ಸರಳ ವ್ಯಕ್ತಿ ಗುಣವಂತ – ಶಾಸಕ ಜಿ.ಎಚ್ ಶ್ರೀನಿವಾಸ್.
ತರೀಕೆರೆ ಜ .29


ಜನರ ಆಶೀರ್ವಾದ ನನ್ನ ಮೇಲಿರಲಿ ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸರವರು ಹೇಳಿದರು. ಅವರು ಇಂದು ಪಟ್ಟಣದ ರೇವಣಸಿದ್ದೇಶ್ವರ ದೇವಾಲಯ ಮುಂಭಾಗದಲ್ಲಿ ಏರ್ಪಡಿಸಿದ್ದ ತಮ್ಮ 57 ನೇ. ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಯು ಫಾರೂಕ್ ಮಾತನಾಡಿ ಚಿಕ್ಕ ವಯಸ್ಸಿನಲ್ಲಿಯೇ ಎರಡು ಬಾರಿ ತರೀಕೆರೆಗೆ ಶಾಸಕರಾಗಿ ಜನಪ್ರಿಯತೆ ಪಡೆದ ಸರಳ ವ್ಯಕ್ತಿ ಗುಣವಂತ ಶಾಸಕ ಜಿ.ಎಸ್ ಶ್ರೀನಿವಾಸ್ ಎಂದು ಹೇಳಿದರು. ಅವರ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಮತ್ತು ಬಳ್ಳಾಪುರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಅಂದರೆ ಪೌರ ಕಾರ್ಮಿಕರು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಸ್ಪತ್ರೆ ಸ್ವಚ್ಛತಾ ಕೆಲಸ ಮಾಡುವವರಿಗೆ ಆಶಾ ಕಾರ್ಯಕರ್ತರು ವಿವಿಧ ಇಲಾಖೆಯ ಗಣ್ಯರನ್ನು ಮಾಜಿ ಪುರಸಭಾ ಅಧ್ಯಕ್ಷರಾದ ಪ್ರಕಾಶ್ ವರ್ಮಾ ಮತ್ತು ಅವರ ಪತ್ನಿ ಗಿರಿಜಾ ಪ್ರಕಾಶ್ ರವರು ಸನ್ಮಾನ ಮಾಡಿದರು. ಉಪ ವಿಭಾಗ ಅಧಿಕಾರಿಯಾಗಿ ಡಾ, ಕೆ.ಜೆ ಕಾಂತರಾಜ್ ರವರು ಶುಭ ಕೋರಿದರು, ಪುರಸಭೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಶ್ರೀನಿವಾಸ್ರವರ ಅಭಿಮಾನಿ ಬಳಗದವರು ಹಾಗೂ ಜಯ ಕರ್ನಾಟಕ ಸಂಘಟನೆಯ ಜಗದೀಶ್ ಉಪಸ್ಥಿತರಿದ್ದರು.

ಲಿಂಗದಹಳ್ಳಿ ಗ್ರಾಮದಲ್ಲಿ ಮಲೆನಾಡು ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಮಂಜುನಾಥ್ ಮತ್ತು ಗೌರವಾಧ್ಯಕ್ಷರಾದ ಅಶೋಕ್ ಖಜಾಂಚಿ ಅಭಿರವರು ಶಾಸಕ ಜಿ.ಎಸ್ ಶ್ರೀನಿವಾಸ್ ಮತ್ತು ಅವರ ಪುತ್ರಿ ರಚನಾ ಶ್ರೀನಿವಾಸ್ ರವರೆಗೆ ಸನ್ಮಾನಿಸಿ ಗೌರವಿಸಿ ಜನ್ಮ ದಿನದ ಶುಭಾಶಯ ಕೋರಿದರು. ಬಳ್ಳಾವರ ಗ್ರಾಮದಲ್ಲಿ ಏರ್ಪಡಿಸಿದ್ದ ಜನ್ಮ ದಿನದ ಸಮಾರಂಭವನ್ನು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷರಾದ ಎನ್.ಜಿ ರಮೇಶ್ ಕೇಕು ಕತ್ತರಿಸಿ ಪಟಾಕಿ ಸಿಡಿಸಿ ಜಿ.ಎಸ್ ಶ್ರೀನಿವಾಸ್ ಮತ್ತು ರಚನಾ ಶ್ರೀನಿವಾಸ್ ರವರನ್ನು ಗೌರವಿಸಿ ಶುಭ ಕೋರಿದರು ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಲಿಂಗದಳ್ಳಿ ರವಿ ಆಂಡಿಗೌಡರು ರೂಪ ಗುಳ್ಳದ ಮನೆ ಗೋಪಾಲಕೃಷ್ಣ ನಂದಿ ತಿಪ್ಪೇಶ ಭದ್ರೆಗೌಡ ಅಂತೋನಿ ಶ್ರೀದೇವಿ ಮುರುಗ ಸುದೀಪ್ ಹನುಮಂತ ಳು ಮಾಜಿ ಉಪಾಧ್ಯಕ್ಷರಾದ ರಮೇಶ್ ಸಾಯ್ದು ಖಾನ್ ನಾಗರಾಜ್ ಧನಂಜಯ ಗಂಧದಗುಡಿ ಸೇವಾ ಸಂಘದ ಅಧ್ಯಕ್ಷರಾದ ರಂಗನಾಥ ಹೆಬ್ಬೆಸಿರಿ ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಯಣ್ಣ ಹಾಗೂ ಮುಂತಾದವರು ಜನ್ಮ ದಿನದ ಶುಭಾಶಯಗಳು ತಿಳಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು