ನಾಗರಿಕತೆಯ ವೇಗದ ನೆಪದಲ್ಲಿ ಕೈಮಗ್ಗದ – ನೇಕಾರಿಕೆ ವೃತ್ತಿಗೆ ಸಂಚಕಾರ.
ಗಜೇಂದ್ರಗಡ ಜ.22

ಕೈಮಗ್ಗ ನೇಕಾರಿಕೆ ಗಾಂಧೀಜಿಯವರ ಕನಸು. ಅದು ಸ್ವಾವಲಂಬನೆಯ ಸಂಕೇತವಾಗಿ ಹುಟ್ಟಿಕೊಂಡ ಉದ್ಯೋಗ ಮಾರ್ಗ. ಅದು ನಂತರದಲ್ಲಿ ಭಾರತದ ಪರಂಪರೆಯ ಭಾಗವಾಗಿ ಹೋಗಿರುವುದು ಸತ್ಯ. ಆದರೆ ಈಗ ಅದು ಇತಿಹಾಸದ ಪುಟಕ್ಕೆ ಸೇರುವ ದುಃಸ್ಥಿತಿ ಕಾಣುತ್ತಿದೆ. ರೇಷ್ಮೆ ನೇಕಾರಿಕೆ, ಕಂಬಳಿ ನೇಕಾರಿಕೆ, ಹತ್ತಿ ನೇಕಾರಿಕೆ ಎಲ್ಲೆಡೆ ಯಂತ್ರಗಳು ದಾಳಿ ಮಾಡಿವೆ. ಬೇರ್ಯಾವ ದೇಶದಲ್ಲೂ ಇಲ್ಲದ ಕೈಮಗ್ಗ ನೇಕಾರಿಕೆಯ ಭವ್ಯ ಪರಂಪರೆಯನ್ನು ಯಂತ್ರಗಳು ನಾಶ ಪಡಿಸುತ್ತಿವೆ. ನಾಗರಿಕತೆ ಹಾಗೂ ವೇಗದ ನೆಪದಲ್ಲಿ ಕೈಮಗ್ಗದ ನೇಕಾರಿಕೆಗೆ ಸಂಚಕಾರ ಒದಗುತ್ತಿದೆ. ಆಧುನಿಕ ಕರಕುಶಲತೆ ಕ್ರಾಂತಿಯಿಂದ ದೈತ್ಯಾಕಾರದ ಯಂತ್ರ ಮಾನವನ ಉದ್ಯೋಗ ಕಬಳಿಸಿವೆ.

ಐದು ಸಾವಿರಕ್ಕೂ ಹೆಚ್ಚಿನ ಕುಟುಂಬಗಳು ಕೆಲ ದಶಕಗಳಿಂದ ಕೈಮಗ್ಗ ನೇಕಾರಿಕೆ ನೆಚ್ಚಿ ಬದುಕುತ್ತಿದ್ದಾರೆ. ಈ ನಡುವೆಯೂ ಇಲ್ಲಿನ ಇಲಕಲ್ಲ ಮಾದರಿ ತೋಪಾನಿ ಸೀರೆಗಳು, ಖಣಗಳು ದೇಶ ವಿದೇಶದಲ್ಲಿನ ಜನರ ಮನ ಸೆಳೆದಿವೆ. ರೋಣ ತಾಲೂಕಿನಲ್ಲಿ ఒట్టు 174 ನೇಕಾರಿಕೆ ಸಹಕಾರಿ ಸಂಘಗಳಿವೆ. ಅವುಗಳಲ್ಲಿ 154 ಕಾರ್ಯ ನಿರತವಾಗಿವೆ. ಹಿರೇಮಣ್ಣೂರಿನಲ್ಲಿ ಗಜೇಂದ್ರಗಡ, ಸಾಮೂಹಿಕ ನೇಕಾರಿಕೆ ಕೇಂದ್ರಗಳಿವೆ. ರೋಣ, ಹಿರೇಹಾಳ, ಮುಗುಳಿ, ಮಲ್ಲಾಪೂರ, ಮುಶಿಗೇರಿ ಗ್ರಾಮಗಳಲ್ಲಿ ನೇಕಾರಿಕೆ ಅವಲಂಬಿತ ಸಾವಿರಾರು ಕುಟುಂಬಗಳಿವೆ. ಗಜೇಂದ್ರಗಡ ಹಿಂದಿನಿಂದ ನೇಕಾರಿಕೆಗೆ ಹೆಸರಾದ ಊರು. ಕೈಮಗ್ಗದ ಉದ್ಯಮ ತಲೆ, ತಲಾಂತರದಿಂದ ಖ್ಯಾತಿ ಉಳಿಸಿ ಕೊಂಡಿದೆ. ಕೈಮಗ್ಗದಿಂದ ತಯಾರಾಗುವ ಸೀರೆ, ಖಣಗಳಿಗೆ ಮಹಾರಾಷ್ಟ್ರದ ಸತಾರ, ಕೊಲ್ಲಾಪೂರ, ಕರಾಡ, ನಾಸಿಕ ಮೊದಲಾದ ಪೇಟೆಗಳಲ್ಲಿ ಉತ್ತಮ ಬೇಡಿಕೆ ಇದೆ.

ಇಲ್ಲಿ ತಯಾರಾಗುವ ರೇಷ್ಮೆ ಖಣ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿವೆ.ಸಂಘಟಿತ ವಲಯದಲ್ಲಿ ದಯನೀಯ ಸ್ಥಿತಿಯಲ್ಲಿ ಬಳಲುವ ನೇಕಾರರ ಸಮಸ್ಯೆ ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ದುಡಿಯುವ ಬಂಡವಾಳ ಜತೆ ಉತ್ತಮ ತರಬೇತಿ, ಸುಧಾರಿತ ಕೈಮಗ್ಗ ಮಾರುಕಟ್ಟೆ ವ್ಯವಸ್ಥೆ ಮೂಲ ಸೌಲಭ್ಯ ಒದಗಿಸಿ ಅಗತ್ಯ ಮಾರ್ಗ ದರ್ಶನ ನೀಡಬೇಕು ಎಂಬುದು ಸಾಹಿತಿ ಎಂ.ಎಸ್ ಮಾಕಾಂದಾರ ಅವರ ಅಭಿಮತವಾಗಿದೆಒಟ್ಟಾರೆಯಾಗಿ ಹೇಳುವುದಾದರೆ ನೇಕಾರರ ಪಾಲನೆ ಸರ್ಕಾರದ ಹೊಣೆ. ವಿದ್ಯುತ್ ಮಗ್ಗದ ಕಾರ್ಮಿಕರಿಗೆ ನೂಲನ್ನು ಒದಗಿಸಿ, ಕೈ ಮಗ್ಗ ಮೀಸಲಾತಿ ಅಧಿನಿಯಮಕ್ಕೆ ಒಳಪಡದ ಬಟ್ಟೆಗಳನ್ನು ನೇಯಿಸಿ ಸರ್ಕಾರಿ ಸಮವಸ್ತ್ರ, ಸರ್ಕಾರಿ ಆಸ್ಪತ್ರೆಗಳ ಹಾಸಿಗೆ, ಹೊದಿಕೆ, ಸರ್ಕಾರಿ ಬಸ್ಗಳ ಹೊದಿಕೆಗಳು ಮುಂತಾದವುಗಳನ್ನು ಕೊಂಡು ಕೊಳ್ಳುವ ಮೂಲಕ ವಿದ್ಯುತ್ ಮಗ್ಗದ ಬಡ ಕಾರ್ಮಿಕರನ್ನು ಸಲಹಬೇಕಿದೆ. ಎಂಬುದು ನಮ್ಮರಾಷ್ಟ್ರಕ್ರಾಂತಿ ಚಾನೆಲ್ ನ ಹಾಗೂ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಮತ್ತು ಎಸ್.ಕೆ ನ್ಯೂಸ್ ಕನ್ನಡ ಚಾನಲ್ ನ ಅಭಿಮತ ವಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ