ಬಳ್ಳಾರಿಯಲ್ಲಿ ಶಾಸಕನಾಗಿದ್ದಾಗ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಅಭಿವೃದ್ಧಿಗಳು ಶಿಲ್ಪಿಯಾಗಿ ಉಳಿದಿದೆ ಎನ್ ವೈ ಗೋಪಾಲಕೃಷ್ಣ ಶಾಸಕರು.
ಮೊಳಕಾಲ್ಮುರು ಮೇ.01

ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚೇಳ್ಳಗುರ್ಕಿ,ರೂಪನಗುಡಿ, ಶಂಕರ್ ಬಂಡಿ, ಯಲ್ಲಿ ಇಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರುರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ನಾಡಿನ ಜನರಿಗೆ ಗ್ಯಾರಂಟಿಗಳನ್ನು ನೀಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ 25 ಗ್ಯಾರಂಟಿಗಳು ಜಾರಿಯಾಗಲಿವೆ. ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂ, ಯುವಕರಿಗೆ ವರ್ಷಕ್ಕೆ ಉದ್ಯೋಗ ಸಮೇತ ವರ್ಷಕ್ಕೆ ಕನಿಷ್ಠ ಒಂದು ಲಕ್ಷ ರೂ. ಶಿಷ್ಯ ವೇತನ, ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಸವಲತ್ತುಗಳು ಸಿಗಲಿವೆ ಎಂದು ತಿಳಿಸಿದರು.

ಈ ಬಳ್ಳಾರಿ ಗ್ರಾಮದಲ್ಲಿ ಅಭಿವೃದ್ಧಿಯ ಕಂಡಿರಲಿಲ್ಲ ಎಲ್ಲಿ ನೋಡಿದ ರಸ್ತೆಗಳು ತಗ್ಗು ಕುಣಿ ಕಾಣ ತೊಡಗುತ್ತಿದ್ದವು ಸೇತುವೆಗಳು ಓಡಾಡುವಂತ ರಸ್ತೆಗಳು ಚಿಕ್ಕ ಡ್ಯಾಮ್ ಗಳು ನೀರು ಹರಿಯುವ ಚಾನೆಲ್ಗಳು ಚರಂಡಿಗಳು ಮೂಲಭೂತ ಸೌಕರ್ಯಗಳು ಕುಡಿಯುವ ನೀರಿನ ವ್ಯವಸ್ಥೆ ಸರ್ಕಾರಿ ಶಾಲೆಗಳು ಸರ್ಕಾರದ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ನಾನು ಮಾಡಿಸಿದ್ದೆ ಎಂದು ಎನ್ ವೈ ಗೋಪಾಲಕೃಷ್ಣ ಶಾಸಕರು ಮಾತನಾಡಿದರು.ಈ ಹಿಂದೆ ನಾನು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕನಾಗಿದ್ದ ಸಂದರ್ಭದಲ್ಲಿ 38 ಸಾವಿರ ಮತಗಳಿಂದ ಲೀಡನಲ್ಲಿ ಮತದಾರರು ನನ್ನ ಗೆಲ್ಲಿಸಿದ್ದರು ಅವರ ಋಣ ತೀರಿಸಬೇಕೆಂದು ಜನಪರ ಕಾರ್ಯಗಳು,ನೀರಾವರಿ ಶಾಶ್ವತ ಯೋಜನೆಗಳು, ರಸ್ತೆಯ ಮೂಲಭೂತ ಸೌಕರ್ಯ ಹಾಗೂ ಅನೇಕ ಅಭಿವೃದ್ಧಿ ಕಾಮಗಾರಿಗಳು ಈಗಲೂ ಜೀವಂತನ ನಿದರ್ಶನವಾಗಿ ಕಾಣುತ್ತಿವೆ ಎಂದು ತಿಳಿಸಿದರು.ಸಚಿವರಾದ ಬಿ ನಾಗೇಂದ್ರ ಅಪಾರ ಸಂಖ್ಯೆ ಕಾರ್ಯಕರ್ತರು ಅಭಿಮಾನಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು.