ಪ್ರಭು ಭೈರಿ ಅವರ ಕುಟುಂಬ ದವರ ಉದಾತ್ತ ಮನೋಭಾವ – ಇತರರಿಗೆ ಆದರ್ಶವಾಗಲಿ.

ಕಲಕೇರಿ ಫೆ.09

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ವಾರ್ಡ್ ನಂಬರ್ 2 ರ ವಾರ್ಡ್ ನಂಬರ್ 3 ರಲ್ಲಿ. ವಾರ್ಡ್ ನಂಬರ್ 4ರಲ್ಲಿ. ವಾರ್ಡ್ ನಂಬರ್ 8 ರಲ್ಲಿ.ಕನಿಷ್ಠ ಒಂದು ಕೋಟಿ ರೂಪಾಯಿ ಸಿ.ಸಿ ರಸ್ತೆಗಳನ್ನು ಮಾಡಿಸಿದಂತ ನಮ್ಮ ಕಲಕೇರಿ ಗ್ರಾಮದ ಜಯಪ್ಪ ಭೈರಿ ಇವರ ಸುಪುತ್ರ ರಾದಂತ ಶ್ರೀ ಪ್ರಭು ಜಯಪ್ಪ ಭೈರಿ ಇವರು ನಮ್ಮ ಕಲಕೇರಿಯಲ್ಲಿ ಇಲ್ಲಿವರೆಗೂ ಯಾವ ಸರಕಾರ ದಿಂದ ಆಗದಂತ ಕೆಲಸ ನಮ್ಮ ಕಲಕೇರಿ ಗ್ರಾಮದ ಬಂಗಾರದಂತ ಮನಸ್ಸಿರುವ ಶ್ರೀ ಪ್ರಭು ಭೈರಿ ಇವರು ನಾನು ಹುಟ್ಟಿ ಬೆಳೆದಂಥ ಊರು ನನ್ನ ಕಲಕೇರಿ ಗ್ರಾಮ ಅಭಿವೃದ್ಧಿಯಾಗಲಿ.

ಯಾವ ಸರಕಾರ ದಿಂದ ಆಗದಂತಾ ಕೆಲಸ ಶ್ರೀ ಪ್ರಭು ಭೈರಿ ನೇತೃತ್ವದಲ್ಲಿ ಕಲಕೇರಿ ಗ್ರಾಮದಲ್ಲಿ ವಾರ್ಡ್ ನಂಬರ್ 2. ವಾರ್ಡ್ ನಂಬರ್ 3. ವಾರ್ಡ್ ನಂಬರ್ 4. ವಾರ್ಡ್ ನಂಬರ್ 8 ರಲ್ಲಿ. ಸಿ.ಸಿ ರಸ್ತೆಗಳ ಮಾಡಿಸಿದಂತ ಬಂಗಾರದ ಮನುಷ್ಯ ಎಂದು ಜನರು ತಿಳಿಸಿದರು. ಕನಿಷ್ಠ ಒಂದು ಕೋಟಿ ರೂಪಾಯಿ ಕೆಲಸವನ್ನು ಸಿ.ಸಿ ರಸ್ತೆ ಕೆಲಸವನ್ನು ಮಾಡಿಸಿದರು. ಮತ್ತು ಈ ಸಂದರ್ಭದಲ್ಲಿ ಪ್ರಭು ಭೈರಿ ಇವರು ನಾನು ಹುಟ್ಟಿ ಬೆಳೆದಂತ ಊರು ಅದು ಕಲಕೇರಿ ಗ್ರಾಮ ನಾನು ಎಷ್ಟೋ ಗ್ರಾಮಗಳಲ್ಲಿ ನೋಡಿದೆ ಅಲ್ಪ ಸ್ವಲ್ಪ ಸುಧಾರಣೆ ಆಗಿದ್ದು ಕಂಡು ಬಂತು ಆದರೆ ನಮ್ಮ ಕಲಕೇರಿ ಗ್ರಾಮ ಇಲ್ಲಿವರೆಗೂ ಅಭಿವೃದ್ಧಿ ಕೆಲಸಗಳು ನನ್ನ ಕಣ್ಣಿಗೆ ಕಾಣಲಿಲ್ಲ ಆದ್ದರಿಂದ ನನ್ನ ಮನಸ್ಸಿನೊಳಗೆ ಯಾವ ಸರ್ಕಾರ ಮಾಡಿಲ್ಲ ಅಂದರೆ ನಾನಾದರೂ ಮಾಡಿ ನಮ್ಮ ಗ್ರಾಮ ಅಭಿವೃದ್ಧಿ ಮಾಡಬೇಕು ಎಂದು ಯಾರ ಸಹಾಯ ಇಲ್ಲದೆ ಸ್ವಂತ ನನ್ನ ದುಡಿಮೆಯೊಳಗೆ ಆ ಹಣದಿಂದ ಈ ಕೆಲಸಗಳನ್ನು ಮಾಡಬೇಕು ಎಂದು ನನ್ನ ಮನಸ್ಸಿನೊಳಗೆ ಬಂತು.

ಯಾಕಂದ್ರೆ ನಮ್ಮೂರ ಅಭಿವೃದ್ಧಿ ಆಗಲಿ ಎಂದು ಕಲಕೇರಿ ಗ್ರಾಮದಲ್ಲಿ ವಾರ್ಡ್ಗಳಲ್ಲಿ ಸಿ.ಸಿ ರಸ್ತೆ ಕೆಲಸಗಳನ್ನು ಶ್ರೀ ಪ್ರಭು ಭೈರಿ ಇವರು ಬಂಗಾರದಂತ ಮನಸ್ಸು ಇವರ ನೇತೃತ್ವದಲ್ಲಿ ಈ ಕೆಲಸಗಳು ಪ್ರಾರಂಭವಾಗಿದೆ ಹಾಗೂ ನಮ್ಮ ತಂದೆ ತಾಯಿಯ ಮತ್ತು ನಾವು ಇಲ್ಲೇ ಹುಟ್ಟಿ ಬೆಳೆದಂತ ಊರು ನಮ್ಮ ಕಲಕೇರಿ ಗ್ರಾಮ ನಮ್ಮ ಗ್ರಾಮ ಬೆಳೆಯಲಿ ನಮ್ಮ ಗ್ರಾಮ ಅಭಿವೃದ್ಧಿಯಾಗಲಿ ಮತ್ತು ಶ್ರೀ ವೀರಘಂಟಿ ಮಡಿವಾಳೇಶ್ವರ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ನಮ್ಮ ತಂದೆ ತಾಯಿಯ ಆಶೀರ್ವಾದ ಇರಲಿ ಇನ್ನೂ ಕಲಕೇರಿ ಗ್ರಾಮದಲ್ಲಿ ಯಾವುದೇ ಕೆಲಸಗಳಿದ್ದರೂ ಮಾಡೋಣ ನಮ್ಮ ಗ್ರಾಮ ಅಭಿವೃದ್ಧಿ ಮಾಡೋಣ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಗ್ರಾಮಗಳಲ್ಲಿ ಜನರು ಇಲ್ಲಿವರೆಗೂ ಯಾವ ಸರಕಾರದಿಂದ ಅಧಿಕಾರಿಗಳಿಂದ ಯಾವ ಕೆಲಸಗಳು ಆಗಿಲ್ಲ. ಆದರೆ ನಮ್ಮ ಕಲಕೇರಿ ಗ್ರಾಮದ ಶ್ರೀ ಜಯಪ್ಪ ಭೈರಿ. ಇವರ ಸುಪುತ್ರ ಶ್ರೀ ಪ್ರಭು ಭೈರಿ ಇವರು ನಮ್ಮ ಓಣಿಯಲ್ಲಿ ಸಿ.ಸಿ ರಸ್ತೆ ಮಾಡಿಸಿದಂತ ವ್ಯಕ್ತಿ ಅದು ಪ್ರಭು ಭೈರಿ ಅವರ ಮನಸ್ಸು ಬಂಗಾರದಂತ ಮನಸ್ಸು ಅವರ ನೇತೃತ್ವದಲ್ಲಿ ನಮ್ಮ ಓಣಿಯಲ್ಲಿ ಅವರ ಒಂದು ಪುಣ್ಯದಿಂದ ನಮ್ಮ ಓಣಿಗೆ ಸಿ.ಸಿ ರಸ್ತೆಯನ್ನು ಮಾಡಿಸಿದರು ಪ್ರತಿ ಗುರುವಾರ ಅನ್ನದಾಸೋಹ ನಡೆಯುವುದು ಪ್ರಭು ಭೈರಿ ಅವರ ಕುಟುಂಬ ದವರ ಉದಾತ್ತ ಮನೋಭಾವ ಇತರರಿಗೆ ಆದರ್ಶವಾಗಲಿ ಎಂದು. ಎಂ.ಪಿ ನದಾಫ್ ಗುರುಗಳು ನಿವೃತ್ತ ಶಿಕ್ಷಕರು, ಮಡಿವಾಳಪ್ಪ ತಳವಾರ್, ಶಿವು ಪೂಜಾರಿ, ತಿಳಿಸಿದರು. ಅವರಿಗೆ ಕೋಟಿ ಕೋಟಿ ಅಭಿನಂದನೆಗಳನ್ನು ಸಲ್ಲಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button