ಅಕ್ರಮ ಕಲ್ಲು ಕ್ವಾರಿಯಲ್ಲಿ ವ್ಯಕ್ತಿಯ ಶವ ಪತ್ತೆ – ಸತ್ಯಾಸತ್ಯತೆಗಾಗಿ ಪೋಲಿಸ್ ತನಿಖೆ.
ಮಾನ್ವಿ ಮೇ.02

ಪಟ್ಟಣದ ಅನ್ನಮಯ್ಯ ತಾತನ ಬೆಟ್ಟದ ಹಿಂದೆ ಅಕ್ರಮವಾಗಿ ನಡೆಯುವ ಕಲ್ಲು ಕ್ವಾರಿಯಲ್ಲಿ ಗುರುವಾರ ವ್ಯಕ್ತಿಯ ಶವ ಪತ್ತೆಯಾಗಿದ್ದು. ಮಾನ್ವಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಜನತಾ ಹೌಸ್ ಬಡಾವಣೆಯಲ್ಲಿರುವ ಬೀಗರ ಮನೆಗೆ ಮೃತ ವ್ಯಕ್ತಿ ನಾಗರಾಜ (40) ಬಂದಿದ್ದನು. ನಾಗರಾಜ ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿದ್ದು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ವ್ಯಕ್ತಿ ನಾಗರಾಜನಿಗೆ ಸಂಜೆಯಾದರೆ ಸಾಕು ಕಣ್ಣು ಮಸುಕಾಗಿ ಕಾಣುತ್ತಿತ್ತು ಎಂದು ಪೋಷಕರು ಹಾಗು ನಾಗರಾಜನ ಬೀಗರು ತಿಳಿಸಿದ್ದಾರೆ. ಆದರೆ ನಾಗರಾಜ ಅನ್ನಮಯ್ಯ ತಾತನ ಬೆಟ್ಟಕ್ಕೆ ಬಂದು ಅಕ್ರಮವಾಗಿ ನಡೆಯುವ ಕಲ್ಲು ಗಣಿಗಾರಿಕೆ ಕ್ವಾರಿಯಲ್ಲಿ ಶವವಾಗಿ ಪತ್ತೆಯಾಗಿದ್ದ ರಿಂದ ಯಾವುದು ಸತ್ಯ ಎಂದು ಪೊಲೀಸ್ ತನಿಖೆಯಿಂದ ಬಯಲಿಗೆ ಬರಲಿದೆ ಯಾವುದೇ ಕ್ಷಣದಲ್ಲಾದರೂ ಹಾರ್ಟ್ ನ್ಯೂಸ್ ಗಾಗಿ ಕಾಯಿರಿ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ