ಮೊಳಕಾಲ್ಮುರು ಪಟ್ಟಣದಲ್ಲಿ ಹೌಸಿಂಗ್ ಬೋರ್ಡ್ ನಲ್ಲಿ ನೀರು ಬಿಡುವಲ್ಲಿ ದಿವ್ಯ ನಿರ್ಲಕ್ಷ್ಯ ತಳೆದ ಚೀಫ್ ಆಫೀಸರ್.

ಮೊಳಕಾಲ್ಮುರು ಸಪ್ಟೆಂಬರ್.28

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಗೃಹ ಮಂಡಳಿ ಏರಿಯಾದಲ್ಲಿ ಪಟ್ಟಣ ಪಂಚಾಯತಿ ನೀರು ಬಿಡುವ ವಾಟರ್ ಮ್ಯಾನ್ ಗಳು 15 ದಿವಸಕ್ಕೊಮ್ಮೆ ನೀರು ಬಿಡುತ್ತೇವೆ ಅದರಲ್ಲಿ ಸರಿಯಾಗಿ ನೀರು ಬರುವುದಿಲ್ಲ ಇದಕ್ಕೆ ನಾನೇನು ಮಾಡಬೇಕು ಕೇಳಿ ಹೋಗಿ ಎಂದು ಸಾರ್ವಜನಿಕರಿಗೆ ವಾಟರ್ ಮ್ಯಾನ್ ವಿರೋಧ ವ್ಯಕ್ತಪಡಿಸಿದ್ದಾರೆ ಈ ಗೃಹ ಮಂಡಳಿ ಏರಿಯಾದಲ್ಲಿ ಇರುವಂತಹ ಅಧಿಕಾರಿಗಳು ಮತ್ತು ಸಾರ್ವಜನಿಕರು ಕರೆಕ್ಟಾಗಿ ಪಟ್ಟಣ ಪಂಚಾಯತಿ ಅವರಿಗೆ ತೆರಿಗೆಯನ್ನು ವಿಧಿಸುತ್ತಾರೆ ಈ ಗೃಹ ಮಂಡಳಿ ಚರಂಡಿ ಬಗ್ಗೆ ಗಮನಹರಿಸಿಲ್ಲ ಸ್ವಚ್ಛತಾ ಕಾಪಾಡಿಲ್ಲ ಬ್ಲೀಚಿಂಗ್ ಪೌಡರ್ ಇದನ್ನೆಲ್ಲಾ ಹಾಕಿಲ್ಲ ಹಾವು ಚೇಳು ಮಂಡರಗುಬ್ಬಿ ಹೆಚ್ಚಾಗಿ ಕಂಡುಬರುತ್ತವೆ ಏರಿಯಾದಲ್ಲಿ ಸಾರ್ವಜನಿಕರು ಭಯ ಬಿತರಾಗಿದ್ದಾರೆ ಚರಂಡಿ ಗಲೀಜು ಜಾಸ್ತಿ ಆಗಿರುತ್ತದೆ ಪಟ್ಟಣ ಪಂಚಾಯತಿಯವರನ್ನು ಕೇಳಿದರೆ ನಾವೇನು ಮಾಡೋಣ ಅಂತ ನಮಗೆ ವಿರೋಧ ಮಾಡುತ್ತಾರೆ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಇಲ್ಲಿನ ಸಾರ್ವಜನಿಕರು ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ಅಲೆದಾಡುವಂತೆ ಆಗಿದೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸದೆ ಮತ್ತು ಇಲ್ಲಿ ಗೃಹ ಮಂಡಳಿ ಏರಿಯಾದಲ್ಲಿ ಒಂದು ಲಕ್ಷ ಲೀಟರ್ ನೀರು ಹಿಡಿಯುವ ಟ್ಯಾಂಕನ್ನು ಸಹ ಕಟ್ಟಿರುತ್ತಾರೆ ಸುಮಾರು 15 ವರ್ಷದಿಂದ ಈ ಟ್ಯಾಂಕನ್ನು ಉಪಯೋಗಿಸಿದೆ ಹಾಗೆ ಬಿಟ್ಟಿರುತ್ತಾರೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳು ಕ್ರಮವಹಿಸದೆ ಇರುಂತಹ ಅಧಿಕಾರಿಗಳನ್ನು ಶಾಸಕರು ಗಮನಹರಿಸಿ ಸರಿಯಾದ ರೀತಿಯಿಂದ ಇವರಿಗೆ ತಿಳುವಳಿಕೆ ಹೇಳಬೇಕಾಗಿ ಸಾರ್ವಜನಿಕರು ಹೇಳುವ ಮಾತುಗಳಾಗಿವೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button