ಮಂತ್ರಾಲಯಕ್ಕೆ 25 ನೇ. ವರ್ಷದ ರಜತ ಮಹೋತ್ಸವ ಪಾದಯಾತ್ರೆಗೆ – ದೇಶಪಾಂಡೆ ಚಾಲನೆ.

ಹುನಗುಂದ ಜ.21

ಸುತಗುಂಡಾರ ಮತ್ತು ಕಟಗೂರದ ಗುರುಸಾರ್ವಭೌಮ ಪಾದಯಾತ್ರಾ ಸಂಘವು ಹಮ್ಮಿಕೊಂಡ ಮಂತ್ರಾಲಯಕ್ಕೆ 25 ನೇ. ವರ್ಷದ ರಜತ ಮಹೋತ್ಸವದ ಪಾದಯಾತ್ರೆಗೆ ತಾ.ಪಂ ಇ.ಒ ಮುರಳೀಧರ ದೇಶಪಾಂಡೆ ಚಾಲನೆ ನೀಡಿದರು. ರವಿವಾರ ಸಾಯಂಕಾಲ ನಗರದ ಗುಡ್ಡದ ಚಾಳದಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಅಂದಾಜು 80 ಕ್ಕೂ ಹೆಚ್ಚು ಹಿರಿಯರು ಮತ್ತು ಯುವಕರು ಪ್ರತಿ ವರ್ಷದಂತೆ ಈ ವರ್ಷವೂ ಮಂತ್ರಾಲಯಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಯಾತ್ರೆಯಲ್ಲಿ ಸರ್ವಧರ್ಮರಿಯರು ಪಾಲ್ಗೊಂಡು ಮೊದಲ ರಾತ್ರಿ ಆದಾಪೂರದಲ್ಲಿ ವಾಸ್ತವ್ಯ ಮಾಡಿ ಮುದಗಲ್, ಸಂತೆಕೆಲೂರ, ಅಮೀನಗಡ, ರಾಜೊಳ್ಳಿ, ಹನುಮಾಪುರ, ಅಣುಮಂತ್ರಾಲಯ ಹೀಗೆ ಮಾರ್ಗವಾಗಿ ಮಂತ್ರಾಲಯ ತಲುಪುವರು. 5 ದಿನಗಳ ವರೆಗೆ ನಡೆಯುವ ಪಾದಯಾತ್ರೆಯ ನೇತೃತ್ವವನ್ನು ಗಿರಿ ಗುಡ್ಡದ ಮತ್ತು ನರಸಿಂಹ ಕಾಳಗಿ ವಹಿಸುವರು ಎಂದು ಅವರು ತಿಳಿಸಿದರು. ಹಿರಿಯರಾದ ರಾಜು ಗುಡ್ಡದ, ವೀರೇಶ ಕುರ್ತಕೋಟಿ, ಮಧುಸೂಧನ ಜೊಶಿ, ಭೀಮಣ್ಣ ದೇಸಾಯಿ, ವಿಜಯಲಕ್ಷ್ಮೀ ಗುಡ್ಡದ, ಸುರೇಖಾ ಕುಲಕರ್ಣಿ ಅಶ್ವಿನಿ ಪಾಠಕ, ಮಾಧವಿ ದೇಶಪಾಂಡೆ ಮತ್ತು ವಿದ್ಯಾ ಗುಡ್ಡದ ಯಾತ್ರಾರ್ಥಿಗಳಿಗೆ ಶುಭ ಹಾರೈಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಬಿ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button