ಡಾ, ಬಿ.ಆರ್ ಅಂಬೇಡ್ಕರ್ ರವರ ಜೀವನದ ಮೌಲ್ಯಗಳನ್ನು ಅಳವಡಿಸಿ ಕೊಳ್ಳಿ – ಡಿ.ಲಿಂಗರಾಜ್ ಅಭಿಮತ.

ಕೋಡಿಹಳ್ಳಿ ಏ.16

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೊಡಿಹಳ್ಳಿಯಲ್ಲಿ ಇಂದು ಡಾ, ಬಿ.ಆರ್ ಅಂಬೇಡ್ಕರ್ ರವರ 134 ನೇ. ಜಯಂತಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಮುದಾಯದ ಎಲ್ಲಾ ಯುವಕರ ಸಮ್ಮುಖದಲ್ಲಿ ಮುಖಂಡರಾದ ಶ್ರೀ ಸಣ್ಣ ನಾಗಯ್ಯನವರು ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.ನಂತರ ಮಹಾ ನಾಯಕನ ಸಾಧನೆಗಳ ಕುರಿತು ಜನರಿಗೆ ತಿಳಿಸಲಾಯಿತು ನಂತರ ಶ್ರೀ ತಿಪ್ಪೇಸ್ವಾಮಿ.ಯು ಸಂವಿಧಾನ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮೂಲಕ ಜನತೆಯಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.

ನಂತರ ಭಾಗವಹಿಸಿರುವ ಎಲ್ಲರಿಗೂ ಕೇಕ್ ವಿತರಿಸಲಾಯಿತು ನಂತರ ಸಮುದಾಯದ ಯಜಮಾನರು, ಯುವಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಲಘು ಉಪಹಾರ ವಿತರಿಸಲಾಯಿತು, ಈ ಸಂದರ್ಭದಲ್ಲಿ ಲಿಂಗರಾಜು.ಡಿ, ತಿಪ್ಪೇಸ್ವಾಮಿ, ಮಂಜುನಾಥ್,ವಿಜಯ್ ಕುಮಾರ್.ಡಿ, ರುದ್ರಮುನಿ, ಶ್ರೀಧರ್.ಏಚ್, ರಾಜು.ಡಿ, ಮೈಲಾರಿ.ಕೆ, ನಂದೀಶ್.ಓ, ಮೋಹನ್ ಕುಮಾರ್.ಡಿ, ಅರುಣ್ ಕುಮಾರ್. ಟಿ, ತಿಪ್ಪೇಸ್ವಾಮಿ. ಎಸ್.ಎನ್, ಶಿವಪ್ಪ, ಮನೋಜ್, ಪರಶುರಾಮ್, ತಿಪ್ಪೇಸ್ವಾಮಿ. ಪಿ.ಎಂ, ಅಶೋಕ್,ಕಿರಣ್, ರಮೇಶ್, ಕೆ.ಟಿ,ಸ್ವಾಮಿ. ಆರ್, ದುರುಗೇಶ್, ಪರಮೇಶ್, ಗೋಪಿ, ಮಲ್ಲಿಕಾರ್ಜುನ್. ಜಿ, ಮಹೇಶ್, ಜೀವನ್, ಕೋಟೇಶ್, ಕಣುಮೇಶ್, ಮಂಜು, ಉಪಸ್ಥಿತರಿದ್ದರು. ಎಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ. ಶಿವಮೂರ್ತಿ.ಕೋಡಿಹಳ್ಳಿ.ಚಿತ್ರದುರ್ಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button