ಶ್ರೀನರಹರೇಶ್ವರ ದೇವಸ್ಥಾನದಲ್ಲಿ ಮಲ್ಲಿಕಾರ್ಜನಸ್ವಾಮಿ ಭಜನಾ – ಮಂಡಳಿಯಿಂದ ವಿಶೇಷ ಭಜನೆ.
ಚಳ್ಳಕೆರೆ ಸೆ.13

ನಗರದ ಹೊರ ವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಶ್ರೀನರಹರೇಶ್ವರ ದೇವಸ್ಥಾನದಲ್ಲಿ ವಾಲ್ಮೀಕಿ ನಗರದ ಶ್ರೀಮಲ್ಲಿಕಾರ್ಜುನಸ್ವಾಮಿ ಭಜನಾ ಮಂಡಳಿಯ ವನಜಾಕ್ಷಿ ಪಂಚಾಕ್ಷರಿ, ಮಂಜುಳಾ ಬಸವರಾಜ್, ಗೀತಾ ಪ್ರಕಾಶ್, ಯಶೋಧಾ ದೇವರಾಜ್, ಭಜಂತ್ರಿ, ಸುಜಾತಾ ಮನೋಹರ್, ಮೃದಂಗ ಶ್ರೀನಿವಾಸ್ ನೇತೃತ್ವದಲ್ಲಿ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.

ಭಜನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಭಜನೆ ಹೇಳಿಕೊಟ್ಟ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀನರಹರೇಶ್ವರ ದೇವರಿಗೆ ಆರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು. ಭಜನೆಯಲ್ಲಿ ಅರ್ಚಕ ಏಳುಕೋಟಿ ರಾವ್, ಮಂಗಳಾ, ಪುಷ್ಪಲತಾ, ಲಾವಣ್ಯ, ಸವಿತಾ ತಿಪ್ಪೇರುದ್ರಪ್ಪ, ದಾಕ್ಷಾಯಣಿ, ಜಾನಕಿ, ಸುನೀತಾ, ಲತಾ, ಶಕುಂತಲಾ, ಜಯಮ್ಮ, ಶ್ರೀದೇವಿ, ಹಿತಾ ಪಟೇಲ್, ಸುಭದ್ರ, ಅನಿತಾ,ವಾಣಿ, ಕಾವ್ಯ, ವಿಜಯಲಕ್ಷ್ಮೀ, ಸುಜಾತಾ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಚಂದ್ರಕಲಾ, ರಾಮಚಂದ್ರಪ್ಪ, ಧನಂಜಯ, ರೇವಣಸಿದ್ದಯ್ಯ, ಅಶ್ವಿನಿ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

