ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ರವರಿಗೆ ರಾಜ್ಯ ಮಟ್ಟದ – ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ.

ಆಲಮೇಲ ಏ.28

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಾಗರ ಜೀ ಬಣ (ರಿ) ಗ್ರಾಮ ಶಾಖೆ ಕೋರವಾರ. ತಾ-ದೇವರ ಹಿಪ್ಪರಗಿ ವತಿಯಿಂದ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ 134 ನೇ. ಜಯಂತ್ಯೋತ್ಸವ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಲಮೇಲ ಪಟ್ಟಣದ ಶ್ರೀ ವಿಶ್ವೇಶ್ವರ ಬಾಲ ಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಲಮೇಲ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ರವರಿಗೆ ಅವರ ಸುಧೀರ್ಘ ಶೈಕ್ಷಣಿಕ, ಸಂಘಟನೆ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ರಾಜುಗೌಡ ಪಾಟೀಲ ಅಂಬೇಡ್ಕರ್ ರವರ ಆದರ್ಶ ಇಟ್ಟುಕೊಂಡು ರಾಜ್ಯದ ಉತ್ತಮ ಶಿಕ್ಷಕರನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತಿರುವುದು ಅಂಬೇಡ್ಕರ್ ರವರ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಿದ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.ಈ ವೇಳೆ ಸಾನಿಧ್ಯವನ್ನು ಅಭಿನವ ಮುರುಘೇಂದ್ರ ಮಹಾ ಸ್ವಾಮಿಗಳು. ದಲಿತ ಸಂಘಟನೆಯ ಸಂಚಾಲಕರಾದ ಸಿದ್ದು ರಾಯಣ್ಣನವರ, ವಾಯ್.ಸಿ ಮಯೂರ, ಪ್ರಶಸ್ತಿ ಪ್ರಧಾನ ಅಧ್ಯಕ್ಷ ಅರುಣ ಕೋರವಾರ ಅತಿಥಿಗಳಾದ ಡಾ, ಪ್ರಭುಗೌಡ ಲಿಂಗದಳ್ಳಿ, ಜೆ.ಡಿ.ಎಸ್ ಜಿಲ್ಲಾ ಉಪಾಧ್ಯಕ್ಷರು ರಿಯಾಜ್ ಯಲಗಾರ, ಶೇಖರಗೌಡ ಪಾಟೀಲ, ಭಾರತಿ ಚಲುವಯ್ಯ, ದೇ.ಹಿಪ್ಪರಗಿ ತಾಲ್ಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್ ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button