ಆದ್ದರಿಂದ ಮನಸ್ಸಿದ್ದರೆ ಮಾರ್ಗ ಎಂದು ನಮ್ಮ ಹಿರಿಯರು ತಿಳಿಸಿದ್ದಾರೆ ಎಂದರು. ಈ ಸತ್ಸಂಗದ ಪ್ರಯುಕ್ತ ವಿಶೇಷ ಭಜನೆ ಮತ್ತು ಆರತಿ ನಡೆಯಿತು. ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ, ಸದ್ಭಕ್ತರಾದ ಮಯೂರಿ, ಹೂವಿನ ಲಕ್ಷ್ಮೀದೇವಮ್ಮ, ಪಂಕಜ, ಸುಧಾಮಣಿ, ಶ್ರೀಮತಿ ಜಿ.ಯಶೋಧಾ ಪ್ರಕಾಶ್, ಯತೀಶ್.ಎಂ ಸಿದ್ದಾಪುರ, ವನಜಾಕ್ಷಿ ಮೋಹನ್, ಸುರೇಶ್, ನಾಗರಾಜ್, ಉಷಾ ಶ್ರೀನಿವಾಸ್, ಮಂಜುಳ ಉಮೇಶ್, ಚೇತನ್,ಋತಿಕ್, ಶೈಲಜ ಶ್ರೀನಿವಾಸ್, ರಶ್ಮಿ ವಸಂತ, ಸಂಗೀತ ವಸಂತಕುಮಾರ್, ಪ್ರತೀಕ್ಷಾ, ಯಶಸ್ವಿ, ಧ್ರುವ ನಾರಾಯಣ, ನಿಖಿಲೇಶ್ ಯಾದವ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.