ಭದ್ರಾ ನೀರಿಗಾಗಿ ರೈತರ ಚಳುವಳಿ-ಕೆ.ಟಿ.ಗಂಗಾಧರ್.

ತರೀಕೆರೆ ಆಗಷ್ಟ.28

ರೈತ ಉಳಿಯಬೇಕು, ನೀರು ಉಳಿಯಬೇಕು, ಆಹಾರದ ಕೊರತೆಯನ್ನು ನೀಗಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೆ ಟಿ ಗಂಗಾಧರ್ ರವರು ಇಂದು ಬಾವಿಕೆರೆಯ ವಿ ಎಸ್ ಎಸ್ ಎನ್ ಕಚೇರಿ ಮೇಲಿನ ಸಭಾಂಗಣದಲ್ಲಿ ಭದ್ರ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯಲ್ಲಿ ಹೇಳಿದರು. ರೈತರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒ ಗಳಿಂದ ಉದ್ಯೋಗ ಖಾತ್ರಿಯಲ್ಲಿ ಕ್ರಿಯಾ ಯೋಜನೆ ಮಾಡಿ ಕಾಲುವೆ, ಕೆರೆ, ಕಟ್ಟೆ, ಹಳ್ಳ ಕೊಳ್ಳಗಳಲ್ಲಿ ಬೆಳೆದಿರುವ ಗಿಡ ಗಂಟೆಗಳನ್ನು ಸ್ವಚ್ಛಗೊಳಿಸಬೇಕು. ನೀರಾವರಿ ಇಲಾಖೆಯು ತಮ್ಮ ಕರ್ತವ್ಯವನ್ನು ಪಾಲನೆ ಮಾಡಲು ಹೇಳಬೇಕು. ಕೂಡಲೇ ಭದ್ರಾ ಜಲಾಶಯದಿಂದ ಬಿಡುತ್ತಿರುವ ನೀರನ್ನು ಆಫ್ ಅಂಡ್ ಆನ್ ಮಾಡಿ ನೀರು ಬಿಡಬೇಕು, ಅಡಿಕೆ,ಬಾಳೆ, ತೆಂಗು ಬೆಳೆಗಳಿಗೂ ಹಾಗೂ ಭತ್ತ ಮತ್ತು ಇತರೆ ಬೆಳೆಗಳಿಗೆ ಬೇಸಿಗೆ ಬೆಳೆಗಳಿಗೂ ನೀರು ಹಾಯಿಸಬೇಕಾಗಿದೆ.

ವೆಸ್ಟ್ ಆಗುತ್ತಿರುವ ನೀರನ್ನು ಮರುಬಳಿಕೆ ಮಾಡಲು ಚೆಕ್ ಡ್ಯಾಮ್ ಮೂಲಕ ಪುನರ್ ಬಳಕೆ ಮಾಡಿಕೊಳ್ಳಬೇಕು.. ಜಲಾಶಯದ ಎರಡು ಬದಿ ಸಾವಿರಾರು ಎಕರೆ ಜಮೀನುಗಳು ನೀರಾವರಿಯಾಗಿದೆ. ಅಚ್ಚುಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ವೈಜ್ಞಾನಿಕ ಚಿಂತನೆಗಳನ್ನು ಮಾಡುತ್ತಿಲ್ಲ. ನಮ್ಮದು ರಾಜಕೀಯ ಚಳುವಳಿಯಲ್ಲ, ರೈತ ಚಳುವಳಿಯಾಗಿದೆ. ಈ ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾದಾಗ 10 ಹೆಚ್. ಪಿ. ಉಚಿತ ವಿದ್ಯುತ್ತನ್ನು ರೈತರಿಗೆ ನೀಡಿದರು. ಆದರೆ ಇಂದು ಕೇಂದ್ರ ಸರ್ಕಾರ ವಿದ್ಯುತ್ ಶಕ್ತಿ ತಯಾರಿಕೆಯನ್ನು ಖಾಸಗೀಕರಣ ಮಾಡುತ್ತಿದೆ, ಇದರಿಂದ ರೈತರು ಸಂಕಷ್ಟದಲ್ಲಿ ಸಿಲುಕುವರು. ಥರ್ಮಲ್ ವಿದ್ಯುತ್, ಹಾಗೂ ಸೋಲಾರ್ ವಿದ್ಯುತ್ತನ್ನು ಬಳಸಿ ಕೆರೆಕಟ್ಟೆ ಹಳ್ಳಗಳಿಂದ ನೀರನ್ನು ಹಾಯಿಸಬೇಕಾಗಿದೆ. ಮಳೆ ಕೊರತೆಯಿಂದ ಭದ್ರಾ ಜಲಾಶಯದಲ್ಲಿ ನೀರು ಕಡಿಮೆ ಆಗಿರುವುದರಿಂದ ಬೇಸಿಗೆ ಬೆಳೆಗಳಿಗೆ ಮತ್ತು ಮುಂದಿನ ವರ್ಷದ ಕುಡಿಯುವ ನೀರಿಗೂ ಸಹ ನೀರು ಉಳಿಸಿ ಕಾಯ್ದಿರಿಸ ಬೇಕಾಗಿರುವುದರಿಂದ ಕೂಡಲೇ ಭದ್ರ ಜಲಾಶಯದಲ್ಲಿ ನೀರು ಬಿಡುವುದನ್ನು ನಿಲ್ಲಿಸಲು ಭದ್ರ ನೀರಿಗಾಗಿ ರೈತರು ಚಳುವಳಿ ಮಾಡಿ ಸರ್ಕಾರದ ಗಮನಕ್ಕೆ ತರಬೇಕು.

ನಾನು ರೈತರ ಸಮಸ್ಯೆಗಳ ಕುರಿತು ಮತ್ತು ಭದ್ರಾ ಜಲಾಶಯದ ನೀರು ನಿಲುಗಡೆ ಮಾಡಲು ನೀರಾವರಿ ಮಂತ್ರಿಗಳು ಹಾಗೂ ಇಲಾಖೆಯವರೊಂದಿಗೆ ಮಾತನಾಡಿ ನೀರು ನಿಲುಗಡೆ ಮಾಡಲು ತಿಳಿಸುತ್ತೇನೆ ಈ ಕುರಿತು ಶುಕ್ರವಾರ ದಿನಾಂಕ- 1.-9-.2023 ರಂದು ಬೆಳಗ್ಗೆ 10.30 ಕ್ಕೆ ಭದ್ರಾ ಜಲಾಶಯದ ಮುಂದೆ,ಬಿ ಆರ್ ಪಿ,ಯಲ್ಲಿ ಭದ್ರಾವತಿ ತಾಲೂಕು, ಶಿವಮೊಗ್ಗ ತಾಲೂಕು, ತರೀಕೆರೆ ತಾಲ್ಲೂಕು, ಹಾಗೂ ಭದ್ರ ಅಚ್ಚುಕಟ್ಟು ಪ್ರದೇಶದ ರೈತರೆಲ್ಲರೂ ಬೃಹತ್ ಸಂಖ್ಯೆಯಲ್ಲಿ ಸೇರಿ ಚಳುವಳಿ ಮಾಡಬೇಕೆಂದು ಕರೆ ನೀಡಿದರು. ಎಲ್ಲರೂ ಚಳುವಳಿ ಮಾಡಬೇಕೆಂದು ಒಪ್ಪಿಗೆ ನೀಡಿದರು. ಈ ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಚ್ ವಿಶ್ವನಾಥ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ ಪಿ ಕುಮಾರ್, ಲಕ್ಕವಳ್ಳಿ ರೈತ ಸಂಘದ ಅಧ್ಯಕ್ಷರಾದ ನಂದಕುಮಾರ್, ಉಪಾಧ್ಯಕ್ಷರಾದ ಹರೀಶ್, ಮೂಡಲಗಿರಿಯಪ್ಪ, ಧನಪಾಲ್, ಲವಕುಮಾರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಶೇಖರ್ ಬಾಬು, ಪಾಪಣ್ಣ, ಮಾಜಿ ಕಾಡ ಸದಸ್ಯರಾದ ಪಿ ವಿನಾಯಕ, ಹಸಿರು ಸೇನೆ ಜಿಲ್ಲಾಧ್ಯಕ್ಷ ಜಗದೀಶ್ ನಾಯಕ, ಮುಂತಾದ ಹೋರಾಟಗಾರರು, ರೈತರು ನೂರಾರು ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button