ಹುನಗುಂದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕುಡಿಯುವ ನೀರಿಗೆ ಬರ…? ತಲೆ ಕೆಡಿಸಿಕೊಳ್ಳದ ತಹಶೀಲ್ದಾರ್….! – ಮಲ್ಲಿಕಾರ್ಜುನ ಎಂ ಬಂಡರಗಲ್ಲ.

ಹುನಗುಂದ ಮಾರ್ಚ್.15

ತಾಲೂಕಿನ ಆಡಳಿತದ ಪ್ರಮುಖ ಶಕ್ತಿ ಕೇಂದ್ರವಾದ ತಹಶೀಲ್ದಾರ ಕಾರ್ಯಾಲಯದ ಆವರಣದ ದಶ ದಿಕ್ಕುಗಳನ್ನು ಹುಡಿಕಿದರೂ ಕೂಡಾ ಒಂದು ಹನಿ ನೀರಿನ ಮೂಲ ಸಿಗದು, ಕಳೆದ ಆರು ವರ್ಷಗಳಿಂದ ಕುಡಿಯುವ ನೀರಿನ ಸೌಕರ್ಯವಿಲ್ಲದೇ ಬೇಸಿಗೆಯ ಬಿಸಿಲಿನ ತಾಪಕ್ಕೆ ನಿತ್ಯ ರೈತರು, ಸಾರ್ವಜನಿಕರು, ಮಹಿಳೆಯರು, ವೃದ್ದರು ಹನಿ ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ಇದೆ.ಹೌದು ಫೆಬ್ರುವರಿ ಮೊದಲ ವಾರದಿಂದಲೇ ಭಯಂಕರ ಬಿಸಲಿನ ಛಾಯೆಯಿಂದ ಜನ ಅಸ್ಥವ್ಯಸ್ಥರಾಗುತ್ತಿದ್ದು. ಈಗಲೇ ಬಿಸಿಲು ಹಿಂಗೇ…! ಮುಂದೆ ಇನ್ನೆಂಗೋ…! ಬಿಸಿಲಿನ ಝಳಕ್ಕೆ ನೀರು…! ನೀರು…! ಎನ್ನುವ ಜನರು ಬಿಸಿಲಿನ ತಾಪಕ್ಕೆ ಭಯಗೊಂಡ ಮನೆ ಬಿಟ್ಟು ಹೊರ ಬರಲು ಹಿಂದೇಟು ಹಾಕುತ್ತಿರುವ ಇಂತಹ ಸಂದರ್ಭದಲ್ಲಿ ತಾಲೂಕಿನ ೮೬ ಗ್ರಾಮಗಳಿಂದ ತಮ್ಮ ಕೆಲಸಕ್ಕೆಂದು ಬರುವ ರೈತರು,ಸಾರ್ವಜನಿಕರು ಹಾಗೂ ಮಹಿಳೆಯರು ಬಿಸಲಿನ ತಾಪದಿಂದ ಬಾಯಾರಿಕೆಯನ್ನು ತಣಿಸಿ ಕೊಳ್ಳಲು ಇಡೀ ತಹಶೀಲ್ದಾರ ಕಚೇರಿಯನ್ನೇ ಸುತ್ತು ಹಾಕಿದರೂ ಕೂಡಾ ಒಂದು ತೊಟ್ಟು ನೀರು ಸಿಗೋದಿಲ್ಲ, ಕುಡಿಯುವ ನೀರಿನ ಸಂಗ್ರಹದ ಒಂದು ಸಿಂಟ್ಯಾಕ್ಸ್ಂತೂ ಮೊದಲೇ ಇಲ್ಲಿ ಇಲ್ಲ. ಇದರಿಂದ ತಹಶೀಲ್ದಾರ ಕಚೇರಿಗೆ ಬರುವ ಜನರು ನಿತ್ಯ ಕುಡಿಯುವ ನೀರಿಗಾಗಿ ತಾತ್ವರ ಪಡುವಂತಾಗಿದೆ. ಕಚೇರಿಯಲ್ಲಿ ನೀರು ಸಿಗದೇ ಕಂಗಾಲಾದ ಸಾರ್ವಜನಿಕರು ತಹಶೀಲ್ದಾರ ಕಚೇರಿಯಲ್ಲಿರುವ ಮಿಲ್ಕ್ ಪಾರ್ಲರ್, ಹೊಟೇಲ್‌ಗಳಲ್ಲಿ ಹಣ ಕೊಟ್ಟು ನೀರು ಕುಡಿದು ಬಾಯಾರಿಕೆಯನ್ನು ತಣಿಸಿ ಕೊಳ್ಳುವ ಸ್ಥಿತಿ ನಿತ್ಯ ನಿರಂತರವಾಗಿದೆ.ಇಡೀ ತಾಲೂಕಿನ ಪ್ರತಿಯೊಂದು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ತಹಶೀಲ್ದಾರ ಸಾಹೇಬರಿಗೆ. ಸ್ವತಃ ತಮ್ಮ ಕಚೇರಿಯಲ್ಲಿಯೇ ನೀರಿನ ಬರ ಇರೋದು ಕಾಣಸ್ತಿಲ್ಲವೇನೋ ಎನ್ನುತ್ತಿದ್ದಾರೆ ನಿತ್ಯ ಬರುವ ರೈತರು ಮತ್ತು ಸಾರ್ವಜನಿಕರು.ಕೊವೀಡ್ ನಂತರ ಮಾಯವಾದ ನೀರಿನ ಸಿಂಟ್ಯಾಕ್ಸ್-ತಹಶೀಲ್ದಾರ ಕಾರ್ಯಾಲಯ ಆರಂಭದಲ್ಲಿ ಕಚೇರಿಗೆ ಬರುವ ಸಾರ್ವಜನಿಕರ ಕುಡಿಯುವ ನೀರಿನ ಅನುಕೂಲತೆಗಾಗಿ ಕಚೇರಿಯ ಬಲಭಾಗದಲ್ಲಿ ಒಂದು ಸಿಂಟ್ಯಾಕ್ಸ್ ನಿರ್ಮಿಸಿ ದಿನದ ೨೪ ಗಂಟೆ ನೀರನ್ನು ಒದಗಿಸಲಾಗುತ್ತಿತ್ತು.ಆದರೆ ೨೦೧೯ರಲ್ಲಿ ಕೊವೀಡ್ ಕಾಲದಿಂದ ಆ ಜಾಗೆಯಲ್ಲಿದ್ದ ಸಿಂಟ್ಯಾಕ್ಸ ಮಾಯವಾಗಿ, ಅಲ್ಲಿಂದ ಇಲ್ಲಿವರಗೆ ಕುಡಿಯುವ ನೀರಿಗಾಗಿ ಒಂದು ಮಡಿಕೆಯನ್ನು ಸಹ ಇಟ್ಟಿಲ್ಲ, ಇದರಿಂದ ಸಾರ್ವಜನಿಕರು ಬಕಪಕ್ಷಿಯಂತೆ ಸುತ್ತಾಡಿದರು ಕಚೇರಿಯಲ್ಲಿ ಒಂದು ಗುಟುಕು ನೀರು ದೊರೆಯುತ್ತಿಲ್ಲ ಎನ್ನುವುದು ಸತ್ಯ.೨೦೧೯ ರಿಂದ ಇಲ್ಲಿವರಗೆ ಹುನಗುಂದ ತಹಶೀಲ್ದಾರರಾಗಿ ಬಸವರಾಜ ನಾಗರಾಳ, ಶ್ವೇತಾ ಬಿಡೀಕರ, ಬಿ.ವಿ.ಮಹಾಂತ, ಜಿ.ಎಂ.ಕುಲಕರ್ಣಿ, ಬಸಲಿಂಗಪ್ಪ ನೈಕೋಡಿ ಸೇರಿ ಬರೋಬರಿ ೫ ಜನ ತಹಶೀಲ್ದಾರ ಬಂದು ಹೋದರೂ ಕೂಡಾ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಸಾರ್ವಜನಿಕರ ಕುಡಿಯುವ ನೀರನ ಒದಗಿಸುವುದರ ಬಗ್ಗೆ ಕಿಂಚಿತ್ತು ಯೋಚಸಿಲಿಲ್ಲ. ಈ ವರ್ಷ ಸಂಪೂರ್ಣ ಮಳೆಯಿಲ್ಲದೇ ಬರಗಾಲ ಆವರಿಸಿ ಭಯಂಕರ ಬಿಸಿಲು ಕಾಣಿಸಿ ಕೊಳ್ಳುತ್ತಿದ್ದು. ಸಧ್ಯ ಬಂದ ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಾದರೂ ಕಚೇರಿಯ ಆವರಣದಲ್ಲಿ ಸಾರ್ವಜನಿಕರ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡ್ತಾರ ಅಂತಾ ಕಾಯ್ದು ನೋಡಬೇಕಿದೆ.

“ಬಾಕ್ಸ್ ಸುದ್ದಿ”…..

ತಹಶೀಲ್ದಾರ ಕಚೇರಿಯ ಆವರಣದಲ್ಲಿ ಕಳೆದ ಐದಾರು ವರ್ಷಗಳಿಂದ ಸಾರ್ವಜನಿಕರ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೇ ಕಚೇರಿಗೆ ಬರುವ ಬಡ ರೈತರು ಹಣ ಕೊಟ್ಟು ನೀರು ಕುಡಿಯುವ ವ್ಯವಸ್ಥೆ ಇದೆ.ಈ ವರ್ಷ ಮಳೆಯ ಅಭಾವದಿಂದ ಬಿಸಿಲಿನ ಪ್ರಮಾಣ ಹೆಚ್ಚಾಗಿ ಬಿಸಿಲಿನ ತಾಪಕ್ಕೆ ನೀರು..! ನೀರು..! ಎನ್ನುವ ಸ್ಥಿತಿ ಇದ್ದಾಗಲೂ ತಹಶೀಲ್ದಾರ ಸಾಹೇಬರು ತಮ್ಮ ಕಚೇರಿಯ ಮುಂದೆ ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವುದು ಶೋಚನೀಯ ಸಂಗತಿಯಾಗಿದೆ. ಸಿದ್ದಪ್ಪ ಜಾಲಿಗಿಡದ ಮುಖಂಡರು ಹುನಗುಂದ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button