ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಹೆಸರಲ್ಲಿ ಹಣ ವಸೂಲಿ – ಸೂಕ್ತ ಕ್ರಮಕ್ಕೆ ಆಗ್ರಹ.
ಹೊಸಪೇಟೆ ಅಕ್ಟೋಬರ್.6

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ಸಭೆಯ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳು ಹಾಗೂ ತೊಂದರೆಗಳ ಕುರಿತು ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಲಾಗಿತ್ತು.ಈ ಸಂದರ್ಭದಲ್ಲಿ ನಗರ ಸಭೆ ಪೌರಾಯುಕ್ತರ ನೇತೃತ್ವದಲ್ಲಿ ಪಟ್ಟಣ ಮಾರಟ ಸಮಿತಿ ಸಭೆ ಸಹ ಕರೆಯಲಾಗಿತ್ತು.ಬೀದಿ ಬದಿ ವ್ಯಾಪಾರಿಗಳ ಧ್ವನಿಯಾಗಿ ಕೆಲಸ ಮಾಡಬೇಕಾಗಿದ್ದ ಪಟ್ಟಣ ಸಮಿತಿ ಸದಸ್ಯರು ಗೈರು ಹಾಜರಾಗಿದ್ದರು ಎಂದು ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವೇ ಸರಿ, ಸಮಿತಿ ರಚಿಸಿ 4 ವರ್ಷಗಳ ಕಳೆದರು ಒಮ್ಮೆಯೂ ಪಟ್ಟಣ ಸಮಿತಿ ಸದಸ್ಯರನ್ನು ಸಭೆ ಕರೆಸಿ ಬೀದಿ ವ್ಯಾಪಾರಸ್ಥರ ಸಮಸ್ಯೆ ಬಗ್ಗೆ ಚರ್ಚಿಸಲು ಇಲ್ಲ, ಪಟ್ಟಣ ಸಮಿತಿ ಸದಸ್ಯರು ಕೇವಲ ನೆಪಕ್ಕೆ ಮಾತ್ರವೋ ಅಸಲಿಗೆ ಸಮಿತಿ ಇದೆಯೋ ಇಲ್ಲವೋ ಎಂಬುದು ಸಹ ವ್ಯಾಪಾರಸ್ಥರಿಗೆ ಗೊತ್ತಿಲ್ಲ. ಹಾಗೂ ಅಕ್ರಮವಾಗಿ ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೌರಾಯುಕ್ತರಿಗೆ ಒತ್ತಾಯಿಸುವಾಗ ನಗರ ಸಭೆಯ ಚೀಫ್ ಆಫೀಸರ್ ರವರು ನಗರ ಸಭೆಯೇ ರಾಜ್ಯದಲ್ಲಿ ಹೊಸಪೇಟೆ ನಗರ ಸಭೆ ಎಂದರೇ ಕಪ್ಪು ಚುಕ್ಕೆ ಬಂದಿದೆ ಎನ್ನುವ ಹಾರಿಕೆ ಉತ್ತರ ನಿಜಕ್ಕೂ ಬೇಸರವಾಗುತ್ತಿದೆ, ಬಡ ಬೀದಿ ಬದಿ ವ್ಯಾಪಾರಿಗಳ ಹತ್ತಿರ ಅಕ್ರಮ ಹಣ ವಸೂಲಿ ಮಾಡುವುದರ ಬಗ್ಗೆ ಮಾಹಿತಿ ಇದ್ದರೂ ಸಹ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಜಗರುಗಿಸದಿರುವುದರಿಂದ ಅಧಿಕಾರಿಗಳ ಮೇಲೆ ಸಂಶಯ ಉಂಟಾಗುತ್ತಿದೆ, ಹಣ ವಸೂಲಿ ಮಾಡುವರಿಗೇ ಕುಮ್ಮಕ್ಕು ನೀಡಿದಂತಾಗುತ್ತದೆ.ಹೀಗಿರುವಾಗಕರ್ನಾಟಕ ರಾಜ್ಯ ರಸ್ತೆ ಬೀದಿ ಬದಿ ವ್ಯಾಪಾರಿಗಳ ಮಹಾಮಂಡಳ (ರಿ) ವಿಜಯನಗರ ಜಿಲ್ಲೆ ಜಿಲ್ಲಾಧ್ಯಕ್ಷರಾದ ನವೀನ್ ಕುಮಾರ್ ರವರು ಮಾನ್ಯ ಪೌರಾಯುಕ್ತರಿಗೆ ಹಲವು ಸಮಸ್ಯೆಗಳು ಹಾಗೂ ಅನುಭವಿಸುತ್ತಿರುವ ತೊಂದರೆಗಳು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಬಗ್ಗೆ ಮನದಟ್ಟು ಮಾಡಿ ಕೊಡಲಾಯಿತು. ಒತ್ತಾಯ: ಆಯಾ ನಗರ ಸಭೆ, ಪುರ ಸಭೆಯ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಗರ ವಾಸಿಗಳಿಗೆ ವ್ಯಾಪಾರ ಮಾಡಿ ಕೊಡಲು ಮೊದಲ ಆದ್ಯತೆ ನೀಡಬೇಕು.ನಿಜವಾದ ಬೀದಿ ಬದಿ ವ್ಯಾಪಾರಿಗಳನ್ನು ಸಮೀಕ್ಷೆಯ ಮೂಲಕ ಗುರುತಿಸಿ ಸಂಘಟನೆ ಮುಖಾಂತರ ಸ್ವಚ್ಚತೆ ಮತ್ತು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು ಎಂದು ಪ್ರಮಾಣ ಪತ್ರವನ್ನು ವಿತರಿಸಲು ಮನವಿ ಮಾಡಲಾಯಿತು.ಅನಧಿಕೃತ ಇಲ್ಲ ಸಲ್ಲದ ಬೀದಿ ವ್ಯಾಪಾರಿಗಳ ಸಂಘಟನೆ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲು ತಿಳಿಸಿದ್ದೇವೆ.ಶೀಘ್ರದಲ್ಲೇ ವ್ಯಾಪಾರ ವಲಯವನ್ನು ನಿಮಾರ್ಣದ ಕುರಿತು; ವೈಜ್ಞಾನಿಕವಾಗಿ ಅತ್ಯುತ್ತಮವಾದ ಸಾರ್ವಜನಿಕರಿಗೇ ತೊಂದರೆ ಆಗದಂತೆ ಇರುವ ಸ್ಥಳವನ್ನು ಆಯ್ಕೆ ಮಾಡುವಾಗ ಸಂಘಟನೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುವ ಮೂಲಕ ಸ್ಥಳ ನಿಗದಿ ಪಡಿಸಲು ಮನವಿ ಮಾಡಲಾಗಿದೆ.ಪೌರಾಯುಕ್ತರು ಶೀಘ್ರದಲ್ಲೇ ಪಟ್ಟಣ ಮಾರಟ ಸಮಿತಿ ರಚನೆ ಆದೇಶ ಹೊರಡಿಸಿ ಎಂದು ಮನವಿ ಮಾಡಿದ್ದೇನೆ.ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಜಿಲ್ಲಾ ಗೌರವಾಧ್ಯಕ್ಷರು ದೀಪಕ್ ಕುಮಾರ್ ಸಿಂಗ್ ಹಾಗೂ ತಾಲೂಕು ಅಧ್ಯಕ್ಷರಾದ ಬಷೀರ್, ಜಿಲ್ಲಾಧ್ಯಕ್ಷರು ನವೀನ್ ಕುಮಾರ್,ದಸ್ತಗೀರ್, ರಾಜಾಭಕ್ಷಿ, ದೇವರಾಜ್, ರಾಮು, ಸವಿತಮ್ಮ್, ಚಂದ್ರಶೇಖರ್, ಹಸೀನಾ ಬಾನು, ಶ್ರೀಕಾಂತ್ ಹಾಗೂ ತಾಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ