ಹೆಸ್ಕಾಂ ಕ್ಯಾಶ್ ಕೌಂಟರ್ ಪ್ರಾರಂಭಿಸಲು ಆಗ್ರಹ.

ಕಲಕೇರಿ ಫೆಬ್ರುವರಿ.24

ತಾಳಿಕೋಟಿ ತಾಲೂಕಿನ ಕಲಕೇರಿಯೂ ಸುಮಾರು 20 ಸಾವಿರಜನಸಂಖ್ಯೆ ಹೊಂದಿದೆ. ಸ್ಥಳೀಯ ಹೆಸ್ಕಾಂ ಶಾಖೆಯು 18 ಹಳ್ಳಿಗಳ ಕೇಂದ್ರವಾಗಿದೆ. ಇಲ್ಲಿ ಪ್ರತಿ ತಿಂಗಳ 45-50 ಲಕ್ಷಗಳ ಬಿಲ್ ಹಣ ಸಂಗ್ರಹವಾಗುತ್ತಿದ್ದು. ವಿಜಯಪುರ ಜಿಲ್ಲೆಯ ಕೊನೆ ಹಳ್ಳಿಗಳಲ್ಲಿ ಒಂದಾಗಿರುವ ಈ ಗ್ರಾಮದಲ್ಲಿ ಸುಮಾರು 4 ವರ್ಷಗಳ ಹಿಂದೆ ಕ್ಯಾಶ್ ಕೌಂಟರ್ ನೂತನ ಕಟ್ಟಡ ಕಟ್ಟಲಾಗಿದ್ದು. ಇಲ್ಲಿಯವರೆಗೂ ಪ್ರಾರಂಭವಾಗದೇ ನೆನೆಗುದಿಗೆ ಬಿದ್ದಿದೆ. ಈ ನಿಮಿತ್ಯ ಅನೇಕ ಬಾರಿ ಸ್ಥಳೀಯ ಹೋರಾಟಗಾರರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಅದು ಉಪಯೋಗವಾಗಿಲ್ಲ.ಇಲ್ಲಿಯ ರೈತರು ಹಾಗೂ ಗ್ರಾಹಕರಿಗೆ ಯಾವುದೇ ಸಮಸ್ಯೆಯಾದರೆ ದೂರದ ಕೋರವಾರದ ಕಂದಾಯ ಶಾಖೆಗೆ ಹೋಗಿ ದೂರು ಸಲ್ಲಿಸಿ ಸಮಸ್ಯೆ ಬಗೆ ಹರಿಸಿ ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕಲಕೇರಿ ಹಾಗೂ ಸುತ್ತಲಿನ 18 ಹಳ್ಳಿಗಳಿಂದ ಸುಮಾರು 40-50 ಕಿ.ಮೀ ದೂರದಿಂದ ಕೋರವಾರಕ್ಕೆ ಹೋಗಿ ಬರಲು ಸಮಯಕ್ಕೆ ಸರಿಯಾದ ವಾಹನದ ವ್ಯವಸ್ಥೆ ಇರದೇ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಗ್ರಾಹಕರು ಕಲಕೇರಿಯಲ್ಲಿ ಕ್ಯಾಶ್ ಕೌಂಟ‌ರ್ ಪ್ರಾರಂಭವಾದರೆ ಅನುಕೂಲವಾಗುವುದು ಎನ್ನುತ್ತಿದ್ದಾರೆ.ಕಲಕೇರಿ ಶಾಖಾ ವ್ಯಾಪ್ತಿಗೆ ಸಂಬಂಧ ಪಟ್ಟಂತಹ ಕಲಕೇರಿ, ಆಸ್ತಿ, ಬೆಕಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳು ತಾಳಿಕೋಟಿ ತಾಲೂಕಿನಲ್ಲಿ ಬರುತ್ತವೆ. ಇಲ್ಲಿಯ ಜನಸಾಮಾನ್ಯರು ಪ್ರತಿ ನಿತ್ಯ ತಮ್ಮ ವ್ಯಾಪಾರ ವಹಿವಾಟುಗಳಿಗೆ ತಾಳಿಕೋಟಿಗೆ ಹೋಗಿ ಬರುತ್ತಾರೆ ಆದರೆ ವಿದ್ಯುತ್ ಇಲಾಖೆಯ ಸಮಸ್ಯೆ ಉಂಟಾದರೆ ದೇವರಹಿಪ್ಪರಗಿ ಉಪ ವಿಭಾಗಕ್ಕೆ ಹೋಗಿ ಬರ ಬೇಕಾದ ಅನಿವಾರ್ಯತೆ ಇದೆ. ಆದಕಾರಣ ಕಲಕೇರಿ ಶಾಖೆಯನ್ನು ತಾಳಿಕೋಟಿ ಉಪ ವಿಭಾಗಕ್ಕೆ ಸೇರಿಸಬೇಕೆಂದು ಜನ ಸಾಮಾನ್ಯರ ಬೇಡಿಕೆಯಾಗಿದೆ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button