ಕಂದಗಲ್ಲು ಗ್ರಾಮದ ಉಡಚಲಮ್ಮ ದೇವಿ ದೇವಸ್ಥಾನಕ್ಕೆ – 1.50 ಲಕ್ಷ ಧರ್ಮಸ್ಥಳ ಸಂಘದಿಂದ ಮಂಜೂರು.
ಕೊಟ್ಟೂರು ಜ. 19

ಕೊಟ್ಟೂರು ಯೋಜನಾ ವ್ಯಾಪ್ತಿಯ ಸಿರಿಮಠ ವಲಯದ ಕಂದಗಲ್ಲು ಕಾರ್ಯ ಕ್ಷೇತ್ರದಲ್ಲಿ ಉಡಚಲಮ್ಮಾದೇವಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸ್ಥಾನದ ಜಿರ್ನೋದ್ಧಾರಕ್ಕಾಗಿ 150000/- ಮಂಜೂರಾಗಿದ್ದು ಈ ಡಿ.ಡಿ ಯನ್ನು ವಿಜಯ ನಗರ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಅವರು ಕಮಿಟಿಯವರಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷರು ಹಾಗೂ ಊರಿನ ಮುಖಂಡರಾದ ನೀಲಕಂಠಪ್ಪ ಕಾರ್ಯದರ್ಶಿ ಸಿದ್ದಪ್ಪ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಶಿವಕುಮಾರ ಗೌಡ್ರು ಹಾಗೂ ಗ್ರಾ.ಪಂ ಸದಸ್ಯರಾದ ಹೆಚ್ ಪರಸಪ್ಪ, ಕುಭೆರಪ್ಪ, ಕೊಟ್ಟೂರು ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ನವೀನ ಕುಮಾರ ಹೆಚ್.ಡಿ ಒಕ್ಕೂಟದ ಅಧ್ಯಕ್ಷರಾದ ಗಂಗಾ ನಾಯ್ಕ ಉಪಾಧ್ಯಕ್ಷರಾದ ಶ್ರೀದೇವಿ ವಲಯದ ಮೇಲ್ವಿಚಾರಕರಾದ ಸಾವಿತ್ರಿ ನಾಗರಾಜ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸೌಮ್ಯ tno ಶಿವರಾಜ csc ಸೇವಾದಾರರಾದ ಸವಿತಾ ಸೇವಾ ಪ್ರತಿನಿಧಿ ಗಂಗಮ್ಮ ಹಾಗೂ ಕಮಿಟಿಯ ಸರ್ವ ಸದಸ್ಯರು ಊರಿನ ಮುಖಂಡರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್.ಸಿ.ಕೊಟ್ಟೂರು