ಸಾವಯವ ಕೃಷಿಯ ಹಾಗೂ ಗೊಬ್ಬರ ಉತ್ಪಾದನೆಯು – ಮಹತ್ವವನ್ನು ಹೊಂದಿದೆ.
ನರೇಗಲ್ಲ ಜ.25

ಸಮೀಪದ ಕೋಟುಮಚಗಿ ಗ್ರಾಮದ ಸಾವಯವ ಕೃಷಿಕ ಅವರೇ ನಮ್ಮ ನೆಚ್ಚಿನ ವೀರೇಶ ನೇಗಲಿಯವರು ಇವರು ಸಾವಯವ ಘಟಕ ಹಾಗೂ ಗೊಬ್ಬರ ಉತ್ಪಾದನ ಘಟಕಕ್ಕೆ ಈಚೆಗೆ ಭೇಟಿ ನೀಡಿದ ಕೋಟುಮಚಗಿಯ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ಮಾಹಿತಿ ನೀಡಿದರು.ಈ ಸಮಯದಲ್ಲಿ ಅವರು ಮಕ್ಕಳಿಗೆ ಸಾವಯವ ಕೃಷಿಯು ಅದು ಕೃಷಿ ಪ್ರಕ್ರಿಯೆಯಾಗಿದ್ದು, ಅಲ್ಲಿ ರಸ ಗೊಬ್ಬರಗಳ ಬಳಕೆ ಮತ್ತು ಕೀಟ ನಿಯಂತ್ರಣ ವಿಧಾನಗಳನ್ನು ಸಾವಯವ ವಸ್ತುಗಳಿಂದ ರಚಿಸಲಾಗಿದೆ ಅಥವಾ ಸ್ವಾಧೀನ ಪಡಿಸಿ ಕೊಳ್ಳಲಾಗುತ್ತದೆ. ಅಂತಹ ಪ್ರಕ್ರಿಯೆಯು ನಮ್ಮ ಪರಿಸರದ ಮೇಲೆ ಹಾನಿಕಾರಕ ಮತ್ತು ಅವಮಾನಕರ ಪರಿಣಾಮವನ್ನು ಜಾರಿ ಗೊಳಿಸುವುದಿಲ್ಲ. ಇಂತಹ ರೀತಿಯ ಕೃಷಿ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲಾ ನಿರ್ವಾಹಕರು ಕಟ್ಟುನಿಟ್ಟಾದ ವಿವರಗಳನ್ನು ಅನುಸರಿಸುತ್ತಾರೆ, ಅದು ಮಾಲಿನ್ಯ ರಹಿತ ಕೃಷಿಯನ್ನು ಬೆಂಬಲಿಸುತ್ತದೆ ಮತ್ತು ಆ ಮೂಲಕ ಪರಿಸರ ವ್ಯವಸ್ಥೆ ಮತ್ತು ಅದರ ನಿವಾಸಿಗಳನ್ನು ಗೌರವಿಸುತ್ತದೆ. ಸಾವಯವ ಕೃಷಿ ಹಾಗೂ ಗೊಬ್ಬರ ಉತ್ಪಾದನೆಯ ಪ್ರಾಮುಖ್ಯತೆಯ ಬಗ್ಗೆ ಬಹು ಮುಖ್ಯವಾದ ಮಾಹಿತಿಯಾದ ದೇಶಿ ಆಕಳಿನ ಸಗಣಿ ಗೊಬ್ಬರವನ್ನು ಒಂದೆಡೆ ವ್ಯವಸ್ಥಿತವಾಗಿ ಸಂಗ್ರಹಿಸಿ, ವೈಜ್ಞಾನಿಕವಾಗಿ ಮಿಶ್ರಣ ಮಾಡಿ ನಂತರ ಹದ ಗೊಳಿಸಿ ಅದನ್ನು ಭೂಮಿಗೆ ಹಂತ ಹಂತವಾಗಿ ಹಾಕಿದರೆ ಉತ್ತಮ ಇಳುವರಿ ಪಡೆಯುಲ್ಲಿ ರೈತ ಯಶಸ್ವಿ ಯಾಗುತ್ತಾನೆ ಎಂದು ಸಾವಯವ ಕೃಷಿಕ ವೀರೇಶ ನೇಗಲಿ ಹೇಳಿದರು.ಯಾವ ರೈತ ಭೂಮಿಯ ಹಿತವನ್ನು ಕಾಪಾಡಲು ಮುಂದಾಗುತ್ತಾನೋ ಅವನನ್ನು ಕಾಪಾಡಲು ಭೂಮಿತಾಯಿ ಮುಂದಾಗುತ್ತಾಳೆ. ಆದ್ದರಿಂದ ಪ್ರತಿಯೊಬ್ಬರು ಮಣ್ಣಿನ ಫಲವತ್ತತೆ ಕಾಪಾಡಿ ಕೊಳ್ಳಲು ಮುಂದಾಗಬೇಕು ಇಲ್ಲವಾದರೆ ಭೂಮಿ ಬಂಜರು ಆಗಲಿದೆ ಎಂದರು.

ಇಂದಿನ ದಿನಗಳಲ್ಲಿ ವಿಪರೀತವಾದ ರಾಸಾಯನಿಕ ಬಳಸಿ ಆಹಾರ ಉತ್ಪಾದನೆ ಮಾಡಿ ಘಟಕಕ್ಕೆ ಈಚೆಗೆ ಭೇಟಿ ನೀಡಿದ ಕೋಟುಮಚಗಿಯ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ಉತ್ತಮ ಮಾಹಿತಿ ನೀಡಿದರು.ಯಾವ ರೈತ ಭೂಮಿಯ ಹಿತವನ್ನು ಕಾಪಾಡಲು ಮುಂದಾಗುತ್ತಾನೋ ಅವನನ್ನು ಕಾಪಾಡಲು ಭೂಮಿತಾಯಿ ಮುಂದಾಗುತ್ತಾಳೆ. ಆದ್ದರಿಂದ ಪ್ರತಿಯೊಬ್ಬರು ಮಣ್ಣಿನ ಫಲವತ್ತತೆ ಕಾಪಾಡಿ ಕೊಳ್ಳಲು ಮುಂದಾಗಬೇಕು ಇಲ್ಲವಾದರೆ ಭೂಮಿ ಬಂಜರು ಆಗಲಿದೆ ಎಂದರು. ಪ್ರಸುತ್ತ ದಿನಗಳಲ್ಲಿ ವಿಪರೀತವಾದ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಆಹಾರ ಉತ್ಪಾದನೆ ಮಾಡಿ ಮಕ್ಕಳಿಗೆ ಪ್ರತಿದಿನ ಪ್ರೀತಿಯಿಂದ ತಿನ್ನಿಸುವ ಪ್ರತಿ ತಾಯಿಯ ಕೈ ತುತ್ತು ವಿಷವಾಗಿದೆ. ಹಾಗಾಗಿ ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ರೋಗಿ ಗಳಾಗುತ್ತಿದ್ದಾರೆ ಇಂದಿನ ಕೃಷಿ ಚಟುವಟಿಕೆಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಆದ್ದರಿಂದ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸ ಬೇಕೆಂದರೆ ರಾಸಾಯನಿಕ ಕೃಷಿ ಬಿಟ್ಟು ಸಾವಯವ ಕೃಷಿಗೆ ಮರಳುವ ಅನಿವಾರ್ಯತೆ ಇದೆ ಎಂದರು.ಈ ವೇಳೆ ಮಕ್ಕಳು ಸಗಣಿಯನ್ನು ಉತ್ತಮ ಗೊಬ್ಬರ ವನ್ನಾಗಿಸುವ ವಿಧಾನ, ಗೊಬ್ಬರವನ್ನು ಹೊಲಕ್ಕೆ ಯಾವ ರೀತಿಯಲ್ಲಿ ಹಾಕ ಬೇಕೆನ್ನುವ ವಿಧಾನ, ಫಲವತ್ತಾದ ಹಾಗೂ ರಾಸಾಯನಿಕ ಮಣ್ಣಿನ ವ್ಯತ್ಯಾಸ, ದೇಶಿ ಆಕಳಿನ ಮಹತ್ವದ ಕುರಿತು ಮಾಹಿತಿ ಪಡೆದರು. ಈ ಸಮಯದಲ್ಲಿ ಶಿಕ್ಷಕರಾದ ಎಂ.ಎ ಹಿರೇಗೌಡ್ರ, ಬಿ.ರಾಜು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ ಗದಗ