ಜನ ಗಣತಿ ಜಾತಿಯ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಛಲವಾದಿ ಎಂದು ಬರೆಸಲಿಕ್ಕಾಗಿ – ಸಮುದಾಯದವರಲ್ಲಿ ಆಗ್ರಹ.

ಬಳ್ಳಾರಿ ಮೇ.02

ಛಲವಾದಿ ಮಹಾಸಭಾ (ರಿ) 34/08-09 ಜಿಲ್ಲಾ ಸಮಿತಿ ಬಳ್ಳಾರಿ ಈಗ ಪತ್ರಿಕಾ ಗೋಷ್ಠಿಯ ಮುಖಾಂತರ ತಮ್ಮಲ್ಲಿ ಮನವಿ ಸದಾಶಿವ ಆಯೋಗ ಸೇರಿದಂತೆ ಸರ್ಕಾರದ ಸಂಪುಟ ಉಪ ಸಮಿತಿಯು ಮತ್ತೊಮ್ಮೆ ಸರಿಯಾಗಿ ಜಾತಿ ಗಣತಿ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡ ಬೇಕೆಂದು ಆದೇಶ ಮಾಡಿದ್ದು. ಈಗ ನಡೆಯುವ ಜಾತಿ ಗಣತಿಯಲ್ಲಿ ಸರಿಪಡಿ ಸೇರಿಸಿ ಕೊಳ್ಳಬೇಕಾಗಿದ್ದ ರಿಂದ ಸರ್ವೋಚ್ಚ ನ್ಯಾಯಾಲಯ ತೀರ್ಪಿನಂತೆ ಈಗಾಗಲೇ ಕರ್ನಾಟಕ ಸರ್ಕಾರ ಒಳ ಮೀಸಲಾತಿ ಜಾರಿ ಗೊಳಿಸಲು ಕಾರ್ಯ ಪ್ರವೃತ್ತವಾಗಿದೆ ಆದರೆ ಒಳ ಮೀಸಲಾತಿಯ ಹಂಚಿಕೆ ವಿಚಾರವಾಗಿ ಸರಿಯಾದ ಅಂಕಿ ಅಂಶಗಳು ಕಲೆ ಹಾಕಿ ಮೀಸಲಾತಿ ಹಂಚಿಕೆ ಮಾಡುವಲ್ಲಿ ಹಲವು ಸಮಸ್ಯೆಗಳು ಉಂಟಾಗಿದ್ದ ರಿಂದ ದಲಿತ ಸಮುದಾಯದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸಲು ರಾಜ್ಯ ಸರ್ಕಾರವು ಮುಂದಾಗಿದ್ದು ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿಗೆ ಸಮರ್ಪಕವಾಗಿ ಮೀಸಲಾತಿಯ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲು ಅವಕಾಶವಾಗುವಂತೆ ಆಯೋಗಕ್ಕೆ ಸರಿಯಾದ ಮಾಹಿತಿಯನ್ನು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದ್ದ ರಿಂದ ಈಗ ಗೌರವಾನ್ವಿತ ಡಾ, ಹೆಚ್ ಎನ್.ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದ ಶಿಫಾರಸ್ಸಿನಂತೆ ಒಳಮೀಸಲಾತಿ ಜಾರಿಗಾಗಿ ಶೀಘ್ರದಲ್ಲೆ ದಿನಾಂಕ 5/5/2025 ರಂದು ನಡೆಯಲಿರುವ ಜಾತಿ ಗಣತಿ ಕುರಿತು ಛಲವಾದಿ ಬಲಗೈ ಸಮುದಾಯದಲ್ಲಿ ಅರಿವು ಮೂಡಿಸಲು ಛಲವಾದಿ ಹೊಲೆಯ/ಬಲಗೈ ಸಂಬಂಧಿತ ಜಾತಿಗಳ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ, ಮಾಲಾ, ಮಾಲಾ ದಾಸರ, ಚನ್ನಾ ದಾಸರ, ಎಂಬುದು ಜಾತಿ ಅಲ್ಲ. ಜಾತಿ ಗಣತಿಯಲ್ಲಿ ಈ ಸಂಬಂಧ ಯಾವುದೇ ಜಾತಿಯ ಗಣತಿಯ ವೇಳೆ ಸ್ಪಷ್ಟವಾಗಿ ಛಲವಾದಿ ಬಲಗೈ ಜಾತಿಯನ್ನು ನಮೂದಿಸ ಬೇಕು. ಶೇ.100 ರಷ್ಟು ಯಾವುದೇ ಮನೆಗಳನ್ನು ಜಾತಿ ಗಣತಿಗೆ ಒಳಪಡಿಸ ಬೇಕು. ಬಲಗೈ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ತಪ್ಪದಂತೆ ಪ್ರತಿಯೊಬ್ಬರ ಗಣತಿಯ ದಾಖಲಾತಿಯಲ್ಲಿ ಜಾತಿಯನ್ನು ಸೇರಿಸಬೇಕು. ಇದಕ್ಕಾಗಿ ಛಲವಾದಿ ಸಮುದಾಯದ ಎಲ್ಲಾ ಮುಖಂಡರು, ಯುವಕರು ಸೇನೆಯಂತೆ ಕೆಲಸ ಮಾಡಬೇಕು. ಜಾತಿ ಗಣತಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ವರೆಗೂ ನಾವು ಯಾವುದೇ ಲೋಪದೋಷ ಆಗದಂತೆ ನೋಡಿ ಕೊಳ್ಳಬೇಕು. ಜಾತಿ ಗಣತಿ ನಮೂನೆಯಲ್ಲಿ ಜಾತಿ ಕಾಲಂನಲ್ಲಿ ಛಲವಾದಿ ಹೊಲೆಯ ಬಲಗೈ ಸಮುದಾಯಗಳು ಎಂದೇ ನಮೂದಿಸಿ, ಇದರ ಜೊತೆಗೆ ಬಲಗೈ, ಛಲವಾದಿ ಸಮುದಾಯ ಎಂದು ನಮೂದಿಸಿಬಹುದು. ನಂತರ ಉಪ ಜಾತಿ ಕೇಳಿದರೆ ಜಾತಿ ಕಾಲಂನಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಎಂದು ಜಾತಿ ಅಲ್ಲ. ಜಾತಿಯ ಕಾಲಂನಲ್ಲಿ ಬಲಗೈ/ಹೊಲೆಯ/ಛಲವಾದಿ ಸಮಯದಾಯ ಎಂದು ಹೇಳಿ, ತಪ್ಪದೆ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು . ಜಾತಿ ಗಣತಿ ಸಂಬಂಧ ಜಾತಿ ಗಣತಿಯಲ್ಲಿ ಎಲ್ಲರೂ ತಪ್ಪದೆ ಜಾತಿ ಗಣತಿಗೆ ಒಳಪಡಸಲೇ ಬೇಕು. ಇದು ನಮ್ಮ ಮುಖ್ಯವಾದ ಕೆಲಸವಾಗ ಬೇಕು ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಪ್ರಶ್ನೆ, ಛಲವಾದಿ ಸಮುದಾಯ ಇನ್ನೂ ಮಲಗಿದೆ, ಎಚ್ಚೆತ್ತು ಕೊಳ್ಳಬೇಕು. ಛಲವಾದಿ ಬಲಗೈ ಸಮುದಾಯ ಹಲವು ನ್ಯೂನತೆಗಳಿಂದ ಹಿಂದಿನ ವರದಿಗಳಲ್ಲಿ ನಮ್ಮ ಸಮುದಾಯವನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸಲಾಗಿದೆ. ಇದನ್ನು ಈ ಜಾತಿಯ ಗಣತಿಯಲ್ಲಿ ಸರಿಪಡಿಸಿ ಕೊಳ್ಳಬೇಕು. ಪ್ರಸ್ತುತ ಈ ಗಣತಿಯಲ್ಲಿ ಸರ್ಕಾರದ ಅಧಿಕಾರಿಗಳು ಸಮೀಕ್ಷೆಯ ಸರ್ವೆಯಲ್ಲಿ ಮನೆ ಮನೆಗೆ ಬಂದು ಗಣತಿಯ ಕಾರ್ಯಕ್ಕೆ ನೇಮಕ ಮಾಡುವಂತ ಅಧಿಕಾರಿಗಳಿಗೆ ನಮ್ಮ ನಗರ ವಾರ್ಡ್ ಪಟ್ಟಣ ಹೋಬಳಿ ಗ್ರಾಮಗಳ. ಹಳ್ಳಿಗಳಿಗೆ ಅಧಿಕಾರಿಗಳಿಗೆ ನಮ್ಮ ನಗರ ವಾರ್ಡ್ ಪಟ್ಟಣ ಹೋಬಳಿ ಗ್ರಾಮಗಳ. ಹಳ್ಳಿಗಳಗೆ ಹಾಗೂ ಇನ್ನಿತರ ಕಡೆಗಳಲ್ಲಿ ಬಂದಂತ ಸಮಯದಲ್ಲಿ ಅಧಿಕಾರಿಗಳ ಸಿಬ್ಬಂದಿಗಳು ಕೇಳಿದಾಗ ಜಾತಿಯನ್ನು ಬಲಗೈ ಛಲವಾದಿ ಎಂದು ಚಾಚು ತಪ್ಪದೇ ಬರಿಸಬೇಕು ಹಾಗೂ ಮೊಬೈಲ್ ಆಪ್ ಮೂಲಕವೂ ಗಣತಿಯ ಕಾರ್ಯ ನಡೆಯಲಿದ್ದು ಛಲವಾದಿ ಜನಾಂಗದ ಎಲ್ಲಾರು ಸೇರಿ ತಪ್ಪದೇ ಜನಗಣತಿಯ ಬಗ್ಗೆ ಮಾಹಿತಿ ಇಲ್ಲದಂತವರಿಗೆ ಚಲವಾದಿ ನೌಕರರ ಕಲ್ಯಾಣ ಸಂಘ ಬೆಂಬಲಿಸಿದ್ದು ಹಾಗೂ ನಿವೃತ್ತ ನೌಕರರು ವಿದ್ಯಾರ್ಥಿಗಳು ವಿದ್ಯಾವಂತರು ಸಹಕರಿಸ ಬೇಕು ಛಲವಾದಿ ಜನಾಂಗದ ಅವರಿಗೆ ಅರಿವು ಮೂಡಿಸಬೇಕೆಂದು ಸಿ.ಶಿವಕುಮಾರ್ ಜಿಲ್ಲಾ ಅಧ್ಯಕ್ಷರು ಛಲವಾದಿ ಮಹಾಸಭಾ, ಡಿ.ಸೂರಿ ಛಲವಾದಿ ಸಮಾಜದ ಹಿರಿಯ ಮುಖಂಡರು, ನಾಗಲಕೆರೆ ಗೋವಿಂದ ಛಲವಾದಿ ಸಮಾಜದ ಹಿರಿಯ ಮುಖಂಡರು, ಸಿ.ನರಸಪ್ಪ ಛಲವಾದಿ ಸಮಾಜದ ಮುಖಂಡರು, ಜೆ.ಎಸ್ ಶ್ರೀ ನಿವಾಸ ಛಲವಾದಿ ಸಮಾಜದ ಮುಖಂಡರು, ಓಂಕಾರಪ್ಪ.ಕಪಗಲ್ಲು. ಭೀಮವಾದ ದ.ಸಂಸ ರಾಜ್ಯ ಸಂ.ಸಂಚಾಲಕರು, ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಸಿ.ಹನುಮೇಶ್ ಕಟ್ಟಿಮನಿ ಜಿಲ್ಲಾ ಅಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಮಾನಯ್ಯ.ಬಿ ಗೋನಾಳ ಜಿಲ್ಲಾ ಉಪಾಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಛಲವಾದಿ ಪತ್ರಿಕೆ ಪ್ರಕಟಣೆಯ ಮುಖಾಂತರ ಛಲವಾದಿ. ಲೋಕೇಶ ಕಪಗಲ್ಲು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಛಲವಾದಿ ಮಹಾಸಭಾ, ವೆಂಕಟೇಶ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಛಲವಾದಿ ಮಹಾಸಭಾ, ಮಲ್ಲಿಕಾರ್ಜುನ.ಬಿ ಗೋನಾಳ ಸಂಘಟನಾ ಕಾರ್ಯದರ್ಶಿ ಛಲವಾದಿ ಮಹಾಸಭಾ, ಹಾಗೂ ತಿಪ್ಪೇಸ್ವಾಮಿ.ಸಂಗನಕಲ್ಲು ಛಲವಾದಿ ಮುಖಂಡರು. ಮಹಾಸಭಾ (ರಿ) ಜಿಲ್ಲಾ ಸಮಿತಿ ಬಳ್ಳಾರಿ ತಮ್ಮಲ್ಲಿ ಮನವಿ ಮಾಡಿ ಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button