ಮಾನವೀಯತೆ ಮೆರೆದ ಅಣ್ಣ ತಮ್ಮಂದಿರು.
ತಿಳಗೂಳ ಮಾರ್ಚ್.20

ಸಿಂದಗಿ ತಾಲೂಕಿನ ತಿಳಗೂಳ ಗ್ರಾಮದ ದೇವೇಂದ್ರ ಹುಲಂಕಿ ಹಾಗೂ ಅವರ ಅಣ್ಣನಾದ ಮಲ್ಲಿಕಾರ್ಜುನ್ ಹುಲಂಕಿ ತಮ್ಮ ಹೊಲದಲ್ಲಿ ಇರುವ ಬಾವಿಯ ನೀರನ್ನು ಪ್ರಾಣಿ ಪಕ್ಷಿಗಳ ಸಲುವಾಗಿ ನೀರನ್ನು ಹಳ್ಳಕ್ಕೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ದೇವಿಂದ್ರ ಅವರು ವೃತ್ತಿಯಲ್ಲಿ ಪೊಲೀಸ್ ಹುದ್ದೆ ಮಾಡುತ್ತಿದ್ದು ವೃತ್ತಿಯೊಂದಿಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಬಹಳ ಸರಳ ಸ್ವಭಾವದ ಮನುಷ್ಯರು ಜನರ ಬಗ್ಗೆ ಹಾಗೂ ಪ್ರಾಣಿ ಪಕ್ಷಿಗಳ ಬಗ್ಗೆ ಕಾಳಜಿ ಇರುವ ಇವರು ಇನ್ನೂ ಉನ್ನತ ಹುದ್ದೆಗಳನ್ನು ಪಡೆಯಲಿ ಎಂಬುದು ಗ್ರಾಮಸ್ಥರ ಹಾಗೂ ಸ್ನೇಹಿತರ ಆಸೆ ಅವರ ಜೊತೆಗೆ ಅಣ್ಣ ತಮ್ಮಂದಿರ ಸಾಮಾಜಿಕ ಹಾಗೂ ಪರಿಸರ ಕಾಳಜಿಗೆ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಇವರ ಕಾರ್ಯಕ್ಕೆ ಮುಕ್ತವಾಗಿ ಶ್ಲಾಘಿಸುತ್ತದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ