ನಾಡ ಕಛೇರಿಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ – ಜಯಂತೋತ್ಸವ ಕಾರ್ಯಕ್ರಮ.

ಖಾನಾ ಹೊಸಹಳ್ಳಿ ಜ.21

ನಾಡ ಕಛೇರಿಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿ ಉಪ ತಹಶೀಲ್ದಾರರು ಚಂದ್ರ ಮೋಹನ್ ನೇರ, ನಿಷ್ಟುರ, ವಚನಕಾರ ವೀರಗಣಾಚಾರಿ 12 ನೇ. ಶತಮಾನದ ಶಿವ ಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಈ ನಾಡಿಗೆ ತಿಳಿಸಿದರು. ಕಟ್ಟಿದ ಲಿಂಗವ ಬಿಟ್ಟು, ಬೆಟ್ಟೆದ ಲಿಂಗಕ್ಕೆ ಹೋಗಿ. ಹೊಟ್ಟೆ ಹಡಿ ಮಾಡಿ ಮಲಗಿದ ಲೊಟ್ಟ ಮೂಲರ ಕಂಡು. ಮೆಟ್ಟಿದ್ದ ದೊಡ್ಡ ಪಾದರಕ್ಷೆಯ ತಕ್ಕೊಂಡು ಲಟ ಲಟನೆ ಹೊಡೆಯೆಂದಾತ ನಮ್ಮ ನಿಜಶರಣ ಅಂಬಿರ ಚೌಡಯ್ಯ ಎಂದು ಕಂದಾಯ ಪರೀಕ್ಷಕರಾದ ಸಿದ್ದಪ್ಪ ಹೇಳಿದರು. ನಂತರ ಗ್ರಾಮ ಲೆಕ್ಕಾಧಿಕಾರಿ ಚನ್ನಬಸಯ್ಯ ಎಸ್.ಎಂ ಮಾತನಾಡಿ ತೀಕ್ಷ್ಣ ವಚನಗಳಿಂದ ಶರಣರ ವಚನ ಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಶ್ರೇಷ್ಠ ವಚನಕಾರರು, ಸರ್ವ ಸಮಾನತೆಯ ಹರಿಕಾರರು ಮತ್ತು ಸಮಾಜ ಸುಧಾರಕರಾದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಸಮಾಜದಲ್ಲಿನ ತಾರತಮ್ಯ ನೀತಿಗಳ ವಿರುದ್ಧ ಹೋರಾಡಿ, ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರ ಗೊಳಿಸವಲ್ಲಿ ನಿಜಶರಣರ ಕೊಡುಗೆ ಅಪಾರ. ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀನಿವಾಸ ಕೊಂಡಿ. ಇಮ್ರಾನ್, ಕೊಟ್ರೇಶ್, ದೇವೇಂದ್ರ ನಾಯ್ಕ್, ಅಂಬುಜಾಕ್ಷಿ, ಸಂಪ್ರೀತಾ ಲೋಟನಕೆರೆ, ಮಮತಾ, ಅನಿತಾ ಪೂಜಾರ್, ಮತ್ತು ನಾಡಕಛೇರಿ ಅಪರೇಟರ್ ಗಳಾದ ಸಿದ್ದೇಶ್, , ಮಂಜುನಾಥ ಅಗ್ರಹಾರ. ನಾಗೇಶ್ ,ಹಾಗೂ ಇಧೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹೊನ್ನೂರ ಸ್ವಾಮಿ, ಸ್ವಾಮಿ ಹೊಸಹಳ್ಳಿ. ಹನುಮಂತಪ್ಪ ಕುಂಬಾರ್ ನಾಗರಾಜ್ ಸೇರಿದಂತೆ ಸಾರ್ವಜನಿಕರು ಉಪಸ್ಧಿತರಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button