ತಿಮ್ಮಪ್ಪ ಪೂಜಾರಿ ಯಿಂದ ಅಮಾಸೆಬೈಲು ರೆಟ್ಟಾಡಿ ಸರ್ಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಯತ್ನ – ದೂರು ದಾಖಲು.
ಕುಂದಾಪುರ:/ಉಡುಪಿ ಸೆ.20

ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಟ್ಟಾಡಿ ಪ್ರದೇಶದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿವೆ.
ಮುಖ್ಯಾಂಶಗಳು:-
ಅಕ್ರಮ ನಿರ್ಮಾಣದ ಗಂಭೀರ ಆರೋಪ:-
ರೆಟ್ಟಾಡಿಯ ಸರ್ಕಾರಿ ಜಾಗದಲ್ಲಿ ತಿಮ್ಮಪ್ಪ ಪೂಜಾರಿ ಎಂಬುವವರು ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ ಎಂದು ಅವರ ಸಂಬಂಧಿಯಾದ ನಾಗರಾಜ್ ಪೂಜಾರಿ ಅವರು ಆರೋಪಿಸಿದ್ದಾರೆ. ಅಲ್ಲದೆ, ನಿರ್ಮಿಸಲಾಗುತ್ತಿರುವ ಈ ಕಟ್ಟಡವನ್ನು ಉತ್ತರ ಪ್ರದೇಶದಿಂದ ಬಂದಿರುವ ಕುಟುಂಬ ವೊಂದಕ್ಕೆ ಬಾಡಿಗೆಗೆ ನೀಡುವ ಹುನ್ನಾರ ನಡೆಯುತ್ತಿದೆ ಎಂದೂ ಅವರು ದೂರಿದ್ದಾರೆ.
ಅಧಿಕಾರಿಗಳ ತಕ್ಷಣದ ಭೇಟಿ ಹಾಗೂ ಪರಿಶೀಲನೆ:-
ಈ ಕುರಿತಂತೆ ಸಾರ್ವಜನಿಕರಿಂದ ಹಾಗೂ ಸಂಬಂಧಿಕರಿಂದ ದೂರುಗಳು ಬಂದ ಬೆನ್ನಲ್ಲೇ, ಎಚ್ಚೆತ್ತ ಗ್ರಾಮ ಆಡಳಿತಾಧಿಕಾರಿ (ವಿಲ್ಲೇಜ್ ಅಕೌಂಟೆಂಟ್) ಚಂದ್ರಶೇಖರ್ ಅವರು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾನೂನು ಕ್ರಮಕ್ಕೆ ಕಳಕಳಿಯ ಮನವಿ:-
ಸಾರ್ವಜನಿಕ ಹಾಗೂ ಸರ್ಕಾರದ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿ ಅನಧಿಕೃತ ಚಟುವಟಿಕೆಗಳು ಹಾಗೂ ನಿರ್ಮಾಣಗಳನ್ನು ಕೈಗೊಳ್ಳುತ್ತಿರುವ ತಿಮ್ಮಪ್ಪ ಪೂಜಾರಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸ ಬೇಕೆಂದು ದೂರುದಾರರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

