“ಸುಜ್ಞಾನದ ಜ್ಞಾನಿ ಈಶ್ವರ”…..

ಜೀವ ಕಳೆಯ ತುಂಬುವ ಜೀವರಕ್ಷಕನೇಅರೆಕ್ಷಣ ಅಳಿಸಿ ಮರುಕ್ಷಣ ನಗಿಸಿ ಮತ್ತೆನಿಶ್ಯಬ್ದತೆಯ ತಾಳುವ ಮಂತ್ರಾಗಾರನೆಈ ಜಗದ ಅಂಧಕಾರವ ಅಳಿಸೋ ಹರನೆ.
ಶಿವಲಿಂಗನು ಅಭಿಷೇಕ ಪ್ರಿಯನುಜಗದ ಒಳಿತಿಗೆ ವಿಷವ ಕುಡಿದನುಶಕ್ತಿವಂತನು ಆಡಂಬರ ಮುಕ್ತನುನಂಬಿ ಬಂದ ಭಕ್ತರ ಕೈ ಬಿಡದ ವರನೀಡೊ ಪರಶಿವನು.
ಎಲ್ಲೆಡೆ ತನ್ನಿರುವಿಕೆಯ ಪ್ರದರ್ಶಿಸುವ ಜಗದೀಶ್ವರನೆಕತ್ತಲರಳಿಸಿ ಸುಜ್ಞಾನವ ಬೆಳಗುತಿಹ ಜ್ಯೋತೀಶ್ವರನೆಆತ್ಮದ ಅಂಗ ವೈವಿಧ್ಯಮಯ ಸಂಗದ ಹರಿಕಾರನೆಹೃದಯದತ್ತಿರ ಪ್ರೇಮದತ್ತಿಯಲಿ ತೇಲುವ ವಿಶ್ವೇಶ್ವರನೆ.
ಭಕ್ತರನ್ನು ಸಲಹುವ ಈಶ ಪರಮೇಶ್ವರಸದಾ ಜಗಕೆ ಬೆಳಕು ನೀಡುವ ಸದಾಶಿವಬಿಲ್ವ ಪತ್ರಿ ಪ್ರಿಯನು ದೇವ ಯೋಗಿಶ್ವರಅಂಧಕಾರವ ಅಂತ್ಯಗೊಳಿಸುವ ಸುಜ್ಞಾನದ ಜ್ಞಾನಿ ಈಶ್ವರ.
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ