ಶಿವಶಂಕರ ನಾಟಿಕಾರ ಸ್ಪೂರ್ತಿದಾಯಕ ವ್ಯಕ್ತಿ – ಪ್ರಶಸ್ತಿ ಪಡೆದರು.
ಕೋರವಾರ ಮೇ.02

ದೇವರ ಹಿಪ್ಪರಗಿ ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಡಾ, ಬಿ.ಆರ್ ಅಂಬೇಡ್ಕರ್ ರವರ ಜಯಂತ್ಯೋತ್ಸವದ ಅಂಗವಾಗಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ರಾಜ್ಯ ಮಟ್ಟದ ಸ್ಪೂರ್ತಿದಾಯಕ ವ್ಯಕ್ತಿ ಪ್ರಶಸ್ತಿ ಪಡೆದ ಶಿವಶಂಕರ, ನಿಂಗಪ್ಪ ನಾಟಿಕಾರ ಅವರು ಕೋರವಾರ ಗ್ರಾಮದವರು, ಅವರು ಈಗ ಯಾದಗಿರಿ ಜಿಲ್ಲೆಯಲ್ಲಿ ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮ ದರ್ಜೆಯ ಸಹಾಯಕರಾಗಿ ಸೇವೆ ಸಲ್ಲಿಸಿದರು.

ಅವರು ಉತ್ತರ ಸೇವೆ ಹಾಗೂ ಹಲವಾರು ಸಾಹಿತ್ಯ, ಭಾಷೆ ನೆಲ ಜಲ ಸಂಸ್ಕೃತಿ ಹಾಗೂ ಮೊದಲಾದ ಕ್ಷೇತ್ರಗಳಲ್ಲಿ ಅನ್ನುಬಾವ ಉಳ್ಳವರು ಇವರಿಗೆ ಗುರುತಿಸಿ ರಾಜ್ಯ ಮಟ್ಟದ ಸ್ಪೂರ್ತಿದಾಯಕ ವ್ಯಕ್ತಿ ಪ್ರಶಸ್ತಿ ಪತ್ರ ಹಾಗೂ ಶಾಲೂ ಹೊದಿಸಿ ನೆನಪಿನೆ ಕಾಣಿಕ್ಕೆ ನೀಡಿ ಗೌರವಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷರಾದ ಅರುಣ ಕೋರವಾರ, ಹಾಗೂ ಡಿ.ಎಸ್.ಎಸ್ ಸಂಘಟನೆಯ, ಪದಾಧಿಕಾರಿಗಳು, ಹಾಗೂ ಗಣ್ಯ ವ್ಯಕ್ತಿಗಳು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ