ಎಸ್.ಎ.ವಿ.ಟಿ ಹಾಗೂ ಪಾಲಿಟೆಕ್ನಿಕ್ ಕಾಲೇಜ್ ಗಳ ಕೊಠಡಿಗಳ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದ – ಶಾಸಕ ಡಾ. ಶ್ರೀ ನಿವಾಸ್.ಎನ್.ಟಿ

ಕೂಡ್ಲಿಗಿ ಮಾರ್ಚ್.3

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ  ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಗೆ  ಹೆಚ್ಚುವರಿ ಕೊಠಡಿಗಳ ನಿರ್ಮಾಣ ಅಂಗವಾಗಿ ಮಾನ್ಯ ಶಾಸಕರು ಶನಿವಾರ ರಂದು ” ಭೂಮಿಪೂಜೆ ”  ನೆರವೇರಿಸಿದರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬೋಧನ ವಿಷಯವಾಗಿ ಮಾತನಾಡಿದರು.‌ ಹಾಗೂ ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ  ಹೆಚ್ಚುವರಿಯಾಗಿ ಅನೇಕ ವಿದ್ಯಾರ್ಥಿಗಳು ಉನ್ನತ  ಶಿಕ್ಷಣಕ್ಕಾಗಿ ಬೇರೆ ಊರಿಗೆ ಹೋಗಿ ವಿದ್ಯಾಭ್ಯಾಸ ಮಾಡಲು ಹೋಗುವವರು ನಮ್ಮ ಕ್ಷೆತ್ರದ ವಿದ್ಯಾರ್ಥಿಗಳು ನಮ್ಮ ಕ್ಷೆತ್ರದಲ್ಲಿ ಓದಲಿ ಎನ್ನುವ ಉದ್ದೇಶದಿಂದ ಕಾಲೇಜುಗಳಿಗೆ ಬೇಕಾಗುವ ಬೋಧನಾ ಕೊಠಡಿಗಳನ್ನು ಒದಗಿಸಿ ಕೊಡಲು ಈ ದಿನ ಬೆಳಗಿನ ಜಾವ ಮಾನ್ಯ  ಉನ್ನತ ಶಿಕ್ಷಣ ಸಚಿವರ ಜೊತೆಗೆ ಚರ್ಚಿಸಿದಾಗ ಅವರು ಸಂತಸ ವ್ಯಕ್ತಪಡಿಸಿ ಶುಭಾಶಯಗಳು ತಿಳಿಸಿದ್ದಾರೆ  ಎಂದರು.  

ಪಟ್ಟಣ ದಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಕಾಲ್ನಡಿಗೆಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ, ಊಟ, ವಸತಿ ಮತ್ತು ಇನ್ನಿತರ ಸೌಕರ್ಯಗಳನ್ನು  ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ತಿಳಿಸಿದರು.‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕೆಲವು ಭಾಗದಲ್ಲಿ  ಕಾಂಪೌಂಡ್ ನಿರ್ಮಾಣ ಕುಂಠಿತ ವಾಗಿರುವುದಕ್ಕೆ ಭೂಮಿ ಸಮಸ್ಯೆಯ ತೊಡಕು ಆಗಿರುವುದನ್ನು ಆಲಿಸಿ  ಕೂಡಲೇ ಅಧಿಕಾರಿಗಳಿಗೆ ಗಮನಕ್ಕೆ ತಂದು  ಸರ್ವೇ ಮಾಡಿಕೊಡಲು ಹೇಳಿದರು.  ಈ ಸಂದರ್ಭದಲ್ಲಿ ಆಯಾ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು, ವಿದ್ಯಾರ್ಥಿಗಳು, ಪತ್ರಕರ್ತರು ಪಕ್ಷದ ಕಾರ್ಯ ಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button