ಅತಿಥಿ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಚಡಚಣ ಜೂನ್.12

ಚಡಚಣ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ವತಿಯಿಂದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೇಮಕಾತಿಯಲ್ಲಿ ಉಂಟಾಗಿರುವ ತೊಡಕುಗಳನ್ನು ಬಗೆಹರಿಸುವಂತೆ ಹಾಗೂ ನೇಮಕಾತಿಯಲ್ಲಿ ಮೆರಿಟ್ ಪದ್ಧತಿ ಕೈ ಬಿಟ್ಟು ಮೊದಲು ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಬೇಕೆಂದು ವಿನಂತಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ತಾಲೂಕ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಎಳಮೇಲಿ ಮಾತನಾಡುತ್ತಾ ಅತಿಥಿ ಶಿಕ್ಷಕರು ಹಲವಾರು ವರ್ಷಗಳಿಂದ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಾ ಬಂದಿದ್ದೇವೆ ಈಗ ಒಮ್ಮೆಲೆ ನಮ್ಮನ್ನು ನೇಮಕಾತಿಯಿಂದ ದೂರ ಇಡಲಾಗಿದೆ ಹೀಗಾಗಿ ಅತಿಥಿ ಶಿಕ್ಷಕರು ಅತಂತ್ರ ಪರಿಸ್ಥಿತಿಯಲ್ಲಿದ್ದೇವೆ ಸೇವೆಯಿಂದ ಹೊರಗಡೆ ಎಲ್ಲರನ್ನು ಮುಂದಿನ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಬೇಕೆಂದು ವಿನಂತಿಸಿದರು. ಗೌರವ ಅಧ್ಯಕ್ಷರಾದ ಟಿವಿ ಕುಲಕರ್ಣಿ ಮಾತನಾಡಿ ಕೆಲವು ಅತಿಥಿ ಶಿಕ್ಷಕರ ಜೀವನ ಇದರ ಮೇಲೆ ಅವಲಂಬಿತವಾಗಿದೆ ದಯಮಾಡಿ ಮಾನವೀಯ ದೃಷ್ಟಿಯಿಂದ ಅವರಿಗೆ ವ್ಯವಸ್ಥೆ ಕಲ್ಪಿಸಿ ಎಂದು ಕೋರಿದರು ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿ ಮುಂದಿನ ನೇಮಕಾತಿಯಲ್ಲಿ ಪರಿಗಣನೆ ಮಾಡುವುದಾಗಿ ಹಾಗೂ ತಮ್ಮೆಲ್ಲರ ಬಗ್ಗೆ ನನಗೆ ಅಪಾರ ಕಾಳಜಿ ಇದ್ದು ಮಾನವೀಯತೆ ದೃಷ್ಟಿಯಿಂದ ನೇಮಕಾತಿಯಲ್ಲಿ ಪರಿಗಣಿಸುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸಂಜೀವ್ ಕಟಕದೊಂಡ ಜಟ್ಟಿಂಗರಾಯ ಗಿಣಿ ಹಾಗೂ ಇನ್ನಿತರ ಅತಿಥಿ ಶಿಕ್ಷಕರು ಭಾಗವಹಿಸಿದ್ದರು