ಸೋಮವಾರದಿಂದ ಶ್ರೀ ಹುಲ್ಲಪ್ಪ ಚಂದಪ್ಪ – ದೇವರ ಜಾತ್ರೆ ಜರುಗುವುದು.

ಬಿದರಕುಂದಿ ಆ.29

ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಶ್ರೀ ಹುಲ್ಲಪ್ಪ ಚಂದಪ್ಪ ದೇವರ ಜಾತ್ರಾ ಮಹೋತ್ಸವವು ಆಗಸ್ಟ್ 31 ರಿಂದ ಸ, 4 ರ ವರೆಗೆ ಅದ್ದೂರಿಯಾಗಿ ನೆರವೇರುವುದು.

ಆ, 31 ರಂದು ಬೆಳಿಗ್ಗೆ 6=00 ಗಂಟೆಗೆ ದೇವರ ಅಭಿಷೇಕ ಮುಂಜಾನೆ 8=00 ಗಂಟೆಗೆ ಬಿದರಕುಂದಿ ಕ್ರಾಸಿನಿಂದ ಕುಂಭ ಮೆರವಣಿಗೆ ಹಾಗೂ ಹೊಸ (ತೇರಬಂಡಿ) ಆಗಮನ ಕರಡಿ ಮಜಲು ಹಾಗೂ ಜ್ಯೋಗತಿ ನೃತ್ಯ ಮತ್ತು ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ಬರಮಾಡಿ ಕೊಳ್ಳಲಾಗುತ್ತದೆ.

ನಂತರ ಸಂಜೆ 4=00 ಗಂಟೆಗೆ ಪುರುಷರಿಗೆ ಕುರ್ಚಿ ಸ್ಪರ್ಧೆ ಜರಗುವುದು, ನಂತರ ಸಂಜೆ 5=00 ಗಂಟೆಗೆ ಮಹಿಳೆಯರಿಗೆ ಕುರ್ಚಿ ಸ್ಪರ್ಧೆ ಜರುಗುವುದು, ಸ, 1-9-2026 ರಂದು ಬೆಳಗ್ಗೆ 10=00 ಗಂಟೆಗೆ ರಾಜ್ಯಮಟ್ಟದ ತೇರುಬಂಡಿ ಸ್ಪರ್ಧೆ ಇರುವುದು, ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (ಎಚ್ಎಫ್ ಡೀಲಕ್ಸ್ ಬೈಕ್) ಸೇರಿದಂತೆ ಒಟ್ಟು 8 ಬಹುಮಾನಗಳನ್ನು ಆಯೋಜಿಸಲಾಗಿದೆ.

ಅಂದೇ ರಾತ್ರಿ 10=00 ಗಂಟೆಗೆ 55 ಕೆಜಿ ತೂಕದ ಕಬಡ್ಡಿ ಪಂದ್ಯಾವಳಿಗಳು ಜರುಗುತ್ತದೆ, 2-9-2026 ರಂದು ಬೆಳಿಗ್ಗೆ 7=00 ಗಂಟೆಗೆ ಕಬಡ್ಡಿ ಪಂದ್ಯಾವಳಿಗಳು ಮುಂದುವರಿಯುವುದು.

ಬೆಳಿಗ್ಗೆ 10=00 ಗಂಟೆಗೆ ಟ್ರೆಂಡಿಂಗ್ ಸ್ಟಾರ್ ಮ್ಯೂಸಿಕ್ ಮೈಲಾರಿ ಅವರಿಂದ ಸಂಗೀತ ಕಾರ್ಯಕ್ರಮ ಜರುವುದು,3-9-2026 ರಂದು ಬೆಳಗ್ಗೆ 10 =00 ಗಂಟೆಗೆ ಪುರುಷ ರಿಂದ ಪುಟ್ಟಿ ಗಾಡಿ ರೇಸ್, ಮಧ್ಯಾಹ್ನ 12=00 ಗಂಟೆಗೆ ಒಂದು ಎತ್ತು ಒಂದು ಕುದುರೆ ಗಾಡಿರೇಸ ಇರುವುದು.

4-9-2026 ರಂದು ಬೆಳಿಗ್ಗೆ 10=00 ಗಂಟೆಗೆ ಚಕ್ಕಾ ಆಡುವ ಸ್ಪರ್ಧೆ ಜರುಗುವುದು, ಜಾತ್ರೆಯ ಅಂಗವಾಗಿ ಪ್ರತಿದಿನ ಅನ್ನ ಸಂತರ್ಪಣೆ ಇರುತ್ತದೆ, ಅಂದೇ ಸಂಜೆ 6=00 ಗಂಟೆಗೆ ಎಲ್ಲಾ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗುವುದು, ಎಂದು ಜಾತ್ರಾ ಕಮಿಟಿಯು ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಈ ಮೊಬೈಲ್ ನಂಬರಿಗೆ ಸಂಪರ್ಕಿಸಿರಿ =9945819520= 9448946523 =7411160500= 7349061917 ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button