ಡಾ, ಬಿ.ಆರ್ ಅಂಬೇಡ್ಕರ್ ಅವರ 134 ನೇ. ಜಯಂತಿ ಅಂಗವಾಗಿ ಉಪನ್ಯಾಸ ಕಾರ್ಯಕ್ರಮವು ಶಿಕ್ಷಣ ಎನ್ನುವುದು ಹುಲಿಯ ಹಾಲಿನಂತೆ ಅದನ್ನು – ಕುಡಿದವರು ಘರ್ಜಿಸಲೇಬೇಕು
ಹೊಸಪೇಟೆ ಏ.28

ಡಾ, ಬಿ.ಆರ್ ಅಂಬೇಡ್ಕರ್ ಅವರ 134 ನೇ. ಜಯಂತಿ ಅಂಗವಾಗಿ ಅಂಬೇಡ್ಕರ್ ಅವರ ಆಶಯ ಹಾಗೂ ಸಂಘರ್ಷ ಎನ್ನುವ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಚಿತ್ತವಾಡಗಿಯ ಟಿಪ್ಪು ನಗರದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಉಪನ್ಯಾಸ ಮಾಡಲು ಬಿ.ಪೀರ್ ಭಾಷ ಹಾಗೂ ಬಸವ ಬಳಗದ ಬಸವರಾಜ ಉಪನ್ಯಾಸ ನಡೆಸಿ ಕೊಟ್ಟರು. ಟಿಪ್ಪು ನಗರದಲ್ಲಿ ಬಾಬಾ ಸಾಹೇಬ್ ಅವರ ಜಯಂತಿ ಮಾಡಿರುವುದು ತುಂಬಾ ಹೆಮ್ಮೆಯ ಸಂಗತಿ ಇತ್ತೀಚಿಗೆ ಕೋಮುವಾದಿಗಳು ಹಿಂದು ಮುಸ್ಲಿಮ್ ಎಂದು ಭಿನ್ನತೆಯನ್ನು ಬಿತ್ತುತ್ತ ಬರುತ್ತಿದ್ದಾರೆ. ಆದರೆ ಈ ದೇಶದಲ್ಲಿ ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಭೂಮಿ ಇರುವುದು ತುಂಬಾ ಕಡಿಮೆ. ಅನಕ್ಷರಸ್ಥ ಇರುವುದು ಈ ಎರಡು ಸಮುದಾಯಗಳಲ್ಲಿ. ಇದರ ಬಗ್ಗೆ ಸರ್ಕಾರಗಳು ತಲೆಕೆಡಿಸಿ ಕೊಳ್ಳುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳಿಗೆ ಒಂದು ಕಿವಿ ಮಾತುನ್ನು ಹೇಳಿದ್ದರು. ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿ ಎಂದು. ಆದರೆ ನಾವುಗಳು ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ದುಡಿಮೆಗೊ ಅಥವಾ ಮದುವೆ ಮಾಡುವುದರ ಮೂಲಕ ಈ ದೇಶದ ಪ್ರತಿಭೆಯನ್ನು ಹೊಸಕಿ ಹಾಕುತ್ತಿದ್ದೆವೆ. ದಯವಿಟ್ಟು ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಪೀರ್ ಭಾಷ ಅವರು ಹೇಳಿದರು. ಬಸವ ಬಳಗದ ಬಸವರಾಜ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಾಯಿ ಹೃದಯ ಉಳ್ಳಂತ ವ್ಯಕ್ತಿ ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮಾತ್ರ ಅಲ್ಲ ಹಿಂದುಳಿದ ವರ್ಗ, ಹಾಗೂ ದಲಿತೇತರಿಗೂ ಮೀಸಲಾತಿ ಕಲ್ಪಿಸಿ ಕೊಟ್ಟಿದ್ದಾರೆ. ಇಷ್ಟು ದಿನ ಮೀಸಲಾತಿಯನ್ನು ಅಣುಕಿಸಿದವರು ಸದ್ದಿಲ್ಲದೆ 10% ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ ಈಗ ಅವರು ಮೀಸಲಾತಿ ಅನುಭವಿಗಳು ಎಂದು ಮಾರ್ಮಿಕವಾಗಿ ನುಡಿದರು.ಅತಿಥಿಗಳಾಗಿ ಸೋಮಶೇಖರ್ ಬಣ್ಣದಮನೆ, ನಾಮ ನಿರ್ದೇಶಿತ ನಗರಸಭಾ ಸದಸ್ಯ ಮೌಲಾಲಿ, ಯಮುನೂರಪ್ಪ, ಜೆ.ಶಿವಕುಮಾರ್, ರೆಹಮಾನ್, ಹುಷಪ್ಪ, ರಸುಲ್, ಅಲ್ತಾಫ್, ಮಾಲತೇಶ ನಾಗರಾಜ ಇದ್ದರು.ಈ ಕಾರ್ಯಕ್ರಮದ ಆಯೋಜನೆ ಟಿಪ್ಪು ನಗರದ ಯುವಕರು ಮಾಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ