ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯವಂತ ತಾಯಿ – ಆರೋಗ್ಯವಂತ ಮಗು.
ಹೊನ್ನಕಟ್ಟಿ ಜ.22

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಹೊನ್ನಾಕಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಸಮೀತಿ ವತಿಯಿಂದ “ಪೌಷ್ಟಿಕ ಆಹಾರ ಶಿಬಿರ” ಜಾಗೃತಿ ಆಯೋಜಿಸಲಾಗಿತ್ತು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ, ಎಸ್.ಎಚ್ ಬೀರಣ್ಣವರ ಹಿರಿಯರಾದ, ವೆಂಕಪ್ಪ ತಳವಾರ ಆರೋಗ್ಯ ನೀರೀಕ್ಷಣಾಧಿಕಾರಿ, ಎಸ್.ಎಸ್ ಅಂಗಡಿ ಅಂಬವ್ವ ಸೂರ್ಯವಂಶಿ, ಬಸವ್ವ ಪೂಜಾರಿ ಉತ್ತಮ ಆರೋಗ್ಯಕ್ಕಾಗಿ ಪೋಷಕಾಂಶಯುಕ್ತ ಆಹಾರ ಮಾಹಿತಿ ಕಿರು ಪುಸ್ತಕ ಬಿಡುಗಡೆ ಮಾಡುವ ಮುಖಾಂತರ ಗ್ರಾಮ ಆರೋಗ್ಯ ನೈರ್ಮಲ್ಯ ಸಮೀತಿ ಆಹಾರ ಶಿಬಿರದ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಪೋಷಕಾಂಶ ಕೊರತೆಯಿಂದ ಬಾಣಂತಿಯರು ಗರ್ಭೀಣಿಯರು ಕೊರತೆಯಿಂದ ಅಶಕ್ತತೆ ರೋಗ ನಿರೋಧಕ ಶಕ್ತಿ ಕುಂದುತ್ತದೆ ಮಕ್ಕಳಲ್ಲಿ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ ಆಧುನಿಕ ಜೀವನ ಶೈಲಿಯಿಂದ ಮಧುಮೇಹ, ರಕ್ತದೊತ್ತಡ ಆವರಿಸುತ್ತವೆ.

“ಆರೋಗ್ಯವಂತ ತಾಯಿ ಆರೋಗ್ಯವಂತ ಮಗು ” ಅಂಗನವಾಡಿ ಕೇಂದ್ರದಲ್ಲಿ ವಿತರಿಸುವ ಬೇಳೆ ಕಾಳು, ಹಾಲಿನ ಪೌಡರ ‘ ಸಾಂಬರ ಪದಾರ್ಥ, ಮಿಲೆಟ್ ಲಡ್ಡು, ತತ್ತಿ ಬಾಣಂತಿಯರು ಗರ್ಭೀಣಿಯರು ತಪ್ಪದೇ ಸೇವಿಸಬೇಕು. ಸಮತೋಲನ ಆಹಾರ ಸೇವಿಸಿ ಆರೋಗ್ಯವಂತ ಜೀವನ ಸಾಗಿಸಿ, ವಯಕ್ತಿಕ ಸ್ವಚ್ಛತೆ, ಸೊಳ್ಳೆ ಗಳ ಕಡಿತ ತಪ್ಪಿಸಿಕೊಳ್ಳಿ ಲಾರ್ವಾ ಉತ್ಪತ್ತಿ ತಾಣಗಳು ಬೆಳೆಯದಂತು ಜಾಗೃತಿ ವಹಿಸಬೇಕು. ಆರೋಗ್ಯ ಇಲಾಖೆಯ, ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯಕರ ಜೀವನ ಸಾಗಿಸಿ ಸಾಂಕ್ರಾಮಿಕ ರೋಗಗಳ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಪಾಲಸಿಬೇಕು ಎಂದರು. ಶಾಲಾ ಮುಖ್ಯ ಶಿಕ್ಷಕರಾದ ಎಸ್.ಎಚ್ ಬೀರಣ್ಣವರ ಸರಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳನ್ನು ಸರಕಾರಿ ಶಾಲೆಯಲ್ಲಿಯೇ ಓದಿಸಿರಿ ಎಂದರು. ಅಂಗನವಾಡಿ ಕಾರ್ಯಕರ್ತೆ ಸುಜಾತಾ ಎಸ್ ನೆಲವಡೆ, ಬಾಲ್ಯ ವಿವಾಹ ಯಾರು ಮಾಡಬಾರದು ಬಾಲ್ಯ ವಿವಾಹ ಮಾಡುವವರಿಗೆ ಕಾನೂನು ಕಠಿಣ ಶಿಕ್ಷೆ ಇರುತ್ತದೆ. “ಹೆಣ್ಣು ಜಗದ ಕಣ್ಣು ಹೆಣ್ಣು ಮಗುವನ್ನು ಪೋಷಿಸಿರಿ ಓದಿಸಿರಿ” ಬಾಲ್ಯ ವಿವಾಹ ಕಾನೂನ ಬಾಹಿರವಾಗುತ್ತದೆ. ಎಂದು ಮಾಹಿತಿ ನೀಡಿದರು. ಗ್ರಾಮ ಆರೋಗ್ಯ ನೈರ್ಮಲ್ಯ ಸಮೀತಿ ಪೌಷ್ಟಿಕ ಆಹಾರ ಶಿಬಿರದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು. ಗ್ರಾಮ ಮುಖಂಡರು, ಗರ್ಭಿಣಿಯರು, ತಾಯಿಂದಿರು ಮುದ್ದು ಮಕ್ಕಳು ಭಾಗವಹಿಸಿದ್ದರು.